ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ಡಿ.30ರಂದು ಮಧಾಹ್ನ 3.30ಕ್ಕೆ ಗುರುಭಕ್ತ ವೈದಿಕ ಸಮಾಲೋಚನಾ ಸಭೆ ನಡೆಯಲಿದೆ.
ಮಂಗಳೂರು ಹೋಬಳಿಯ ಸುಪ್ರಸಿದ್ಧ ವೈದಿಕ ಮನೆತನದ ಪುರೋಹಿತರು, ನಿಷ್ಠಾವಂತ ಗುರುಭಕ್ತರು ಹಾಗೂ ಮಂಗಳೂರು ಮಂಡಲ ವೈದಿಕ ಪ್ರಧಾನರೂ ಆದ ವೇ.ಮೂ. ಅಮೈ ಶಿವಪ್ರಸಾದಭಟ್ಟರಿಗೆ ಇತ್ತೀಚೆಗೆ ಅಪರಿಚಿತ ವ್ಯಕ್ತಿಯಿಂದ ದೂರವಾಣಿ ಮೂಲಕ ಜೀವ ಬೆದರಿಕೆ ಬಂದಿರುವ ಹಿನ್ನಲೆಯಲ್ಲಿ ಸಾತ್ತ್ವಿಕ ವೈದಿಕರ ರಕ್ಷಣೆ ಹಾಗೂ ಬೆಂಬಲ ಸಮಾಜದ ಕರ್ತವ್ಯವಾಗಿರುವುದರಿಂದ ಮಂಗಳೂರು ಹೋಬಳಿಯ ಎಲ್ಲ ವೈದಿಕರು, ಲೌಕಿಕರು, ಮಾತೆಯರ ಸಭೆಯನ್ನು ಕರೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.