ವಿಟ್ಲ

ನವಗ್ರಾಮದ ನೀರು ಪೇಟೆಗೆ: ನಿವಾಸಿಗಳ ಆಕ್ಷೇಪ

ವಿಟ್ಲ: ನವಗ್ರಾಮದ 27 ಮನೆಗಳಿಗೆ ನೀರುಣಿಸುವ ನಿಟ್ಟಿನಲ್ಲಿ ಪೆರುವಾಯಿ ಗ್ರಾಮ ಪಂಚಾಯಿತಿ ಕೊರೆಸಿದ ಕೊಳವೆ ಬಾವಿಯ ನೀರು ಪೆರುವಾಯಿ ಪೇಟೆಗೆ ಕೊಂಡೊಯ್ಯುತ್ತಿರುವುದಕ್ಕೆ ನವಗ್ರಾಮ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ

.

ಪೆರುವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಚ್ಚಿರಪದವಿನಲ್ಲಿ ವಸತಿ ರಹಿತರ ಕಾಲನಿಯಿದ್ದು, ಸುಮಾರು 27ಕ್ಕೂ ಅಧಿಕ ಕುಟುಂಬಗಳು ವಾಸವಾಗಿದೆ. ಎಲ್ಲಾ ಮನೆಗಳಿಗೂ ಪ್ರತ್ಯೇಕ ನೀರಿನ ಸೌಲಭ್ಯವಿಲ್ಲದೆ ಹಿಂದಿನಿಂದಲೂ ಇರುವ ಕೈ ಪಂಪ್ ಮಾತ್ರ ಬಳಸಲಾಗುತ್ತಿತ್ತು.

ಜಾಹೀರಾತು

ಎರಡು ದಿನಗಳಿಂದ ನವ ಗ್ರಾಮ ಜನರಿಗೆ ನೀರು ನೀಡದೆ ಪೆರುವಾಯಿ ಪೇಟೆ ಹಾಗೂ ಮುಚ್ಚಿರಪದವು ರಸ್ತೆ ಬದಿಯ ಮನೆಗಳಿಗೆ ನೀರು ಪೂರೈಕೆಗೆ ಪೆರುವಾಯಿ ಪಂಚಾಯಿತಿ ಮುಂದಾಗಿದೆ ಎಂದು ಆರೋಪಿಸಲಾಗಿದೆ. ಎರಡು ವರ್ಷದಿಂದ ಟ್ಯಾಂಕ್ ಉಪಯೋಗಿಸದೆ ಈಗ ನೀರು ಹಾಕಿದ್ದರಿಂದ ಅದರಲ್ಲೂ ನೀರು ಸೋರಿಕೆಯಾಗುತ್ತಿದೆ.

ಹೊಸ ಕೊಳವೆ ಬಾವಿಯ ಪಂಪ್ ಚಾಲನೆಗೊಳ್ಳುತ್ತಿದ್ದಂತೆ ಕೈ ಪಂಪ್ ಅಳವಡಿಸಿದ ಹಳೆಯ ಕೊಳವೆ ಬಾವಿಯ ನೀರು ಆರುತ್ತಿದೆ ಎಂದು ಹೇಳಿರುವ ನವಗ್ರಾಮ ನಿವಾಸಿಗಳು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ