ಪ.ಗೋ. ಅಂಕಣ

ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 17: ಪಾದರಕ್ಷೆಯ ಮರದ ಪೆಟ್ಟಿಗೆಯಲ್ಲಿ ಬಿನ್ನವತ್ತಳೆ !

ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪದ್ಯಾಣ ಗೋಪಾಲಕೃಷ್ಣ (1928-1997). ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಅವರು, ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ ಪ.ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆ.  ಇದು ಪ.ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ ಪ.ಗೋ, ಅವರ ಈ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ ಸಾಹಿತ್ಯಪ್ರೇಮಿ ಪ.ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (ಪ.ರಾಮಚಂದ್ರ). ಲೇಖನಮಾಲೆಯ 17ನೇ ಕಂತು ಇಲ್ಲಿದೆ.

ವಿಶೇಷ ಸೃಷ್ಟಿಗಳ ಲೋಕದಲ್ಲಿಅಂಕಣ17: ಪಾದರಕ್ಷೆಯ ಮರದ ಪೆಟ್ಟಿಗೆಯಲ್ಲಿ ಬಿನ್ನವತ್ತಳೆ !
ಹಠಾತ್ತಾಗಿ ವಹಿಸಿಕೊಟ್ಟಿದ್ದ ಪುರವಣಿಯ ಪುಟವಿನ್ಯಾಸದ ಕೆಲಸದ ವೇಳೆ. ಆ ಪುರವಣಿಗಾಗಿ ಬರಹಗಳ ಸಂಗ್ರಹ ವ್ಯವಸ್ಥೆಯ ಹೊಣೆ ನಿರ್ವಹಿಸಿದವರು ಯಾರು ? ಹಾಗೆಯೇ, ಸಂಪಾದಕೀಯ ಶಾಖೆಗೆ ಅವಶ್ಯವಿರುವ ಆಧಾರಆಕರ ಸಾಹಿತ್ಯದ ಸಂಗ್ರಹ ಯಾರ ಸುಪರ್ದಿನಲ್ಲಿದೆ ? ಎಂಬ ಎರಡು ಪ್ರಶ್ನೆಗಳಿಗೂ ಉತ್ತರ ಬೇಕಾಗಿತ್ತು.
ಮತ್ತೊಮ್ಮೆ ಮೇಲಿನಿಂದಬುಲಾವ್ಬರುವ ಮೊದಲೇ ಆ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಸಿಕ್ಕ ಮಾಹಿತಿ, ನವಭಾರತದ ಕಾರ್ಯವೈಖರಿಯ ಹಲವು ವೈಶಿಷ್ಟ್ಯಗಳನ್ನು ನಿಚ್ಚಳವಾಗಿ ಕಾಣಿಸಿತು. “ಬೇಕಾಗುವ ಎಲ್ಲಾ ಸಾಧನ ಸಂಗ್ರಹವೂ ಇಲ್ಲಿ ಇದೆ.ನಮ್ಮ ಉಪಯೋಗಕ್ಕೆ ಮಾತ್ರ ಯಾವುದೂ ಸಿಗುವುದಿಲ್ಲ. ಎಲ್ಲವನ್ನೂ ಮೇಲಿನ ಆಫೀಸ್ ಕಪಾಟುಗಳಲ್ಲಿಟ್ಟು ಬೀಗ ಹಾಕಲಾಗಿದೆ. –ಎಂ.ಡಿ.ಯವರ ಆರ್ಡರ್ ಪ್ರಕಾರ. ಇಲ್ಲಿ ಇರುವುದು ಅದು ಒಂದು ಮಾತ್ರಎಂದು ಮರುಗಿದ ಸಹೋದ್ಯೋಗಿಯೊಬ್ಬರು ಕೈ ತೋರಿದತ್ತ ನಡೆದೆ. ಬೆಂಗಳೂರಿನಲ್ಲಿ ಹಿಂದೆಂದೋ ಕಂಡಿದ್ದತಲೆದಿಂಬಿನಜೀರ್ಣಾವಸ್ಥೆಯ ಅಪರಾವತಾರ ಅಲ್ಲೂ ಕಂಡಿತು !ಸಂಪಾದಕೀಯ ಸಿಬ್ಬಂದಿಯಿಂದ ಕೆಲಸ ಮಾಡಿಸಬೇಕಾದರೆ, ಎರಡೇ ಎರಡು ಸೀಲಿಂಗ್ ಫ್ಯಾನ್ ಇದ್ದ ಬಿಸಿಧಗೆಯ ಕಲ್ನಾರು ಶೆಡ್ ನಲ್ಲಿ ಎಲ್ಲರನ್ನೂ ಕೂಡಿಹಾಕಬೇಕು. ಒಬ್ಬರನ್ನೊಬ್ಬರು ಮಾತನಾಡಿಸದ ಹಾಗೆ ಮೇಜುಗಳನ್ನು ದೂರದೂರಕ್ಕೆ ಇರಿಸಬೇಕು,ಉಸಿರಾಡಬೇಕಾದರೂಎಂ.ಡಿ.ಯವರ ಅಪ್ಪಣೆ ತಂದುಕೊಡಿಎಂದು ಪ್ರಸಾರಾಂಗ ಅಧಿಕಾರಿ ಕಾಮತರ ಮರ್ಜಿ ಕಾಯಬೇಕು ಎಂಬ ಅಘೋಷಿತ ನಿಯಮಗಳೂ ಮನದಟ್ಟಾದವು.
ಕುಂದುಕೊರತೆಗಳ ಬಗ್ಗೆಏನಾದರೂಮಾಡಬಲ್ಲ ಹಂತಕ್ಕೆ ನಾನಿನ್ನೂ ಮುಟ್ಟಿರಲಿಲ್ಲ. ಸಮಸ್ಯೆಯ ಅಧ್ಯಯನ ಇನ್ನೂ ನಡೆಯಬೇಕಾಗಿದೆ ಎಂದಷ್ಟೇ ಮನವರಿಕೆಯಾಯಿತು. ಮಾಡಬೇಕಾದ ಹೆಚ್ಚಿನ ಕೆಲಸ, ಸದ್ಯಕ್ಕೆ ಏನೂ ಇಲ್ಲ. ಎಡಿಟೋರಿಯಲ್ನಲ್ಲಿ ಕುಳಿತಿದ್ದುಕರೆದಾಗಲೆಲ್ಲಾ ಇಲ್ಲಿಗೆ ಬರುತ್ತಾ ಇರುಎಂಬ ಆಂತರಿಕ ಅಧ್ಯಾದೇಶದ ಅವಧಿ ಮುಗಿಯುತ್ತಿದ್ದಂತೆ, ಒಮ್ಮೆ ಕರೆ ಕಳುಹಿಸಿದ್ದ ವೇಳೆಯಲ್ಲಿ
ನೋಡುವಸಂಡೇ ಸ್ಪೆಷಲ್ ಎಡಿಶನ್ನಿನ ಒಂದು ಡಮ್ಮಿ ಪೇಜ್ ಪ್ರಿಪೇರ್ ಮಾಡಿಎಂಬ ಆದೇಶ ಬಂತು. ವಿದೇಶಿ ವಿನ್ಯಾಸಗಳ ಮೇಲಿನ ಅವರ ವ್ಯಾಮೋಹದ ಸುಳಿವಿದ್ದ ಕಾರಣ, ಬುದ್ಧಿ ಉಪಯೋಗಿಸಿ, (ಮೇಜಿನ ಪಕ್ಕದಲ್ಲೇ ಇರಿಸಿದ್ದ ಸಿಲೋನ್ ಒಬ್ಸರ್ವರ್ ಪತ್ರಿಕೆಯ ವಿನ್ಯಾಸವನ್ನೂ ಕಳ್ಳನೋಟದಲ್ಲೇ ಗಮನಿಸಿ) ಒಂದು ಫುಲ್ ಸ್ಕೇಪ್ ಹಾಳೆಯಲ್ಲಿರವಿವಾರದ ನವಭಾರತಮುಖಪುಟ ವಿನ್ಯಾಸ ಗೀಚಿದೆ. (ಒಂದೆರಡಾದರೂ ತಿದ್ದುಪಡಿಗಳನ್ನು ಮಾಡುವ ಅವರ ಆಸೆ ಪೂರೈಸಿಕೊಳ್ಳಲು, ಸಾಕಷ್ಟು ಅವಕಾಶಗಳನ್ನೂ ಒದಗಿಸಿದ್ದೆ!)
ತೋರಿಸಿದ್ದ ಡಮ್ಮಿಯನ್ನು ನೋಡಿಐ ಸೀ! ಓ ಕೆ ಯು ಸೀಮಿ ಟುಮಾರೊಎಂದಾಗಅಪೂರ್ವವೆನ್ನಬಹುದಾದ ಮುಗುಳ್ನಗೆಯೊಂದು ಮುಖದಲ್ಲಿದ್ದಂತೆ ಭಾಸವಾಯಿತು.
ಅಂದಿನ ದಿನಗಳಲ್ಲಿವಿಶೇಷವೆಂದೇ ಕಂಡಿದ್ದ ನವಭಾರತಸಾಪ್ತಾಹಿಕಸಂಚಿಕೆಯ ಕೊಡುಗೆಯಲ್ಲಿ ನನ್ನ ಪಾಲು ಅರ್ಧ ಮಾತ್ರ.ಸಂಚಿಕೆ ಹೊರ ಬರಲು ಆರಂಭವಾದ ಮೇಲೆ ಆ ಕೊಡುಗೆ ಪೂರ್ಣಪ್ರಮಾಣದ್ದಾಯಿತು. ಪ್ರತಿ ಭಾನುವಾರವೂ ಹೊರಬರಬೇಕಾದ ಪುಟಗಳಿಗೆಬೇಕಾದ್ದೆಲ್ಲವನ್ನೂ ಕೇಳಿಪಡೆಯುವಸ್ವಾತಂತ್ರ್ಯ ದೊರೆತಿತ್ತು. ಅದನ್ನು ಪೂರ್ಣವಾಗಿ ಉಪಯೋಗಿಸಿಕೊಂಡೆ.ಲೇಖನಚಿತ್ರ ಇತ್ಯಾದಿಗಳ ಸಂಗ್ರಹವನ್ನು ಬಹುಬೇಗನೆ ಬೆಳೆಸಿಕೊಂಡ ಕಾರಣ, ಮುಂದಿನ ಸಂಚಿಕೆಗಳ ರೂಪುರೇಷೆಯನ್ನು ನಾಲ್ಕು ವಾರಗಳ ಮೊದಲೇ ನಿರ್ಧರಿಸಲು ಸಾಧ್ಯವಾಯಿತು.
ಸಂಪನ್ಮೂಲದ ಅಭಾವ ನವಭಾರತಕ್ಕೆ ಮೊದಲಿನಿಂದಲೂ ಇರಲಿಲ್ಲ. ಜಿಲ್ಲಾ ಮಟ್ಟದ ದಿನಪತ್ರಿಕೆಯೊಂದನ್ನು ಒಯ್ಯಬಹುದಾದಷ್ಟು ಎತ್ತರಕ್ಕೆ ಒಯ್ದ ವಿ.ಎಸ್.ಕುಡ್ವರು, ಅದರ ವ್ಯಾಪ್ತಿಯನ್ನು ಇನ್ನೂ ವಿಸ್ತರಿಸುವತ್ತ ಮಗನು ಮಾಡಿದ್ದ ಸಲಹೆ ಪ್ರಿಯವೆನಿಸಿದ್ದರಿಂದ ಅವುಗಳನ್ನು ಕಾರ್ಯಗತಗೊಳಿಸುವ ಸ್ವಾತಂತ್ರ್ಯವನ್ನೂ ಕೊಟ್ಟಿದ್ದರು. ಪಿ.ಟಿ.. ವಾರ್ತಾ ವ್ಯವಸ್ಥೆ, ರೋಟರಿ ಮುದ್ರಣ ಯಂತ್ರ, ರಾಜ್ಯ ರಾಜಧಾನಿ ಮತ್ತು ದೇಶದ ಮಹಾನಗರಗಳಲ್ಲಿ ಸ್ವಂತ ಪ್ರತಿನಿಧಿಗಳು, .ಬಿ.ಸಿ. –..ಎನ್.ಎಸ್.ಸದಸ್ಯತ್ವ ಇತ್ಯಾದಿಗಳೆಲ್ಲವನ್ನೂ ಹೊಂದಿದ್ದ ಜಿಲ್ಲಾ ಕೇಂದ್ರದ ಪತ್ರಿಕೆ ಅಂದಿನ ಮಟ್ಟಿಗೆ ಕರ್ನಾಟಕದಲ್ಲಿ ಬೇರಾವುದೂ ಇರಲಿಲ್ಲ. (ಹುಬ್ಬಳ್ಳಿಯನ್ನು ಪ್ರಾದೇಶಿಕ ಕೇಂದ್ರವೆಂದೇ ಪರಿಗಣಿಸಬೇಕುಜಿಲ್ಲಾ ಕೇಂದ್ರವಲ್ಲ) ಪ್ರತಿಗಳ ವಿತರಣೆಗೆ ಸಹ ಸಂಸ್ಥೆಯ ಬಸ್ ಗಳ ಸೌಕರ್ಯವಿತ್ತುಏಜೆಂಟರ ವ್ಯವಹಾರದ ವೇಳೆ ಅದ್ಭುತ ಹಿಡಿತವೂ ಇದ್ದು ಜಾಹಾರಾತು ಪ್ರಸಾರಗಳೆರಡರಿಂದಲೂ ಹೇರಳ ಸಂಪಾದನೆಯಾಗುತ್ತಿತ್ತು.
ಇರುವ ಎಲ್ಲಾ ಸೌಕರ್ಯಗಳನ್ನು ಉಪಯೋಗಿಸಿಕೊಂಡು, ಆತ್ಮತೃಪ್ತಿಯಿಂದ ಇಲ್ಲಿ ಕೆಲಸ ಮಾಡಲು ಸಾಧ್ಯಸಣ್ಣ ಪುಟ್ಟ ಕಿರುಕುಳಗಳು ನಗಣ್ಯವೆಂದುಕೊಂಡರೆಎಂಬ ತೀರ್ಮಾನಕ್ಕೆ ತಿಂಗಳೊಳಗೇ ಬಂದೆ.
ಆ ತಿಂಗಳ ಕೊನೆಯ ದೈನಿಕ ಪುಟಗಳಲ್ಲೂ ಸಾಧ್ಯವಿರುವ ಹೊಸ ವಿನ್ಯಾಸಗಳನ್ನು ಅಳವಡಿಸಬೇಕೆಂದು ಆದೇಶ ಬಂದಾಗ ಅದನ್ನು ಹೆಚ್ಚಿನ ಹೊಣೆ ಎಂದು ತಿಳಿದುಕೊಳ್ಳದೆ ಒಪ್ಪಿಕೊಂಡೆ. ಆ ಒಪ್ಪಿಗೆಯಿಂದಾಗಿ, ತಮ್ಮ ಕಾರ್ಯವಿಧಾನವನ್ನು ಬದಲಾಯಿಸಲು ಇಚ್ಛೆಯೇ ಇರದ ಸಹೋದ್ಯೋಗಿಗಳನ್ನು ಕೂಡಾ ಹೊಂದಾಣಿಕೆಯಿಂದ ಮನವೊಲಿಸುವ (ಹಿಂದೆ ಗಮನಿಸದೆ ಉಳಿದಿದ್ದ) ಅಗತ್ಯವೂ ಮನದಟ್ಟಾಯಿತು.
ಪೂರ್ಣ ಪ್ರಮಾಣದ ದಿನಪತ್ರಿಕೆಗೆ ಬೇಕಾಗಿದ್ದ ಸಾಧನಸಂಪತ್ತುಪರಿಕರಗಳನ್ನು ಸಂಚಯಿಸಿ ತಮ್ಮ ಮುಂದಿನ ಪೀಳಿಗೆಗೆ ವಹಿಸಿಕೊಟ್ಟ ವಿ.ಎಸ್.ಕುಡ್ವರ ಗಮನ, ಅವುಗಳನ್ನು ಯೋಗ್ಯ ರೀತಿಯಲ್ಲಿ ಬಳಸಿಕೊಳ್ಳಲು ತಮ್ಮ ಸಿಬ್ಬಂದಿಗೆ ಕೊಡಬೇಕಾದ ತರಬೇತಿಯತ್ತ ಹರಿದಿರಲಿಲ್ಲ. ಅವರ ಮುಂದಿನವರೂ ಅದರ ಅವಶ್ಯಕತೆಯನ್ನು ಪರಿಗಣಿಸಿರಲಿಲ್ಲ. ಕಂಪೋಸಿಂಗ್ ವಿಭಾಗದಲ್ಲಂತೂಪ್ರಶ್ನಾತೀತಕಾರ್ಯವೈಖರಿ ಇತ್ತು. ಸಂಪಾದಕೀಯ ವಿಭಾಗತಮ್ಮ ನಿರ್ದಿಷ್ಟ ಕೆಲಸಗಳನ್ನು ನಿರ್ವಹಿಸುತ್ತಿದ್ದ ಕೆಲವೇ ಮಂದಿ ಹಳಬರ ಹೊರತಾಗಿತಮಗಿಷ್ಟ ಬಂದ ರೀತಿಯಲ್ಲಿ ಕೆಲಸ ಮಾಡುವಉತ್ಸಾಹಿಗಳಿಂದ ತುಂಬಿತ್ತು. (ಅವರಲ್ಲೂ ಹೆಚ್ಚಿನವರು ಪದವಿ ಪರೀಕ್ಷಾ ಫಲಿತಾಂಶ ಕಾಯುವ ತಾತ್ಕಾಲಿಕ ಅವಧಿಯಲ್ಲೇ ಅಲ್ಪಸ್ವಲ್ಪ ಸಂಪಾದನೆಗಾಗಿ ಬಂದಿದ್ದವರು.)
ಅದರಿಂದಾಗಿ, ಸುದ್ದಿಗಳ ಶೀರ್ಷಿಕೆಗಳು ಅದಲಿಬದಲಾಗುವುದು, ಕೊನೆಯ ಕಾಲಂನ ವರದಿಯ ಅಂತ್ಯ ಒಂದನೆ ಕಾಲಂನಲ್ಲಿ ಬರುವುದು, ತಲೆಬರಹದ ಅಚ್ಚುಮೊಳೆಗಳ ಅನಿರ್ಬಂಧಿತ ಗಾತ್ರ, ಇತ್ಯಾದಿ ಆಭಾಸಗಳೂ
ಟೆಲಿಪ್ರಿಂಟರ್ ಸುದ್ದಿಗಳನ್ನು ವಿಂಗಡಿಸಿ ಹಂಚುವ ವ್ಯವಸ್ಥೆ ಇಲ್ಲದೆ, ‘ಸಿಕ್ಕಿದವರು ಸಿಕ್ಕಿದ್ದನ್ನೇ ಭಾಷಾಂತರಿಸಿದಕಾರಣ, ಒಂದು ಸುದ್ದಿ ಮೂರು ರೀತಿಯಲ್ಲಿ ಒಂದೇ ಪುಟದಲ್ಲಿ ಪ್ರಕಟವಾಗುವುದು (ವರದಿಯಲ್ಲಿನ ಒಂದು ಹೆಸರಿಗೆ ಮೂರು ರೂಪಗಳೂ ಇರುವುದು) ಮುಂತಾದ ಗೊಂದಲಗಳೂ
ಸಾಕಷ್ಟು ಆಗುತ್ತಿದ್ದವು. ಅನುವಾದ ವೈಶಿಷ್ಟ್ಯದಲ್ಲಿ
Sandalwood Casket ಎಂಬ ಶಬ್ದಗಳನ್ನು ಯಥಾವತ್ ಅನುವಾದಿಸಿದಾಗ ಮೊದಲನೇ ಶಬ್ದವನ್ನು ವಿಭಜಿಸಿ, The President was presented with an address in a sandalwood casket ಎಂಬುದನ್ನುರಾಷ್ಟ್ರಪತಿಯವರಿಗೆ ಪಾದರಕ್ಷೆಯ ಮರದ ಪೆಟ್ಟಿಗೆಯಲ್ಲಿ ಬಿನ್ನವತ್ತಳೆ ಅರ್ಪಣೆಎಂದು ಪ್ರಕಟಿಸಿದ್ದ (ನನ್ನ ಹಿಂದಿನ ಕಾಲದ) ಒಂದು ನಿದರ್ಶನವೂ ಪ್ರಖ್ಯಾತವಾಗಿತ್ತು!
ಇಂಥ ಅಭಾಸಗಳು ಆಗದಂತೆ ನೋಡಿಕೊಳ್ಳುವ ಹೊಣೆ ಹೊರಬೇಕಾದರೆ, ಸೂಕ್ತ ಅಧಿಕಾರದ ಜೊತೆಗೆ, ಸ್ವಾತಂತ್ರ್ಯವೂ ಬೇಕು ಎಂಬುದಕ್ಕೆಸ್ವಾತಂತ್ರ್ಯ ಕೊಟ್ಟವಾಗ್ದಾನ ಬಂದಿತು. ಆದರೆ, ಹುದ್ದೆಯ ಹೆಸರು ಸೂಚಿಸುವ ನೇಮಕಾತಿಯ ಪತ್ರ ಮಾತ್ರ ಬರಲಿಲ್ಲ. (ಸಂಪಾದಕೀಯ ವಿಭಾಗದ ಯಾರಿಗೂ ಹೊರಹೊಣೆಯ ಸೂಚನೆ ಕೂಡಾ ಹೋಗಲಿಲ್ಲ!)
ಅದರಿಂದಾಗಿ ಮೊದಮೊದಲುಅಧಿಕಾರ ಚಲಾಯಿಸಲು ಪ್ರಯತ್ನಿಸುತ್ತಿದ್ದಾನೆಎಂದು ಭಾವಿಸಿದ್ದ ಸಹೋದ್ಯೋಗಿಗಳ ಅಸಂತುಷ್ಟಿಯ ಅನುಭವವಾಯಿತು. ಕ್ರಮೇಣ ಪರಿಹಾರವನ್ನೂ ಕಂಡುಕೊಳ್ಳಲಾಯಿತು.
(ಮುಂದಿನ ಭಾಗದಲ್ಲಿ)

(ಇದು ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ಅವರು ಬರೆದು, ಅಂಕಣಮಾಲೆಯಾಗಿ ಪ್ರಕಟಗೊಂಡು, ಪುಸ್ತಕರೂಪವಾಗಿ ಹೊರಬಂದ ವಿಶೇಷ ಸೃಷ್ಟಿಗಳ ಲೋಕದಲ್ಲಿ ಪುಸ್ತಕದ ಮರುಪ್ರಕಟಣೆ.)

ಜಾಹೀರಾತು

for more info about padyana gopalakrishna click this link:

https://bantwalnews.com/2017/08/17/pa-go-series-15/

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ