ವಿಟ್ಲ

ಪಿಕಪ್ ಗೆ ಬೈಕ್ ಡಿಕ್ಕಿ, ವಿಟ್ಲದ ಫೊಟೋಗ್ರಾಫರ್ ಸ್ಥಳದಲ್ಲೇ ಸಾವು

ವಿಟ್ಲ ಬಸವನಗುಡಿ ಸಮೀಪ ಕಟ್ಟೆ ನಿವಾಸಿ ವೀರಪ್ಪ ಮೂಲ್ಯ ಅವರ ಪುತ್ರ ಧನಂಜಯ ಕುಲಾಲ್ (34) ಧರ್ಮಸ್ಥಳ ಠಾಣಾ ವ್ಯಾಪ್ತಿಯ ಕೊಕ್ಕಡ ಉಪ್ಪಾರಪಳಿಕೆಯಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

bantwalnews.com report

ಜಾಹೀರಾತು

ಶುಕ್ರವಾರ ಪಿಕಪ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ, ಅಯ್ಯಪ್ಪ ವ್ರತಧಾರಿಯೂ ಆಗಿದ್ದ ಧನಂಜಯ ಸ್ಥಳದಲ್ಲೇ ಮೃತಪಟ್ಟರು.

ಫೊಟೋಗ್ರಾಫರ್ ಆಗಿದ್ದ ಧನಂಜಯ್, ಮೊಬೈಲ್ ಅಂಗಡಿಯನ್ನೂ ನಡೆಸುತ್ತಿದ್ದರು. ಸಾಮಾಜಿಕವಾಗಿ ಎಲ್ಲರೊಡನೆ ಬೆರೆಯುತ್ತಿದ್ದ ಅವರು ಈ ವರ್ಷ ಅಯ್ಯಪ್ಪ ಮಾಲಾಧಾರಣೆ ಮಾಡಿದ್ದರು.

ಜಾಹೀರಾತು

ಕೊಕ್ಕಡ ಸಮೀಪ ಅರಸಿನಮಕ್ಕಿಯಲ್ಲಿರುವ ಪತ್ನಿ ಮನೆಯಲ್ಲಿ ಶಬರಿಮಲೆಗೆ ಹೋಗುವ ಬಗ್ಗೆ ತಿಳಿಸಲೆಂದು ಬೈಕಲ್ಲಿ ತೆರಳುತ್ತಿದ್ದ ಸಂದರ್ಭ, ಗೋಳಿತೊಟ್ಟು ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಪಿಕಪ್ ಇವರ ಬೈಕಿಗೆ ಡಿಕ್ಕಿ ಹೊಡೆದಿದೆ. ಪಿಕಪ್  ವಾಹನದ ಬದಿಯಲ್ಲಿರುವ ರಾಡ್‌ಗೆ ಅವರ ತಲೆ ಹೊಡೆದು ರಸ್ತೆ ಎಸೆಯಲ್ಪಟ್ಟ ಅವರ ತಲೆ ಛಿದ್ರಗೊಂಡಿದ್ದು, ಜೀವನ್ಮರಣ ಸ್ಥಿತಿಯಲ್ಲಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ಯಲು ಮುಂದಾಗುತ್ತಿದ್ದಂತೆ ಕೊನೆಯುಸಿರು ಎಳೆದಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಧನಂಜಯ ಅವರಿಗೆ ವರ್ಷದ ಹಿಂದೆ ವಿವಾಹವಾಗಿದ್ದು, ಒಂದು ಮಗುವಿದೆ. ಸಂಜೆ ವೇಳೆ ಮೃತದೇಹವನ್ನು ವಿಟ್ಲದ ಮನೆಗೆ ತರಲಾಗಿದ್ದು, ನೂರಾರು ಮಂದಿ ಜಮಾಯಿಸಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ