ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಆವರಣದಲ್ಲಿ ಜೂ.6 ಮತ್ತು 7 ರಂದು ಎರಡು ದಿನ ಹಲಸುಮೇಳ- ಆಹಾರೋತ್ಸವ ಆಯೋಜಿಸಲಾಗಿದೆ.

ಹಲಸು, ಮಾವು ಹಾಗೂ ತಾಜಾ ತರಕಾರಿಗಳು ಲಭ್ಯವಿರುತ್ತವೆ. ಕೇವಲ ಹಲಸು ಮಾತ್ರವಲ್ಲದೆ, ಮಾವಿನ ಹಣ್ಣಿನ ಪ್ರಿಯರಿಗಾಗಿ ಮಲ್ಲಿಕಾ, ಅಲ್ಫೋನ್ಸ್, ದಶ್ಹೇರಿ ಸೇರಿದಂತೆ ವಿವಿಧ ತಳಿಯ ಉತ್ಕೃಷ್ಟ ಗುಣಮಟ್ಟದ ಮಾವಿನಹಣ್ಣುಗಳು ಲಭ್ಯವಿರಲಿವೆ. ಗ್ರಾಹಕರಿಗೆ ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ಮಲೆನಾಡಿನ ತಾಜಾ ತರಕಾರಿಗಳ ವಿಶೇಷ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸ್ಥಳದಲ್ಲೇ ಬಿಸಿಬಿಸಿ ಆಹಾರ ತಯಾರಿ: ತೆಂಗಿನೆಣ್ಣೆಯ ವಿಶೇಷತೆ

ಆಹಾರ ಪ್ರಿಯರಿಗಾಗಿ ಮೇಳದ ಆವರಣದಲ್ಲೇ ಬಿಸಿಬಿಸಿಯಾದ ಹಲಸಿನಕಾಯಿ ದೋಸೆ, ಬೋಂಡಾ, ಪೋಡಿ, ಉಪ್ಪುಸೊಳೆ ರೊಟ್ಟಿ, ಗುಳಿ ಅಪ್ಪ, ರಸಾಯನ, ಗುಜ್ಜೆ ಮಂಚೂರಿ, ಹಲಸಿನಹಣ್ಣಿನ ಪಾಯಸ, ಬೆರಟಿ ಪಾಯಸ, ಹಾಗೂ ಹಲಸಿನ ಹಣ್ಣಿನ ಜಿಲೇಬಿ ಸೇರಿದಂತೆ ಹತ್ತಾರು ಬಗೆಯ ತಿಂಡಿ-ತಿನಿಸುಗಳನ್ನು ಸ್ಥಳದಲ್ಲೇ ಸಿದ್ಧಪಡಿಸಿ ನೀಡಲಾಗುತ್ತದೆ. ಸಾರ್ವಜನಿಕರ ಆರೋಗ್ಯ ಮತ್ತು ಸಾಂಪ್ರದಾಯಿಕ ರುಚಿಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಎಲ್ಲಾ ಆಹಾರ ಪದಾರ್ಥಗಳ ತಯಾರಿಕೆಗೆ ಕೇವಲ ತೆಂಗಿನೆಣ್ಣೆಯನ್ನು ಮಾತ್ರ ಬಳಸುತ್ತಿರುವುದು ಆಹಾರೋತ್ಸವದ ಪ್ರಮುಖ ವಿಶೇಷತೆಯಾಗಿದೆ. ಅಲ್ಲದೇ ಹಪ್ಪಳ, ಸೋಂಟೆ, ಉಂಡ್ಳಕಾಳು, ಚಿಪ್ಸ್, ಬಾಳೆಹಣ್ಣು ಹಲ್ವ, ಹಲಸಿನಹಣ್ಣಿನ ಹಲ್ವ ಕೂಡಾ ಲಭ್ಯವಿದೆ. ಗುಣಮಟ್ಟಕ್ಕೆ ಇಲ್ಲಿ ಮೊದಲ ಆದ್ಯತೆ ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಸಾಂಸ್ಕೃತಿಕ ವೈಭವ
ಆಹಾರ ಮತ್ತು ಕೃಷಿ ಮೇಳಕ್ಕೆ ಪೂರಕವಾಗಿ ಎರಡು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯ ಆವರಣದಲ್ಲಿ ಈ ಸಾಂಸ್ಕೃತಿಕ ಸೌರಭ ಅನಾವರಣಗೊಳ್ಳಲಿದ್ದು, ಕಲಾಭಿಮಾನಿಗಳಿಗೆ ರಸದೌತಣ ನೀಡಲಿದೆ



Be the first to comment on "ಜೂ. 6-7: ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಆವರಣದಲ್ಲಿ ‘ಹಲಸುಮೇಳ- ಆಹಾರೋತ್ಸವ’"