ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಇವಿಎಂ ಮತಯಂತ್ರ ಮತ್ತು ಮತದಾನ ದೃಢೀಕರಣದ ವಿವಿ ಪ್ಯಾಟ್ ಯಂತ್ರಗಳ ಉಪಯೋಗ ಕುರಿತು ಪ್ರಾತ್ಯಕ್ಷಿಕೆ ನಡೆಯಿತು.
ಜಾಹೀರಾತು
ಬಂಟ್ವಾಳ ಮೂಡ ಗ್ರಾಮ ಹಲವು ಬೂತ್ ಗಳಲ್ಲಿ ಈ ಪ್ರಾತ್ಯಕ್ಷಿಕೆಯನ್ನು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಹಾಗೂ ಚುನಾವಣೆ ಸಂಬಂಧಿಸಿದ ಅಧಿಕಾರಿ ಅರುಣ್ ಪ್ರಕಾಶ್ ನೀಡಿದರು. ಮತಯಂತ್ರದ ಗುಂಡಿ ಒತ್ತಿದೊಡನೆ ಇನ್ಯಾವುದಕ್ಕೋ ಹೋಗುವುದಿಲ್ಲ, ಬದಲಾಗಿ ಯಾವ ಚಿಹ್ನೆಗೆ ಒತ್ತಲಾಗಿದೆಯೋ ಅದಕ್ಕೇ ಅಚ್ಚಾಗುತ್ತದೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ಅಧಿಕಾರಿ ವಿವರಿಸಿದರು. ಈ ಸಂದರ್ಭ ಎಪಿಎಂಸಿ ಕೇಂದ್ರದಲ್ಲಿ ಪುರಸಭಾ ಸದಸ್ಯೆ ಸುಗುಣ ಕಿಣಿ, ಪುರಸಭಾ ನಾಮನಿರ್ದೇಶಿತ ಸದಸ್ಯ ಲೋಕೇಶ ಸುವರ್ಣ, ಅಂಗನವಾಡಿ ಕಾರ್ಯಕರ್ತೆ ಶ್ರೀವಾಣಿ ರಾವ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಇವಿಎಂ, ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ"