ಬಂಟ್ವಾಳ

8ರಿಂದ 10ರವರೆಗೆ ಬ್ರಹ್ಮಕಲಶೋತ್ಸವ, ನಾಗಪ್ರತಿಷ್ಠೆ, ನೇಮೋತ್ಸವ

ನರಿಕೊಂಬು ಗ್ರಾಮದ ನಿನಿಪಡ್ಪು ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ ನವೀಕರಣಗೊಂಡಿದ್ದು ಪುನರ್ ಪ್ರತಿಷ್ಠ ಬ್ರಹ್ಮಕಲಶೋತ್ಸವ, ನಾಗಪ್ರತಿಷ್ಠೆ ಹಾಗೂ ದೈವಗಳಿಗೆ ನೇಮೋತ್ಸವವು ಮೇ. 8ರಿಂದ 10ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಕಾರಂತ ತಿಳಿಸಿದರು.

ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ನರಿಕೊಂಬು ಗ್ರಾಮದ ಕೆದ್ದೇಲು ಎಂಬ ಸ್ಥಳದಲ್ಲಿ ಮೊಗೇರ ಬಂಧುಗಳು ಗ್ರಾಮದೈವ ನಾಲ್ಕೈತ್ತಾಯ ಪಂಜುರ್ಲಿ, ಕಲ್ಲುಡ ಕಲ್ಲುರ್ಟಿ, ಸಮಾಜದ ಕುಲದೈವಗಳಾದ ಆದಿಮೊಗೇರ್ಕಳ ದೈವಗಳು, ತನ್ನಿಮಾನಿಗ, ಧರ್ಮದೈವಗಳನ್ನು ಆರಾಧಿಸಿಕೊಂಡು ಬರುತ್ತಿದ್ದರು. ಆದರೆ ಯಾವುದೋ ಒಂದು ಸಂದರ್ಭದಲ್ಲಿ ಮೊಗೇರ ಬಂಧುಗಳು ಕೆದ್ದೇಲು ಜಮೀನು ಬಿಟ್ಟು ನಿನ್ನಿಪಡ್ಪು ಸ್ಥಳಕ್ಕೆ ಬಂದು ನೆಲೆಸಿದ್ದರು. 1995-96 ಸಾಲಿನಲ್ಲಿ   ಮೊಗೆರ್ಕಳ ದೈವಸ್ಥಾನದಲ್ಲಿ 30 ಸೆಂಟ್ಸ್ ಸ್ಥಳವು ಮಂಜುರಾಗಿತ್ತು. ದೈವಸ್ಥಾನ ನಿರ್ಮಾಣ, ಧಾರ್ಮಿಕ ವಿಧಿಗಳು ನಡೆದಿದ್ದರೂ ವಾಸ್ತು ವ್ಯವಸ್ಥೆ ಸರಿಯಾಗದೆ ಪುನಃ ಗುಡಿಯನ್ನು ಬದಲಿಸಿ  ಹೊಸದಾಗಿ ಬ್ರಹ್ಮಕಲಶೋತ್ಸವ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.

ವೇ.ಮೂ. ನರಿಕೊಂಬು ರಾಜಗೋಪಾಲಚಾರ್ಯ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕಲಶ ವೈದಿಕ ವಿಧಿಗಳು ನಡೆಯಲಿದೆ. ಮೇ.೮ರಂದು ಸಂಜೆ 3.30 ಕ್ಕೆ  ಮೊಗರ್ನಾಡು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ವಠಾರದಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮೇ.೯ರಂದು ಧಾರ್ಮಿಕ ವಿಧಿವಿಧಾನಗಳು ಹಾಗೂ ಧಾರ್ಮಿಕ ಸಭೆ ನಡೆಯಲಿದ್ದು ಮೇ.೧೦ರಂದು ಬೆಳಿಗ್ಗೆ ಶ್ರೀ ನಾಗ ಆದಿಮೊಗೆರ್ಕಳ ಪರಿವಾಋ ದೈವದ ಪ್ರತಿಷ್ಠೆ ಹಾಘೂ ನವಕಲಶ, ಸಾನಿಧ್ಯ ಕಲಶಾಭಿಷೇಕ ನಡೆಯಲಿದ್ದು ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮಿಜಿ ಆಶೀರ್ವಚನ ನೀಡಕಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು ಸಹಿತ ಅನೇಕ ಗಣ್ಯರು ಭಾಗವಹಿಸುವುದಾಗಿ ಅವರು ತಿಳಿಸಿದರು. ರಾತ್ರಿ ಶ್ರೀ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಅವರು ವಿವರ ನೀಡಿದರು. ಪತ್ರಿಕಾ ಗೋಷ್ಟಿಯಲ್ಲಿ ಜೀಣೋದ್ದಾರ ಸಮಿತಿ ಗೌರವಾಧ್ಯಕ್ಷ ಬಾಬು ಮಾಸ್ತರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ನಾಟಿ,  ಉಪಾಧ್ಯಕ್ಷರುಗಳಾದ ಉಮೇಶ್ ಬೋಳಂತೂರು, ದೇವರಾಜ ಪೂಜಾರಿ, ಕೇಶವ ಪಲ್ಲತ್ತಿಲ, ಪುರುಷೋತ್ತಮ ಸಾಲ್ಯಾನ್, ಮಾಧವ ಕರ್ಬೇಟ್ಟು, ಪ್ರೇಮನಾಥ ಶಟ್ಟಿ ಅಂತರ, ಪ್ರಮುಖರಾದ ಮೋನಪ್ಪ ಎನ್. ಜಿನರಾಜ ಕೋಟ್ಯಾನ್, ಎಂ.ಕೃಷ್ಣಪ್ಪ ನಾಯ್ಕ, ಚಂದ್ರಹಾಸ ಶಂಕರಕೋಡಿ, ಸೇಸಪ್ಪ ಮಾಸ್ತರ್ ಹಾಜರಿದ್ದರು.

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ