ತುಂಬೆ ಡ್ಯಾಂ ಸಂತ್ರಸ್ತರಿಗೆ ನ್ಯಾಯ ಒದಗಿಸಿ

ಬಂಟ್ವಾಳ: ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ನೇತ್ರಾವದಿ ನದಿಗೆ ತುಂಬೆಯಲ್ಲಿ ಡ್ಯಾಂ ನಿರ್ಮಾಣಗೊಂಡಿದ್ದು ನೀರು ಶೇಖರಣೆಯಿಂದ ಜಲಾವೃತಗೊಳ್ಳಲಿರುವ ನೇತ್ರಾವತಿ ನದಿಯ ಇಕ್ಕೆಲದ ರೈತಾಪಿ ವರ್ಗಕ್ಕೆ ಅನ್ಯಾಯವಾಗುತ್ತಿದ್ದು ಜಿಲ್ಲಾಡಳಿತದ ವಂಚನೆಯ ಪ್ರವೃತ್ತಿಯನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಮಾಡಿ ರೈತರ ಹಿತಾಸಕ್ತಿ ಕಾಪಾಡಿ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಿದೆ.

ಸಂತ್ರಸ್ತ ರೈತರ ಸಭೆ ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸುವಂತೆ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ಆಗ್ರಹಿಸಿದ್ದಾರೆ.

ಡಿ.12ರಂದು ದ.ಕ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜರಗಿದ ಸಂತ್ರಸ್ತ ರೈತರ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸೂಚಿಸಿದ ಪರಿಹಾರೋಪಾಯಕ್ಕೆ ಯಾವುದೇ ಅನುಮತಿ ರೈತರಿಂದ ದೊರೆಯದೆ ಇದ್ದುದರಿಂದ ಪುನಃ ಏಕಾಭಿಪ್ರಾಯ ನೀಡುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು. 5 ಮೀ.ಎತ್ತರಕ್ಕೆ ನೀರು ನಿಂತಾಗ ಮುಳುಗಡೆಯಾಗುವ ಭೂಮಿಯ ಲಿಖಿತ ವಿವರ, 1 ಮೀ.ಎತ್ತರ ವೈಜ್ಞಾನಿಕವಾಗಿ ಶಿಫಾರಸ್ಸುಗೊಂಡಂತೆ  ಒರತೆ ಪ್ರದೇಶ ಸೇರಿಸಿ ನ್ಯಾಯಯುತ ಸೂಕ್ತ ಪರಿಹಾರ ನೀಡಿ, ಜಿಲ್ಲಾಧಿಕಾರಿಗಳೇ ನೇಮಿಸಿದ ಗ್ರಾಮ ಪ್ರತಿನಿಽಗಳನ್ನು ಸಭೆಗೆ ಲಿಖಿತವಾಗಿ ಆಹ್ವಾನಿಸಿ,ರೈತರ ಸಭೆಗೆ ರೈತರಿಗೆ ಲಿಖಿತ ಆಹ್ವಾನ ನೀಡಿ ಸಭೆ ನಡೆಸಿ ಜಿಲ್ಲಾಧಿಕಾರಿಗಳು ಹಿಂದೆ ಹೇಳಿದ ಹಾಗೆ ಮುಳುಗಡೆಪ್ರದೇಶದಲ್ಲಿ ರೈತರ ಸಭೆ ನಡೆಸಿ ಎಂಬುದಾಗಿ ಲಿಖಿತ ಮನವಿ ಸಲ್ಲಿಸಲಾಯಿತು.

ಜಾಹೀರಾತು

ಡಿ.1 ರಂದು ಎ.ಸಿ.ಯವರ ನೇತೃತ್ವದಲ್ಲಿ ಗ್ರಾಮೀಣ ಭಾಗಕ್ಕೆ ಎಕರೆಗೆ 3.99 ಲ.ರೂಪರಿಹಾರ ಎಂದು ತಿಳಿಸಿದರೆ ಜಿಲ್ಲಾಧಿಕಾರಿಗಳು ಎಕರೆಗೆ 2.4 ಲ.ರೂ.ಎಂದು ತಿಳಿಸಿದರು. 2011ರಲ್ಲಿ ಆಗಿನ ಜಿಲ್ಲಾಧಿಕಾರಿಗಳು ಎಕರೆಗೆ 50 ಲ.ರೂ.ಪರಿಹಾರ ಎಂದು ತಿಳಿಸಿದ್ದನ್ನು ನೆನಪಿಸಬಹುದು. ಸುಪ್ರಿಂಕೋರ್ಟ್ ನಿರ್ದೇಶನದಂತೆ ನಿಜದಾರಣೆಯ 4 ಪಟ್ಟು ಜಾಸ್ತಿ ಸಿಗಲಿದೆ ಎಂದು ತಿಳಿಸಿದರು. ಇದರಿಂದ ರೈತರು ನಿರಾಶರಾದರು.

ಮುಳುಗಡೆ ಪ್ರದೇಶಕ್ಕೆ ಮಣ್ಣು ತುಂಬಿಸಿ ಭೂಮಿಯನ್ನು ಎತ್ತರಿಸಲು  ಜಿಲ್ಲಾಧಿಕಾರಿಗಳು ಸಲಹೆ ನೀಡಿದರು. ಎಲ್ಲಾ ರೈತರು ಈ ರೀತಿ ಮಾಡಿದರೆ ನಿರೀಕ್ಷಿತ ನೀರು ಸಂಗ್ರಹಕ್ಕೆ ಪೆಟ್ಟು ಬೀಳಲಿದೆ. ರೈತರು ಸಹಮತಕ್ಕೆ ಬಾರದಿದ್ದರೆ ಭೂಸ್ವಾಧೀನ ಕಾನೂನು ಪ್ರಕಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

6 ತಿಂಗಳ ಮಟ್ಟಿಗೆ ಮುಳುಗಡೆ ಭೂಮಿಯನ್ನು ಎಕರೆಗೆ 28 ಸಾವಿರ ರೂ.ನಂತೆ ಬಾಡಿಗೆಗೆ ರೈತರು ನೀಡಬೇಕಾಗಿ ಜಿಲ್ಲಾಧಿಕಾರಿಗಳು ಕೇಳಿಕೊಂಡರು. ಮುಳುಗಡೆ ಭೂಮಿಯನ್ನು ಕ್ರಯಕ್ಕೆ ನೀಡುವುದಾದರೆ ನೇರಾ ನೇರಾ ಮಾತುಕತೆಗೂ ಅವಕಾಶವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದು ರಾಷ್ಟ್ರೀಯ ಹೆದ್ದಾರಿ ಪಕ್ಕ ಇರುವ ಇರುವ ಕೃಷಿ ಭೂಮಿಗೆ ರಾಷ್ಟ್ರೀಯ ಹೆದ್ದಾರಿಗೆ ನೀಡುವ ಪರಿಹಾರ ದರ ನೀಡಲಾಗುವುದೆಂದು ತಿಳಿಸಿದರು.

ಜಾಹೀರಾತು

8 ಮೀ.ಎತ್ತರಕ್ಕೆ ಸಭೆ ನಡೆಸಿ ಎಲ್ಲಾ ಸಂತ್ರಸ್ತ ರೈತರಿಗೆ ಏಕಕಾಲದಲ್ಲಿ ಪರಿಹಾರ ಒದಗಿಸಲು ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗುವುದು ಎಂದು ಮಾಹಿತಿ ನೀಡಿದರು. ರೈತರಿಗೆ ಈ ತನಕ ನೀಡಿದ ಅಂಕಿ ಅಂಶಗಳಿಂದ ಗೊಂದಲ ಉಂಟಾಯಿತೆ ಹೊರತು ನ್ಯಾಯ ದೊರೆಯದೆ ಇರುವುದರಿಂದ ಜನಪ್ರತಿನಿಧಿಗಳು ನ್ಯಾಯ ಒದಗಿಸುವಂತೆ ರೈತರು ಆಗ್ರಹಿಸಿದ್ದಾರೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ತುಂಬೆ ಡ್ಯಾಂ ಸಂತ್ರಸ್ತರಿಗೆ ನ್ಯಾಯ ಒದಗಿಸಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*