ಬಿ.ಸಿ.ರೋಡ್ ಸರ್ವೀಸ್ ರಸ್ತೆಗೆ ಸರ್ವೀಸ್ ಮಾಡೋ ಕೆಲಸ ಆರಂಭಗೊಂಡಿದೆ. ಇದೀಗ ಕಾಂಕ್ರೀಟ್ ಹಾಕಲು ಪೂರ್ವಭಾವಿ ಕೆಲಸಗಳು ಮಂಗಳವಾರ ಶುರುವಾಗಿದೆ ಎಂದು ಮೂಲಗಳು ಬಂಟ್ವಾಳನ್ಯೂಸ್ ಗೆ ತಿಳಿಸಿವೆ. ಈ ಕುರಿತು ಎಲ್ಲ ಮಾಧ್ಯಮಗಳು ಸರಣಿ ವರದಿಗಳನ್ನು ಪ್ರಕಟಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದ್ದವು.
ಹೊಂಡಗಳ ಸಮಸ್ಯೆಯಿಂದ ಇಲ್ಲಿಗೆ ಆಗಮಿಸುವ ವಾಹನಗಳು ಆಯತಪ್ಪಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಲ್ಲೇ ಮಂಗಳೂರಿಗೆ ತೆರಳುವ ಬಸ್ಸುಗಳು ನಿಲ್ಲುವ ಕಾರಣ ಇತರ ವಾಹನಗಳಿಗೂ ತೆರಳಲು ಕಷ್ಟಕರವಾದ ಪರಿಸ್ಥಿತಿ ಇತ್ತು. ಪ್ರಯಾಣಿಕರಿಗೆ ನಿಲ್ಲಲು ಕಷ್ಟವಾಗುತ್ತಿದ್ದರೆ, ಪಾದಚಾರಿಗಳಿಗೆ ನಡೆದಾಡಲೂ ಪ್ರಯಾಸಪಡಬೇಕಾದ ಸ್ಥಿತಿ ಉಂಟಾಗಿತ್ತು. ಹಲವು ಪ್ರಯಾಣಿಕರು ಬಂಟ್ವಾಳನ್ಯೂಸ್ ಜೊತೆ ಈ ಸಮಸ್ಯೆಯ ಕುರಿತು ಅಳಲು ತೋಡಿಕೊಂಡಿದ್ದರು.
ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.
Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.
Be the first to comment on "ಕೊನೆಗೂ ಸರ್ವೀಸ್ ರಸ್ತೆಗೆ ‘ಸರ್ವೀಸ್’"