ನೀರಿನ ಪೈಪ್ ಒಡೆದ ಪರಿಣಾಮ, ಪಾಣೆಮಂಗಳೂರು ವೀರವಿಠಲ ದೇವಸ್ಥಾನದ ಎದುರಿನ ನಡು ರಸ್ತೆಯಲ್ಲಿ ಬೃಹತ್ ಗುಂಡಿಯೊಂದು ನಿರ್ಮಾಣವಾಗಿದೆ.
ಈ ರಸ್ತೆಯ ಅಡಿ ಭಾಗದಲ್ಲಿ ಹಾದು ಹೋಗಿರುವ ಬಂಟ್ವಾಳ ಪುರಸಭೆಗೆ ಸೇರಿದ ನೀರಿನ ಪೈಪ್ ಮಂಗಳವಾರ ಒಡೆದು ನೀರು ಸೋರಿಕೆಯಾಗಿದ್ದು ನೀರು ರಭಸದಿಂದ ಹರಿದು ರಸ್ತೆ ಅಡಿ ಭಾಗದ ಮಣ್ಣು ಕರಗಿದ್ದರಿಂದ ಬೆಳಗ್ಗಿನ ಜಾವ ವಾಹನ ಸಂಚರಿಸುವಾಗ ಈ ಹೊಂಡ ನಿರ್ಮಾಣವಾಗಿದೆ ಎಂದು ಸ್ಥಳೀಯರು ತಿಳಿಸಿದರು.
ಸ್ಥಳೀಯರು ಹೊಂಡದ ಸುತ್ತಲೂ ಊರಿನ ಜನರೇ ಕಲ್ಲುಗಳನ್ನು ಇಟ್ಟಿದ್ದಾರೆ. ಆದರೂ ವೇಗವಾಗಿ ಸಂಚಾರಿಸುವ ವಾಹನಗಳು ಅಪಘಾತಕ್ಕೀಡಾಗುತ್ತಿದ್ದು, ಕೂಡಲೇ ಪುರಸಭಾ ಅಧಿಕಾರಿಗಳು ಹೊಂಡವನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ಪೈಪ್ ಒಡೆದು ರಸ್ತೆಯಲ್ಲಿ ಬೃಹತ್ ಹೊಂಡ"