ಸುರಕ್ಷಿತ ಸಂಚಾರಕ್ಕೆ ಇಲ್ಲಿ ನಿಷೇಧ ?

www.bantwalnews.com

Editor: Harish Mambady

ಎಲ್ಲದಕ್ಕೂ ಮಳೆಯನ್ನು ದೂರಿ ಪ್ರಯೋಜನವಿಲ್ಲ.

ಜಾಹೀರಾತು

 

ಡೇಂಜರ್.

ಬಿ.ಸಿ.ರೋಡ್ ಸಹಿತ ಬಂಟ್ವಾಳ ತಾಲೂಕಿನ ಹಲವು ರಸ್ತೆಗಳಲ್ಲಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಇಲ್ಲ. ಓಡಾಟವೂ ಅಸಾಧ್ಯ. ಹೀಗೊಂದು ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಬೇಸಗೆಯಲ್ಲಿ ಬಿ.ಸಿ.ರೋಡಿನ ಫ್ಲೈಓವರ್ ಅಡಿಯಲ್ಲಿ ಘೋಷಣೆಗಳನ್ನು ಕೂಗುತ್ತಾ ಭಯಂಕರ ಭಾಷಣ ಮಾಡುತ್ತಿದ್ದವರು ಕಾಣಿಸುತ್ತಿಲ್ಲ. ಅಲ್ಲಿ ಕೊಡೆ ಹಿಡಿದು ನಡೆಯುವವರು ಮನುಷ್ಯರು, ಅವರಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು ಇದ್ದಾರೆ, ಇವರ ಪರ ಸಮಾನ ಮನಸ್ಕರೂ ಒಟ್ಟಾಗಿ ಫ್ಲೈಓವರ್ ಅಡಿ ಘೋಷಣೆ ಕೂಗಲು ನಿಲ್ಲುತ್ತಿಲ್ಲ. ಏಪ್ರಿಲ್, ಮೇ ತಿಂಗಳಲ್ಲಿ ದೇಶದ ವೈವಿಧ್ಯಮಯ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದವರು ಬಿ.ಸಿ.ರೋಡಿನ ವಿಚಾರಗಳ ಕುರಿತು ಮಾತನಾಡಲು ಹೊರಡೋದೇ ಇಲ್ಲ ಎಂಬಿತ್ಯಾದಿ ಬೇಸರ ಇಲ್ಲಿನ ಜನರಿಗಿದೆ. ಇಡೀ ಬಿ.ಸಿ.ರೋಡ್ ಪೇಟೆ ನೋಡಲು ಲಾಯಕ್ಕಿಲ್ಲ ಎಂಬಂತಾಗಿದೆ.

ಇದು ಪೇಟೆ ಮಾತಾದರೆ, ಹಳ್ಳಿಗಳ ಸ್ಥಿತಿ ಭಿನ್ನವೇನಲ್ಲ.

ರಸ್ತೆಯಂಚಿನ ಮಣ್ಣು ಜಾರುತ್ತಲೇ ಇದೆ. ಅಪೂರ್ಣ ಕಾಮಗಾರಿ ಕಾರಣವೋ ಗೊತ್ತಿಲ್ಲ. ಆದರೆ ಮನೆಯಿಂದ ಹೊರಗೆ ನಡೆದುಕೊಂಡು ಹೋದರೂ ಸುರಕ್ಷಿತವಾಗಿ ಮರಳಿ ಬಂದರೆ ಅದೇ ವಿಷೇಷ ಎಂಬ ವಾತಾವರಣ. ಶಾಲೆ ಮಕ್ಕಳು, ನಿತ್ಯಸಂಪಾದನೆಗೆ ತೆರಳುವವರು ಪ್ರಯಾಸಪಡುತ್ತಿದ್ದಾರೆ. ನಮ್ಮಿಂದ ಆಯ್ಕೆಯಾದವರು ನಮ್ಮ ಪರವಾಗಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಪುರಸಭೆ, ವಿಧಾನಸಭೆ, ಲೋಕಸಭೆಗಳಲ್ಲಿ ಪ್ರತಿನಿಧಿಸುವವರು, ನಮ್ಮದೇ ತೆರಿಗೆಯ ಹಣವನ್ನು ಅನುದಾನ ಎಂದು ವಿಂಗಡಿಸಿ ಕೊಡುವವರು ಇತ್ತ ಗಮನ ಹರಿಸಿದರೆ ಸಮಸ್ಯೆಗೆ ಸಣ್ಣ ಪರಿಹಾರ ದೊರಕಬಹುದು.

ಎಲ್ಲದಕ್ಕೂ ಮಳೆಯನ್ನು ದೂರಿ ಪ್ರಯೋಜನವಿಲ್ಲ.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಸುರಕ್ಷಿತ ಸಂಚಾರಕ್ಕೆ ಇಲ್ಲಿ ನಿಷೇಧ ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*