ಅಕ್ರಮವಾಗಿ ಕಸಾಯಿಖಾನೆ ನಡೆಸಲಾಗುತ್ತಿದೆ ಎಂಬ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ಪೋಲೀಸರ ತಂಡ 2.10 ಕೆಜಿ ಮಾಂಸ, ಒಂದು ದನವನ್ನು ವಶಕ್ಕೆ ಪಡೆದುಕೊಂಡು ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಟ್ವಾಳ ಸಮೀಪ ಲೊರೆಟ್ಟೋ ಪಕ್ಕದ ಟಿಪ್ಪುನಗರದಲ್ಲಿರುವ ಕಸಾಯಿಖಾನೆಗೆ ದಾಳಿ ನಡೆಸಿದ ಸಂದರ್ಭ ಲೊರೆಟ್ಟು ನಿವಾಸಿಗಳಾದ ಆದಂ, ಅಹಮ್ಮದ್ ಬಾವ, ನಾಸೀರ್, ಮಹಮ್ಮದ್ ಮುಸ್ತಾಫಾ, ನಾಸೀರ್ ಹುಸೈನ್ , ಲತೀಫ್ ಎಂಬವರನ್ನು ಬಂಧಿಸಲಾಯಿತು ಎಂದು ಬಂಟ್ವಾಳ ಪೊಲೀಸರು ತಿಳಿಸಿದ್ದಾರೆ.
ಜಾಹೀರಾತು
ಕಾರ್ಯಚರಣೆಯಲ್ಲಿ ಬಂಟ್ವಾಳ ನಗರ ಠಾಣಾ ಎಸ್ ಐ ಚಂದ್ರಶೇಖರ್, ಅಪರಾಧ ವಿಭಾಗದ ಎಸ.ಐ.ಹರೀಶ್, ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ.ಪ್ರಸನ್ನ, ಬಂಟ್ವಾಳ ನಗರ ಠಾಣಾ ಎ.ಎಸ್.ಐ. ಸಂಜೀವ, ಸಿಬ್ಬಂದಿಗಳಾದ ಕೃಷ್ಣ ಕುಲಾಲ್, ಸುರೇಶ್ ಪಡಾರ್, ನಾಗರಾಜ್, ಸುರೇಶ್ ಬಿ. ಮಲಿಕ್ ಸಾಬ್, ರಾಘವೇಂದ್ರ, ನಜೀರ್ ಮತ್ತು ಚಾಲಕ ಸಂಪತ್ ಭಾಗವಹಿಸಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಅಕ್ರಮ ಕಸಾಯಿಖಾನೆಗೆ ದಾಳಿ, 2.10 ಕೆಜಿ ಮಾಂಸ, ದನ, ಆರು ಮಂದಿಯ ಬಂಧನ"