ಕ್ರಿಸ್ ಮಸ್ ಸಂಭ್ರಮ, ಇಗರ್ಜಿಗಳಲ್ಲಿ ದೀಪಾಲಂಕಾರ

ಕ್ರಿಸ್ಮಸ್ ಹಬ್ಬ ಆಚರಣೆಗೆ ಎಲ್ಲೆಡೆ ವ್ಯಾಪಕ ಸಿದ್ಧತೆ. ಕ್ರೈಸ್ತ ಬಾಂಧವರು ಈಗಾಗಲೇ ಹಬ್ಬದ ಸಿದ್ಧತೆ ನಡೆಸುತ್ತಿದ್ದಾರೆ.

ಲೊರೆಟ್ಟೋ ಚರ್ಚ್

ಸರ್ವಶಕ್ತ ದೇವರು ನಮ್ಮೀ ಲೋಕಕ್ಕೆ ತಮ್ಮ ಏಕಮಾತ್ರ ಪುತ್ರರನ್ನು ಕಾಣಿಕೆಯಾಗಿ ನೀಡಿದ ಹಬ್ಬವೇ ಕ್ರಿಸ್ಮಸ್.

ದೇವ ಕುಮಾರ ಯೇಸುಕ್ರಿಸ್ತರು ಈ ಧರೆಯಲ್ಲಿ ಹುಟ್ಟಿದಾಗ ಅವರ ದರ್ಶನ ಪಡೆಯಲು ದೂರ ರಾಷ್ಟ್ರಗಳಿಂದ ಬಂದು ಅವರನ್ನು ಹುಡುಕಿ, ಅವರ ಸನ್ನಿಧಿಯಲ್ಲಿ ತಮ್ಮ ಕಾಣಿಕೆ ಅರ್ಪಿಸಿದರು. ಮೂವರು ಜ್ಞಾನಿಗಳು. ಈ ಕಾರಣಗಳಿಂದ ಕ್ರಿಸ್ಮಸ್ ಹಬ್ಬ ಕಾಣಿಕೆಗಳ ಹಬ್ಬ ಎಂದೇ ಕರೆಯಲಾಗುತ್ತದೆ. ಕಾಣಿಕೆಯೆಂದರೆ ಕೇವಲ ಪಡೆದುಕೊಳ್ಳುವುದಲ್ಲ. ಅದಕ್ಕೂ ಮಿಗಿಲಾಗಿ ನೀಡುವುದು. ದೇವರ ಸೃಷ್ಟಿಯಲ್ಲಿ ಯಾರು ಹಸಿದವರಾಗಿ ಉಡಲು ವಸ್ತ್ರವಿಲ್ಲದವರಾಗಿ, ನಿರ್ಗತಿಕರಾಗಿ ಇರಬಾರದು. ಉಳ್ಳವರು ತಮ್ಮ ಸಂಪನ್ಮೂಲಗಳನ್ನು ಇಲ್ಲದವರೊಂದಿಗೆ ಹಂಚಿ ಅವರಿಗೆ ಕಾಣಿಕೆಯಾಗಬೇಕು ಎಂದು ಕ್ರಿಸ್ಮಸ್ ಕರೆ ನೀಡುತ್ತದೆ.

ಜಾಹೀರಾತು

ಲೊರೆಟ್ಟೋ ಇಗರ್ಜಿ ಕಳೆದ ವರ್ಷ ಅಮೃತೋತ್ಸವವನ್ನು ದೊಡ್ಡ ಸಂಭ್ರಮದಿಂದ ಆಚರಿಸಲಾಗಿತ್ತು. ಚರ್ಚಿನ ಧರ್ಮಗುರುಗಳಾದ ವಂದನೀಯ ಎಲಿಯಾಸ್ ಡಿಸೋಜ ಅವರು ಇಗರ್ಜಿಯ ಹಾಗೂ ಆಸುಪಾಸಿನ ಎಲ್ಲ ಮತೀಯ ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.

ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ ರಿಚರ್ಡ್ ಮಿನೇಜಸ್ ಹಾಗೂ ಕಾರ್ಯದರ್ಶಿಯಾಗಿ ಸಿಪ್ರಿಯನ್ ಡಿಸೋಜ ಸೇವೆ ಸಲ್ಲಿಸುತ್ತಿದ್ದಾರೆ. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಲೊರೆಟ್ಟೋದಲ್ಲಿ ವಿಶೇಷ ಸಂಭ್ರಮವಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಕ್ರಿಸ್ ಮಸ್ ಸಂಭ್ರಮ, ಇಗರ್ಜಿಗಳಲ್ಲಿ ದೀಪಾಲಂಕಾರ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*