ಬಂಟ್ವಾಳ: ಕೊಳಕೆಯ ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ ಸ್ವಾತಂತ್ರೋತ್ಸವವನ್ನು ಮುಹಮ್ಮದ್ ಸೂಫಿ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಸಂದೇಶ ಭಾಷಣ ಮಾಡಿದ ಎಂಜೆಎಂ ಮುಖ್ಯ ಗುರುಗಳಾದ ಸಾಲಿಂ ಸ ಅದಿ ಭಾರತ ದೇಶಕ್ಕೆ ಪೂರ್ವಿಕರು ಮಾಡಿದ ತ್ಯಾಗ ಬಲಿದಾನವನ್ನು ಸ್ಮರಿಸಿದರು.
ಎಂಜೆಎಂ ಕಾರ್ಯದರ್ಶಿ ಗಳಾದ ಫಾರೂಕ್ ಅಲಿಫ್, ಕೋಶಾಧಿಕಾರಿ ಬಶೀರ್ ಪಿಜೆ, ಉಪಾಧ್ಯಕ್ಷರಾದ ಮುಹಮ್ಮದ್, ಮಾಜಿ ಪಂಚಾಯತ್ ಸದಸ್ಯರಾದ ಹಮೀದ್ ಕೆ, ನಿಝರ್, ಕರೀಂ ಹೈದ್ರಾಬಾದ್, ಹಮೀದ್ ಎಆರ್ ಡಿಕೆ, ಅಲ್ತಾಫ್ ಎಸ್.ವೈ.ಎಸ್. ಮುಹಮ್ಮದ್ ಕೆಎಂಜೆ, ಇಸ್ಮಾಯಿಲ್ ಪಂಜಾಜೆ, ಆಫ್ರಿದ್ ಎಸ್.ಎಸ್.ಎಫ್., ಹಿದಾಯತುಲ್ ಇಸ್ಲಾಂ ಮದರಸದ ಶಿಕ್ಷಕರು ಉಪಸ್ಥಿತರಿದ್ದರು. ಸ್ವಾತಂತ್ರ ಉತ್ಸವ ಸ್ಪರ್ಧೆ ಯಲ್ಲಿ ವಿಜೇತ ರಾದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ, ಮಿಲಾದ್ ಕಾರ್ಯಕ್ರಮದ ತಂಡಗಳ ಹೆಸರು ಅನಾವರಣ ಮಾಡಲಾಯಿತು, ಮುಖ್ಯ ಗುರುಗಳಾದ ಅಬ್ದುಲ್ ರಝಕ್ ಸಖಾಫಿ ನಿರೂಪಿಸಿದರು.