ಬಂಟ್ವಾಳ

ಬಂಟ್ವಾಳ ರೋಟರಿಯಿಂದ ವಿಕಾಸ – 2017

ಪೋಲಿಯೋ ನಿರ್ಮೂಲನೆ, ಮಾಹಿತಿ ತಂತ್ರಜ್ಞಾನದ ಸದ್ಬಳಕೆ, ಸದಸ್ಯರ ಸಂಪನ್ಮೂಲ ಅಭಿವೃದ್ಧಿ, ವಿಸ್ತರಣೆ ಹಾಗೂ ರೋಟರಿ ಏರ್ಪಡಿಸುವ ಸಮಾಜಸೇವಾ ಕಾರ್ಯಗಳ ಪುನರ್ಮನನದ ದೃಷ್ಟಿಯನ್ನಿಟ್ಟಿಕೊಂಡು ಬಂಟ್ವಾಳ ಬಂಟರ ಭವನದಲ್ಲಿ ರೋಟರಿ ಕ್ಲಬ್ ಬಂಟ್ವಾಳ ರೋಟರಿ ಜಿಲ್ಲೆ 3181ರ ಆಯೋಜನೆಯಲ್ಲಿ ವಿಕಾಸ – 2017 ಎಂಬ ಎರಡು ದಿನಗಳ ಕಾರ್ಯಕ್ರಮ ನಡೆಯಿತು.

ಜಾಹೀರಾತು


ಅಂತಾರಾಷ್ಟ್ರೀಯ ರೋಟರಿ ಧ್ಯೇಯ ಧೋರಣೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಹಾಗೂ ಕ್ಲಬ್‌ನ ಸದಸ್ಯರ ಸಂಖ್ಯೆಯನ್ನು ವೃದ್ಧಿಸುವ, ಪೊಲೀಯೊ ನಿರ್ಮೂಲನೆಯ ಅವಶ್ಯಕತೆ ಮತ್ತು ಮಾಹಿತಿ ಹಕ್ಕು ಕಾಯ್ದೆಯ ಕುರಿತಾದ ವಿಚಾರ ಸಂಕಿರಣ, ಸಂವಾದ ಈ ಸಮಾವೇಶದಲ್ಲಿ ನಡೆಯಿತು.
ರೋಟರಿ ಜಿಲ್ಲೆ 3181ರ ವ್ಯಾಪ್ತಿಗೆ ಒಳಪಟ್ಟ ಮೈಸೂರು, ದಕ್ಷಿಣ ಕನ್ನಡ, ಮಡಿಕೇರಿ, ಚಾಮರಾಜನಗರವನ್ನೊಳಗೊಂಡ ನಾಲ್ಕು ಜಿಲ್ಲೆಗಳ ಸುಮಾರು 700ಕ್ಕೂ ಅಧಿಕ ಮಂದಿ ಈ ಸಮಾವೇಶದಲ್ಲಿ ಭಾಗವಹಿಸಿದ್ದರು.


ಆಗಸ್ಟ್ 19ರಂದು ಸಂಜೆ ಮಾಜಿ ಜಿಲ್ಲಾ ಗವರ್ನರ್ ಡಾ. ರಾಜೀವ ಮಧುಕರ್ ಪ್ರಧಾನ್ ಸಮಾವೇಶವನ್ನು ಉದ್ಘಾಟಿಸಿದರು. 3181ರ ರೋಟರಿ ಜಿಲ್ಲಾ ಗವರ್ನರ್ ಎಂ.ಎಂ.ಸುರೇಶ್ ಚಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.


ಪೊಲೀಯೋವನ್ನು ನಿರ್ಮೂಲನೆ ಮಾಡುವ ವಿಚಾರದಲ್ಲಿ ರೋಟರಿಯದ್ದು ಪ್ರಧಾನ ಪಾತ್ರ. ವಿಶ್ವಾದ್ಯಂತ ಪೋಲಿಯೋ ನಿರ್ಮೂಲನೆ ರೋಟರಿಯ ಗುರಿಯಾಗಿದ್ದು, ಅದನ್ನು ಈಡೇರಿಸುವಲ್ಲಿ ಶಕ್ತರಾಗುತ್ತೇವೆ ಎಂದು ಈ ಸಂದರ್ಭ ಡಾ. ರಾಜೀವ್ ಮಧುಕರ್ ಪ್ರಧಾನ್ ಹೇಳಿದರು.

ಜಾಹೀರಾತು


ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಬಿ.ಸಂಜೀವ ಪೂಜಾರಿ ಗುರುಕೃಪ ವಹಿಸಿದ್ದರು. ರೋಟರಿ ಜಿಲ್ಲಾ ಪೋಲಿಯೋ ಚೆಯರ್‍ಮನ್ ಡಾ. ನಾರ್ಮನ್ ಮೆಂಡೋನ್ಸಾ ಈ ವರ್ಷ ಆಯೋಜಿಸಲಾದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭ ರೋಟರಿ ಮಾಜಿ ಜಿಲ್ಲಾ ಗವರ್ನರ್ ಆಗಿರುವ ಹಿರಿಯ ಮಾಹಿತಿ ಹಕ್ಕು ಕಾರ್ಯಕರ್ತ ಡಾ. ರವೀಂದ್ರನಾಥ್ ಶ್ಯಾನುಭಾಗ್ ಅವರು ಹಿರಿಯ ನಾಗರಿಕರ ರಕ್ಷಣಾ ಕಾಯಿದೆ 2007ರ ಕುರಿತು ಮಾಹಿತಿ ನೀಡಿದರು. ಮಕ್ಕಳಿಂದಲೇ ಹೆತ್ತವರಿಗೆ ತೊಂದರೆಗಳಾಗುತ್ತಿರುವ ಕುರಿತು ಹಲವು ಸಾಕ್ಷ್ಯ ಚಿತ್ರಗಳ ಮೂಲಕ ಅವರು ವಿವರಿಸಿದರು.
ಈ ಸಂದರ್ಭ ರೋಟರಿ ಜಿಲ್ಲಾ ಮಾಜಿ ಗವರ್ನರ್ ಯು.ಸೂರ್ಯಪ್ರಕಾಶ ಭಟ್, ಡಿಜಿಇ ಪಿ.ರೋಹಿತ್, ಡಿಜಿಎನ್ ಜೋಸೆಫ್ ಮ್ಯಾಥ್ಯೂ, ವಲಯ ೪ರ ಅಸಿಸ್ಟೆಂಟ್ ಗವರ್ನರ್ ಎ.ಎಂ.ಕುಮಾರ್, ಪಿಡಿಜಿ ಡಾ. ಭಾಸ್ಕರ್, ಜಿಲ್ಲಾ ಸದಸ್ಯತ್ವದ ಚಯರ್ ಮ್ಯಾನ್ ಸತೀಶ್ ಬೋಳಾರ್, ಜಿಲ್ಲಾ ಆರ್.ಟಿ.ಐ. ಚೆಯರ್ ಮನ್ ಬಿ.ವಿ.ಜವರೇಗೌಡ, ಎಕ್ಸ್‌ಟೆನ್ಶನ್ ಚೆಯರ್ ಮನ್ ಡಾ. ಅರವಿಂದ ಭಟ್, ಕ್ಲಬ್ ಕಾರ್ಯದರ್ಶಿ ಕೆ. ನಾರಾಯಣ ಹೆಗ್ಡೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಚೆಯರ್ ಮನ್ ಅಶ್ವನಿ ಕುಮಾರ್ ರೈ ಸ್ವಾಗತಿಸಿದರು. ಕಾರ್ಯದರ್ಶಿ ಬಸ್ತಿ ಮಾಧವ ಶೆಣೈ ವಂದಿಸಿದರು. ಕಿರಣ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮಕ್ಕೆ ಆಗಮಿಸಿ ಸಭಾಸದರ ಸಾಲಿನಲ್ಲಿ ಆಸೀನರಾಗಿ ರೋಟರಿ ಚಟುವಟಿಕೆಗಳ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ವೀಕ್ಷಿಸಿದರು.

ಆಗಸ್ಟ್ 20ರಂದು ಸದಸ್ಯತ್ವ ವೃದ್ಧಿ ಕುರಿತು ಪಿಡಿಜಿ ರಾಜೇಂದ್ರ ರೈ ಮಾತನಾಡಿದರೆ, ಡಾ. ರಾಜೀವ್ ಮಧುಕರ ಪ್ರಧಾನ್ ದಿಕ್ಸೂಚಿ ಭಾಷಣ ಮಾಡಿದರು. ಹೆಚ್ಚು ಹೆಚ್ಚು ಸದಸ್ಯರನ್ನು ರೋಟರಿ ಆಂದೋಲನಕ್ಕೆ ಸೇರಿಸಬೇಕು ಎಂದು ಸದಸ್ಯತ್ವ ಅಭಿವೃದ್ಧಿಯ ಚೇರ್‍ಮನ್ ಸತೀಶ್ ಬೋಳಾರ್ ಈ ಸಂದರ್ಭ ಕರೆ ನೀಡಿದರು. ಹೆಚ್ಚು ರೋಟರಿ ಕ್ಲಬ್ ಸ್ಥಾಪಿಸಿ ಸಮಾಜ ಸೇವೆಗೆ ಕೊಡುಗೆ ನೀಡಬೇಕು ಎಂದು ವಿಸ್ತರಣಾ ಚೇರ್‍ಮನ್ ಡಾ. ಅರವಿಂದ ಭಟ್ ಸಲಹೆ ನೀಡಿದರು. ಯು.ಸೂರ್ಯಪ್ರಕಾಶ್ ಭಟ್ ಇಡೀ ರೋಟರಿ ಕುರಿತು ಪಕ್ಷಿನೋಟ ನೀಡಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ