ದೇಯಿ ಬೈದೆತಿಗೆ ಅವಮಾನ: ಪ್ರೇರೇಪಣೆ ನೀಡಿದವರ ಬಂಧನಕ್ಕೆ ಬಿಜೆಪಿ ಒತ್ತಾಯ

ಪುತ್ತೂರು ತಾಲೂಕಿನ ಮೂಡುಪಿನಡ್ಕದಲ್ಲಿ ಸರ್ಕಾರ ನಿರ್ಮಿಸಿದ ದೇಯಿ ಬೈದೆತಿ ಔಷ ವನದಲ್ಲಿ ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿಗೆ ಅವಮಾನ ಮಾಡಿದವರನ್ನಷ್ಟೇ ಅಲ್ಲ, ಅದಕ್ಕೆ ಪ್ರೇರೇಪಣೆ ನೀಡಿದವರನ್ನೂ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಜಾಹೀರಾತು

ಬಿ.ಸಿ.ರೋಡಿನಲ್ಲಿ ಸೋಮವಾರ ನಡೆದ ಮೆರವಣಿಗೆ ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಪ್ರಮುಖರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಸರಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಾಗಲಷ್ಟೇ ಸಾಮಾಜಿಕ ಸ್ವಾಸ್ಥ್ಯ ಉಳಿಯಲು ಸಾಧ್ಯ ಎಂದರು.

ವಿಕೃತ ಮನೋಸ್ಥಿತಿಯವರು ಪ್ರತಿಮೆಗೆ ಅಪಮಾನಗೊಳಿಸಿದ್ದು ಖಂಡನೀಯ, ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿ, ಅದನ್ನು ಇಷ್ಟಪಟ್ಟು ಲೈಕ್ ಕೊಟ್ಟವರನ್ನೂ ವಿಚಾರಣೆಗೊಳಪಡಿಸಬೇಕು ಎಂದು ಹಿಂದುಳಿದ ವರ್ಗ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಹೇಳಿದರು.

ತುಳುನಾಡಿನ ಸಂಸ್ಕಾರ, ಸಂಸ್ಕೃತಿಯನ್ನ ಉಳಿಸಿಕೊಂಡು, ಬೆಳೆಸಿಕೊಂಡು ಭಾವನಾತ್ಮಕವಾಗಿ ಜೀವನ ಸಾಗಿಸಿಕೊಂಡು ಬಂದ ಸಮಸ್ತ ಹಿಂದೂ ಜನತೆಗೆ ಈ ಕೃತ್ಯದಿಂದ ಅಪಾರ ನೋವು ಆಗಿದೆ. ಇದನ್ನು ಇಡೀ ಹಿಂದು ಸಮಾಜ ಮತ್ತು ಭಾರತೀಯ ಜನತಾ ಪಾರ್ಟಿ ಖಂಡಿಸುತ್ತದೆ. ಈ ಹೇಯ ಕೃತ್ಯದಲ್ಲಿ ಭಾಗಿಯಾದ ಮತಾಂಧರಲ್ಲಿ ಕೇವಲ ಕಾಟಾಚಾರಕ್ಕೆ ಓರ್ವ ವ್ಯಕ್ತಿಯನ್ನು ಪೋಲೀಸ್ ಇಲಾಖೆ ಬಂಧಿಸಿದ್ದು ಆತನಿಗೆ ಸಹಕರಿಸಿದ ಉಳಿದ ವ್ಯಕ್ತಿಗಳನ್ನು ಬಂಧಿಸಿ ಕಠಿನ ಕಾನೂನು ಕ್ರಮ ಜರಗಿಸಬೇಕಾಗಿಯೂ ಗರಡಿಗಳಲ್ಲಿ ಪೂಜಿಸಲ್ಪಡಬೇಕಾದ ಯುಗ ಪುರುಷ ಕೋಟಿ ಚೆನ್ನಯ ಹಾಗೂ ದೈವಾಂಶ ಸಂಭೂತೆಯಾದ ದೇಯಿ ಬೈದೆತಿಯ ಪ್ರತಿಮೆಗಳನ್ನು ಸೂಕ್ತ ರಕ್ಷಣೆ ನೀಡದೆ ಸರಿಯಾದ ಆವರಣ ಗೋಡೆಯನ್ನು ಸಹ ನಿರ್ಮಿಸದೆ ಪುತ್ತೂರು ತಾಲೂಕಿನ ಮೂಡುಪಿನಡ್ಕದ ಔಷ ವನದಲ್ಲಿ ನಿರ್ಮಿಸಿದ್ದು ಖಂಡನೀಯ ಎಂದು ಭಾಷಣಕಾರರು ಆರೋಪಿಸಿದರು.

ಮಾಜಿ ಶಾಸಕ ರುಕ್ಮಯ ಪೂಜಾರಿ, ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ ಭಟ್, ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ, ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ, ಕ್ಷೇತ್ರ ಸಮಿತಿ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ, ಕ್ಷೇತ್ರ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ದಿನೇಶ್ ಭಂಡಾರಿ,ಸಂಗಬೆಟ್ಟು ಶಕ್ತಿಕೇಂದ್ರದ ಅಧ್ಯಕ್ಷರಾದ ರತ್ನ ಕುಮಾರ್ ಚೌಟ, ಸಂಗಬೆಟ್ಟು ಶಕ್ತಿಕೇಂದ್ರದ ಪ್ರಧಾನ ಕಾರ್ಯಕಾರ್ಯ ಸಂಜೀವ ಪೂಜಾರಿ ಪಿಲಿಂಗಾಲು, ಎಂ ತುಂಗಪ್ಪ ಪೂಜಾರಿ, ಪ್ರಕಾಶ್ ಅಂಚನ್, ಚೆನ್ನಪ್ಪ ಕೋಟ್ಯಾನ್, ರವೀಂದ್ರ ಕಂಬಳಿ, ಕ್ಷೇತ್ರ ಕಾರ್ಯದರ್ಶಿ ರಮನಾಥ ರಾಯಿ, ದೇವಪ್ಪ ಪೂಜಾರಿ, ಸಂತೋಷ್ ರಾಯಿ, ಲಕ್ಷ್ಮೀನಾರಾಯಣ, ಕೇಶವ ಗೌಡ,ಕಮಲಾಕ್ಷಿ ಕೆ ಪೂಜಾರಿ,ಗೀತಾ ಚಂದ್ರಶೇಖರ್,ಗಣೇಶ್ ರೈ ಮಾಣಿ,ಸದಾಶಿವ ಬರಿಮಾರು,ಗಂಗಾಧರ ಕೋಟ್ಯಾನ್,ಸುಗುಣ ಕಿಣಿ,ಲಕ್ಷ್ಮೀಗೋಪಾಲಾಚಾರ್ಯ,ಜಯಂತಿ,ಕುಲ್ಯಾರು ನಾರಾಯಣ ಶೆಟ್ಟಿ,ಯಶವಂತ ಪೊಳಲಿ,ತನಿಯಪ್ಪ ಗೌಡ,ರವಿರಾಜ್ ಬಿ.ಸಿ.ರೋಡ್,ಮಚ್ಚೇಂದ್ರ ಸಾಲಿಯಾನ್,ಪುರುಷೋತ್ತಮ ಶೆಟ್ಟಿ, ಕ್ಷೇತ್ರ ಕಾರ್ಯದರ್ಶಿಯಾದ ಸೀತಾರಾಮ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ದೇಯಿ ಬೈದೆತಿಗೆ ಅವಮಾನ: ಪ್ರೇರೇಪಣೆ ನೀಡಿದವರ ಬಂಧನಕ್ಕೆ ಬಿಜೆಪಿ ಒತ್ತಾಯ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*