ವಿಟ್ಲ

ಪುಣಚ ದೇವಿನಗರ ಶ್ರೀದೇವಿ ವಿದ್ಯಾಕೇಂದ್ರಕ್ಕೆ ನೆರವು

ಅತ್ಯಂತ ಗ್ರಾಮೀಣ ಭಾಗದವಾದ ಪುಣಚ ಭಾಗದಲ್ಲಿನ ಬಡ ಮಕ್ಕಳೇ ಶ್ರೀದೇವಿ ವಿದ್ಯಾಕೇಂದ್ರದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಶಾಲೆಗೆ ವೈಯಕ್ತಿಕ ಹಗೆತನವನ್ನಿಟ್ಟುಕೊಂಡು ಶಾಲಾ ಮಕ್ಕಳ ಊಟಕ್ಕೆ ಕೊಲ್ಲೂರಿನಿಂದ ಬರುತ್ತಿದ್ದ ಅನುದಾನವನ್ನು ಸ್ಥಗಿತಮಾಡಲಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹರಿಪ್ರಸಾದ್ ಯಾದವ್ ಹೇಳಿದರು.

ಜಾಹೀರಾತು

ಬುಧವಾರ ಪುಣಚ ದೇವಿನಗರ ಶ್ರೀದೇವಿ ವಿದ್ಯಾಕೇಂದ್ರಕ್ಕೆ ಅಡ್ಯನಡ್ಕ ಬ್ರಿಗೇಡ್ ಬ್ರದರ್‍ಸ್ ಸದಸ್ಯರು ಒಟ್ಟಾಗಿಸಿದ ಅಕ್ಕಿಯನ್ನು ಹಸ್ತಾಂತರಿಸಿ ಮಾತನಾಡಿದರು.

ಯುವಕರು, ಉದ್ಯಮಿಗಳು, ಧಾರ್ಮಿಕ ಕೇಂದ್ರದ ಹಿರಿಯರು ಒಟ್ಟಾಗಿ ಸೇರಿಕೊಂಡು ಸುಮಾರು 3 ಕ್ವಿಂಟಾಲ್ 60 ಕೆಜಿ ಅಕ್ಕಿಯನ್ನು ದೇವಿನಗರ ಶಾಲೆಗೆ ಕೊಡುತ್ತಿದ್ದೇವೆ ಎಂದು ಹೇಳಿದರು.

ಶ್ರೀದೇವಿ ವಿದ್ಯಾಕೇಂದ್ರದ ಸಂಚಾಲಕ ಜಯಶ್ಯಾಮ ನೀರ್ಕಜೆ ಮಾತನಾಡಿ ಪ್ರಸಕ್ತ ಶೈಕ್ಷಣಿಕ ವರ್ಷದ ಅನುದಾನ ಈವರೆಗೆ ಸಿಕ್ಕಿಲ್ಲ ಎಂದು ತಿಳಿಸಿದರು.

ಜಾಹೀರಾತು

ಪುಣಚ ಪ್ರಾಥಮಿಕ ವ್ಯವಸಾಯ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ದೇವಿಪ್ರಸಾದ್ ಕಲ್ಲಾಜೆ, ಶಾಲಾ ಆಡಳಿತ ಮಂಡಳಿಯ ಶಂಕರನಾರಾಯಣ ಮಲ್ಯ, ಸುಬ್ಬ ನಾಯ್ಕ, ಉದ್ಯಮಿ ರವಿಪ್ರಸಾದ್, ಕಾರ್ತಿಕ ರೈ, ದಯಾನಂದ, ಗಣೇಶ್, ಜಯೇಶ್ ಹಾಗೂ ಬ್ರಿಗೇಡ್ ಬ್ರದರ್‍ಸ್ ಸದಸ್ಯರು ಹಾಜರಿದ್ದರು. ಹಿರಿಯ ಶಿಕ್ಷಕಿ ಗಂಗಮ್ಮ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಲೋಕೇಶ್ ವಂದಿಸಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ