ಪೆರುವಾಯಿಯ ಸಂತೋಷ್ ಬಾಳು ಸಂತೋಷವಾಗಬೇಕಾದರೆ….

www.bantwalnews.com report

ಪೆರುವಾಯಿ ಅಶ್ವಥ ನಗರ ನಿವಾಸಿ ಗಾರೆ ಹಾಗೂ ಮರದ ಕೆಲಸಗಳನ್ನು ನಿರ್ವಹಿಸುತ್ತಿದ್ದ ಸಂತೋಷ್ (21) ಮರ ಏರಿ ಮಾವಿನ ಕಾಯಿ ಕೊಯ್ಯುವ ಸಮಯ ಆಯ ತಪ್ಪಿ ನೆಲಕ್ಕುರುಳಿದ್ದಾರೆ. ಇದರಿಂದ ಸೊಂಟದ ಭಾಗಕ್ಕೆ ಬಲವಾದ ಏಟಾಗಿ ಮಂಗಳೂರು ಸರ್ಕಾರಿ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಗೆ ಮೇ.14ರಂದು ಸೇರ್ಪಡೆಯಾಗಿದ್ದರು. ಬೆನ್ನುಹುರಿಗೆ ಪೆಟ್ಟಾಗಿರುವುದರಿಂದ ಸರಿಪಡಿಸುವುದು ಕಷ್ಟ ಎಂದು 10 ದಿನದಲ್ಲಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಜಾಹೀರಾತು

ಅಶ್ವಥ ನಗರ ನಿವಾಸಿ ಐತ್ತಪ್ಪ ನಾಯ್ಕ ಅವರು ಕಳೆದ 25 ವರ್ಷಗಳಿಂದ ಪೆರುವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಣ್ಣ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದಾರೆ. ಇವರು ಅಡಿಸ್ಥಳ ತಮ್ಮ ಹೆಸರಿಗೆ ಮಾಡಿಕೊಂಡುವಂತೆ ಪಂಚಾಯಿತಿ, ಕಂದಾಯ ಇಲಾಖೆ ಅಲೆದಾಟ ನಡೆಸಿದ್ದರಾದರೂ ಸರಿಯಾದ ಮಾಹಿತಿ ಸಿಗದೆ ಇನ್ನೂ ಅಡಿಸ್ಥಳ ಇವರ ಹೆಸರಿಗಾಗಿಲ್ಲ. ಇದರಿಂದ ಸಾಲ ಮಾಡಿ ಖಾಸಗೀ ಆಸ್ಪತ್ರೆಯ ನುರಿತ ವೈದ್ಯರಲ್ಲಿ ಚಿಕಿತ್ಸೆ ಪಡೆಯಲೂ ಸಾಧ್ಯವಾಗಿಲ್ಲ.

ಮನೆ ಮಂದಿ ಶೌಚಕ್ಕೆ ಪಕ್ಕದ ಗುಡ್ಡ ಅಥವಾ ತೋಡನ್ನೇ ಆಶ್ರಯಿಸುವ ಸ್ಥಿತಿ ಇದೆ. ಸರ್ಕಾರ ಪರಿಶಿಷ್ಠ ಪಂಗಡ ಹಾಗೂ ಪರಿಶಿಷ್ಠ ಜಾತಿಯವರ ಅಭಿವೃದ್ಧಿಗೆ ಕೋಟಿ ಕೋಟಿ ತೆಗೆದಿರುಸುತ್ತಿದೆ ಇವರಿಗೆ ಏನೂ ಸಿಕ್ಕಿಲ್ಲ.

ಜಾಹೀರಾತು

ಮರದಿಂದ ಬಿದ್ದು ಜಿಲ್ಲಾ ಸರ್ಕಾರಿ ಆಸ್ಪತ್ರೆ ಸೇರಿಕೊಂಡು ಮೂರು ನಾಲ್ಕು ದಿನವಾದರೂ ಸರಿಯಾಗಿ ಚಿಕಿತ್ಸೆ ಲಭಿಸದಿದ್ದಾಗ ಸಾಮಾಜಿಕ ಹೋರಾಟಗಾರ ಮಂಜುನಾಥ ಶೆಟ್ಟಿ ಕಲಾತಿಮಾರು ಅವರ ಮೂಲಕ ಶಾಸಕಿ ಶಕುಂತಳಾ ಟಿ ಶೆಟ್ಟಿ ಅವರಿಗೆ ಮಾಹಿತಿ ನೀಡಿ ಅಧಿಕಾರಿಗಳು ಸರಿಯಾಗಿ ನೊಡಿಕೊಳ್ಳಲು ಸೂಚನೆ ನೀಡಿದರು. ಅದನ್ನು ಬಿಟ್ಟರೆ ಇವರ ಸಹಾಯಕ್ಕೆ ಯಾರೊಬ್ಬರೂ ಆಗಮಿಸಿಲ್ಲ.

ಮೂವರು ಹೆಣ್ಣು ಮಕ್ಕಳ ಪೈಕಿ ಗೀತಾ ಹಾಗೂ ನಳಿನಾಕ್ಷಿ ಹಣದ ಕೊರತೆಯಿಂದ ವಿದ್ಯಾಬ್ಯಾಸ ಮುಂದುವರಿಸಲಾಗದೆ 10ನೇ ತರಗತಿಗೇ ಶಾಲೆಗೆ ವಿದಾಯ ಹೇಳಿದ್ದಾರೆ. ಇನ್ನೋರ್ವಾಕೆ ಜ್ಯೋತಿ ಮಾಣಿಲ ಪ್ರೌಢ ಶಾಲೆಯಲ್ಲಿ 8ನೇ ತರಗತಿ ವಿದ್ಯಾಬ್ಯಾಸ ಮಾಡುತ್ತಿದ್ದಾಳೆ.

ಜಾಹೀರಾತು

ಮನೆಯಲ್ಲಿ ಕಿತ್ತು ನಿನ್ನುವ ಬಡತನ, ಮೂವರು ತಂಗಿಯಂದಿರ ವಿದ್ಯಾಬ್ಯಾಸದ ಜವಾಬ್ದಾರಿ.. ಟೆಂಟ್ ಹಾಕಿದಂತಿರುವ ಒಂದೇ ಬಾಗಿಲಿನ ಮನೆಯಲ್ಲಿ ಏಳು ಮಂದಿ ವಾಸ.. ಹೊಸ ಮನೆ ಕಟ್ಟಲು ಜಾಗದ ದಾಖಲೆ ಇನ್ನೂ ಕೈಸೇರಿಲ್ಲ, ಇದ್ದ ಪಡಿತರ ಚೀಟಿಯೂ ತಿರಸ್ಕೃತವಾಗಿದೆ.. ಅಚಾನಕ್ ಆಗಿ ಮರದಿಂದ ಬಿದ್ದು ಬೆನ್ನುಗುರಿಗೆ ಪೆಟ್ಟಾಗಿ, ಮನೆಯ ಆಧಾರ ಸ್ಥಂಭವಾಗಿದ್ದ ಸಂತೋಷ್ ಹಾಸಿಗೆ ಹಿಡಿಯುವಂತಾಗಿದೆ..

ಬೆನ್ನು ಹುರಿಯ ಚಿಕಿತ್ಸೆಗೆ ಲಕ್ಷಾಂತರ ಖರ್ಚು ತಗುಲುವ ಸಾಧ್ಯತೆ ಇದ್ದು, ಸಂತೋಷ್ ಗೆ ದಾನಿಗಳ ಸಹಾಯ ಹಸ್ತ ಬೇಕಿದೆ. ಮಾಣಿಲ ಕರ್ನಾಟಕ ಬ್ಯಾಂಕ್ ನಲ್ಲಿ ಇವರು ಖಾತೆಯನ್ನು ಹೊಂದಿದ್ದು, ಖಾತೆ ಸಂಖ್ಯೆ 502250010042060 ಆಗಿದೆ.

ಸರ್ಕಾರ ವರ್ಷಕ್ಕೊಂದು ಕಾನೂನು ತಂದು ಗ್ರಾಮೀಣ ಭಾಗದ ಅವಿದ್ಯಾವಂತರಲ್ಲಿ ಗೊಂದಲ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. 2010ರ ಹಿಂದಿನ ಪಡಿತರ ಚೀಟಿಗಳನ್ನು ಆಧಾರ್ ಹಾಗೂ ಮೊಬೈಲ್ ಸಂಖ್ಯೆ ನೀಡಿ ಉಳಿಸಿಕೊಳ್ಳುವ ಕಾರ್ಯವನ್ನು ಮಾಡಬೇಕಿತ್ತು. ಆದರೆ ಅಂತ್ಯೋದಯ ಪಡಿತರ ಚೀಟಿಯೂ ರದ್ದಾಗಿದೆ. ಇದರಿಂದ ಸಿಗುವ ಪಡಿತರವೂ ಸ್ಥಗಿತವಾಗಿ ಒಂದು ಹೊತ್ತು ಊಟಕ್ಕೂ ಪರದಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಪೆರುವಾಯಿಯ ಸಂತೋಷ್ ಬಾಳು ಸಂತೋಷವಾಗಬೇಕಾದರೆ…."

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*