ವಿಟ್ಲ

ಯೋಗಿಗಳಾಗೋಣ… ಆದರ್ಶ ರಾಷ್ಟ್ರ ನಿರ್ಮಿಸೋಣ – ಒಡಿಯೂರು ಶ್ರೀ

ಯೋಗ ದಿನಾಚರಣೆಯನ್ನು ವಿಶ್ವದಾದ್ಯಂತ ನಡೆಸುವಂತೆ ಪ್ರಚೋದಿಸಿದ, ವಿಶ್ವವನ್ನೇ ನಿಬ್ಬೆರಗಾಗಿ ನೋಡುವಂತೆ ಮಾಡಿದ ಕೀರ್ತಿ ಮಾನ್ಯ ಪ್ರಧಾನಮಂತ್ರಿ ಮೋದಿಜಿಯವರಿಗೆ ಸಲ್ಲಬೇಕು.

ಜಾಹೀರಾತು

ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿಕೊಂಡು ಬಂದಿರುವುದು ಅರ್ಥಪೂರ್ಣವೇ ಸರಿ. ಯೋಗ ಎನ್ನುವುದಕ್ಕೆ ಸೇರುವುದು, ಕೂಡುವುದು ಎನ್ನುವ ಅರ್ಥವಿದೆ. ಜೀವನು ದೇವನೊಂದಿಗಿನ ಅನುಸಂಧಾನವೂ ಹೌದು. ಮನುಷ್ಯನ ಬದುಕಿನ ಲಕ್ಷ್ಯ ಸಾಕ್ಷಾತ್ಕಾರವೇ. ಯೋಗಾಸನ, ಪ್ರಾಣಾಯಾಮವು ಮನುಷ್ಯನ ಆರೋಗ್ಯವನ್ನು ಆಯುಷ್ಯವನ್ನು ವೃದ್ಧಿಸುತ್ತದೆ. ಮನಸ್ಸು ಮತ್ತು ಶರೀರದ ಸ್ವಾಸ್ಥ್ಯವನ್ನು ಕಾಪಿಡುತ್ತದೆ.

ಜೊತೆಗೆ ಆಹಾರ-ವಿಹಾರ ಇತ್ಯಾದಿ ಇದಕ್ಕೆ ಪೂರಕವಾಗಿರಬೇಕು. ಸಾತ್ವಿಕತೆಯಿಂದ ಸಾರ್ಥಕ ಬದುಕು ಎಂಬಂತೆ ನಾವು ರೂಢಿಸಿಕೊಳ್ಳಬೇಕು. ಯೋಗಾಸನ, ಪ್ರಾಣಾಯಾಮ ನಿರಂತರವಾಗಿ ಮಾಡುತ್ತಿದ್ದರೆ ಇದೆಲ್ಲ ಸಾಧ್ಯ.

ಪತಂಜಲಿ ಮಹರ್ಷಿಯನ್ನು ಈ ಬಗ್ಗೆ ಕೊಂಡಾಡಬೇಕು. ಅಷ್ಟಾಂಗ ಯೋಗದ ಮಾರ್ಮಿಕ ಸತ್ಯವನ್ನು ತೆರೆದಿಟ್ಟ ಕೀರ್ತಿ ಇವರದು. ಆರೋಗ್ಯಪೂರ್ಣ ಸಮಾಜನಿರ್ಮಾಣದಲ್ಲಿ ಯೋಗದ ಪಾತ್ರ ಮಹತ್ತರವಾದುದು. ಶ್ವಾಸ ಇರುವಾಗಲೇ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ವಿಶ್ವದ ಶ್ವಾಸವೆನಿಸಿದ ಅಧ್ಯಾತ್ಮಿಕತೆ ಭಾರತದ ಅಂತರ್ಯ. ಅರಿತು ಬಾಳುವ ಬದುಕು ನಮ್ಮದಾದಾಗ ಸಮಾಜದ ಕೊಂಡಿಯಾಗುತ್ತೇವೆ. ಇಲ್ಲಿ ಅಡಗಿದೆ ಮಾನವೀಯ ಮೌಲ್ಯಗಳು.

ಜಾಹೀರಾತು

– ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಒಡಿಯೂರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ