ಅಂತೂ, ಇಂತೂ ನೀರು ಬಂತು!!!

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು

ಸತತ ಏಳು ದಿನಗಳ ಬಳಿಕ ಬಿ.ಸಿ.ರೋಡಿನ ನಲ್ಲಿಯಲ್ಲಿ ನೀರು ಬರಲಾರಂಭಿಸಿದೆ. ಬೆವರು ಹರಿಸಿ ಕೆಲಸ ಮಾಡಿ, ಕೊಳವೆ ರಿಪೇರಿ ಮಾಡಿ ನೀರು ಹರಿಸಲು ಭಗೀರಥ ಯತ್ನವನ್ನೇ ಮಾಡಿದ ಕಾರ್ಮಿಕರಿಗೆ ಹ್ಯಾಟ್ಸಾಫ್ ಹೇಳಿರುವ ನಾಗರಿಕರು, ಒಂದು ವಾರ ನೀರಿಲ್ಲದಂಥ ಪರಿಸ್ಥಿತಿ ನಿರ್ಮಾಣವಾಗದಂತೆ ಮುಂಜಾಗರೂಕತಾ ಕ್ರಮವನ್ನೂ ಕೈಗೊಳ್ಳಬೇಕು ಎಂದು ಆಡಳಿತಕ್ಕೆ ಕಿವಿಮಾತು ಹೇಳಿದ್ದಾರೆ.

ಕೊಳವೆಯಲ್ಲಿ ಬಿರುಕು ಉಂಟಾಗಿ ಬಿ.ಸಿ.ರೋಡ್ ಪರಿಸರದಲ್ಲಿ ಕಳೆದ ಏಳು ದಿನಗಳಿಂದ ಉಂಟಾದ ನೀರಿನ ಸಮಸ್ಯೆಗೆ ಮುಕ್ತಿ ದೊರಕಿದೆ. ಫ್ಲೈಓವರ್ ಅಡಿಯಲ್ಲಿ ಇದ್ದ ಕೊಳವೆಯೊಂದರಲ್ಲಿ ಬಿರುಕು ಉಂಟಾಗಿದ್ದನ್ನು ಆರು ದಿನಗಳ ಸತತ ಹುಡುಕಾಟದ ಬಳಿಕ ಪತ್ತೆಹಚ್ಚಿನ ಪುರಸಭೆಯ ತಂಡ, ಅದನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದೆ. ಸಂಜೆ 5.45ಕ್ಕೆ ನೀರಿನ ಸ್ಥಾವರದಿಂದ ಕೊಳವೆಯಲ್ಲಿ ನೀರು ಹರಿಸುವ ಕಾರ್ಯವನ್ನು ನಡೆಸಿದೆ. ಸುಮಾರು 6.15ರ ವೇಳೆ ನಲ್ಲಿಯಲ್ಲಿ ನೀರು ಬಂದಿದೆ.

ಕಳೆದ ಶನಿವಾರದಿಂದ ನೀರಿನ ಸಮಸ್ಯೆ ತಲೆದೋರಿತ್ತು. ಶುಕ್ರವಾರ ಪೈಪು ಜೋಡಣೆಯ ಕಾರ್ಯಕ್ಕೆ ರಸ್ತೆ ಪಕ್ಕ ಅಗೆಯುವ ಕಾರ್ಯ ನಡೆಯಿತು. ನೀರಿನ ಹಳೇ ಪೈಪು ಎಲ್ಲೆಲ್ಲಿ ಹೋಗಿದೆ ಎಂಬ ಸ್ಪಷ್ಟತೆ ಇಲ್ಲದೆ ಪರದಾಡಿದ ಸಿಬ್ಬಂದಿ, ಶುಕ್ರವಾರ ಪೈಪುಗಳ ಜೋಡಣೆಗೆ ಹೊರಟರು. ಈ ಸಂದರ್ಭ ಬಿ.ಸಿ.ರೋಡಿನ ಕೇಂದ್ರ ಭಾಗದಲ್ಲೇ ನೀರು ಚಿಮ್ಮಲು ಆರಂಭಿಸಿ ಹೊಳೆಯಂತೆ ಹರಿಯಿತು. ಒಂದು ಹಂತದಲ್ಲಿ ಪೊಲೀಸ್ ಸ್ಟೇಶನ್ ಗೆ ತೆರಳುವ ರಸ್ತೆಯಲ್ಲಿ ಸಂಚರಿಸಲೂ ಆಗದಂಥ ಪರಿಸ್ಥಿತಿ ನಿರ್ಮಾಣಗೊಂಡಿತು. ಸ್ಟೇಟ್ ಬ್ಯಾಂಕ್ ಪಕ್ಕದಲ್ಲಿ ಹೊಳೆಯಂತೆ ನೀರು ತುಂಬಿತ್ತು. ಶುಕ್ರವಾರ ಸಂಜೆಯ ವೇಳೆಗೆ ಕೆಲಸ ಮುಗಿದಿತ್ತು.

NEWS RELATED TO THIS POST at www.bantwalnews.com :

ನೀರಿನ ಸಮಸ್ಯೆ: ದುರಸ್ತಿ ಪೂರ್ಣ

ಬಿ.ಸಿ.ರೋಡಲ್ಲಿ ಬಿಗಡಾಯಿಸಿದೆ ಕುಡಿಯುವ ನೀರಿನ ಸಮಸ್ಯೆ

ಬಿ.ಸಿ.ರೋಡಿನಲ್ಲಿ ನಾಲ್ಕು ದಿನಗಳಿಂದ ಕುಡಿಯುವ ನೀರಿಲ್ಲ

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಅಂತೂ, ಇಂತೂ ನೀರು ಬಂತು!!!"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*