ಕಂಬಳ ಜಾನಪದೀಯ ಕ್ರೀಡೆಯಾಗಿದ್ದು, ಕೋರ್ಟಿನಲ್ಲಿ ಪರವಾದ ತೀರ್ಪು ಬರಲಿ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶಯ ವ್ಯಕ್ತಪಡಿಸಿದ್ದಾರೆ.
ಒಡಿಯೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲ್ಲಿಕಟ್ಟು ಎಂಬ ಕಾರ್ಯಕ್ರಮದಲ್ಲಿ ಪ್ರಾಣ ಹೋಗುತ್ತದೆ. ಆದರೆ ಕಂಬಳ ಹಾಗಲ್ಲ, ಅದೊಂದು ಜಾನಪದೀಯ ಕ್ರೀಡೆ. ಹಿಂಸೆರಹಿತವಾದ ಕಂಬಳ ನಡೆಯಬೇಕು. ಕಂಬಳ ಕೃಷಿಕನಲ್ಲಿ ಉತ್ಸಾಹ ಮೂಡಿಸುತ್ತದೆ. ನಮ್ಮ ಸಂಸ್ಕೃತಿಯ ಭಾಗವಾಗಿ ಕಂಬಳ ಆಚರಣೆ ನಡೆಯುತ್ತಿದೆ. ನಂಬಿಕೆಗೆ ಧಕ್ಕೆ ಬಾರದಂತೆ ಕಂಬಳ ಆಚರಣೆಯಾಗುವಂತಾಗಬೇಕು. ಹಿಂಸಾರಹಿತ ಕಂಬಳ ನಮ್ಮವರು ಮಾಡಿ ಯಶಸ್ವಿಯಾಗಿದ್ದಾರೆ. ಜನಬಲ, ಪ್ರೋತ್ಸಾಹ ಕಂಬಳಕ್ಕೆ ಬೇಕು. ಕೋರ್ಟಿನಲ್ಲಿಯೂ ಕಂಬಳದ ಪರವಾಗಿಯೇ ತೀರ್ಪು ಬರಲಿ ಎಂದು ಹೇಳಿದರು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to comment on "ಕಂಬಳಕ್ಕೆ ಒಡಿಯೂರು ಶ್ರೀ ಬೆಂಬಲ"