ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ನೇರಳಕಟ್ಟೆ ಹಾಗೂ ಕಬಕ ಪುತ್ತೂರು ನಡುವೆ ರೈಲ್ವೆ ಹಳಿ ಮೇಲೆ ಮರ ಬಿದ್ದ ಕಾರಣ ವಿದ್ಯುತ್ ತಂತಿ ಹಾನಿಗೊಳಗಾಗಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ನೇರಳಕಟ್ಟೆ ಮತ್ತು ಕಬಕ ಪುತ್ತೂರು ನಡುವೆ ಮರ ಬಿದ್ದ ಪರಿಣಾಮ ವಿದ್ಯುತ್ ಲೈನ್ ಹಾನಿಗೊಳಗಾಗಿದೆ., ಇದರಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ, ವಿದ್ಯುತ್ ಇಂಜಿನ್ ಮೂಲಕ ಸಂಚರಿಸುವ ರೈಲು ಸಂಖ್ಯೆ 56627 ಮಂಗಳೂರು ಸೆಂಟ್ರಲ್ ನಿಂದ ಸುಬ್ರಹ್ಮಣ್ಯ ರೋಡ್ ಕಡೆಗೆ ತೆರಳುವ ಪ್ಯಾಸೆಂಜರ್ ರೈಲನ್ನು ನೇರಳಕಟ್ಟೆ ಹಾಲ್ಟ್ನಲ್ಲಿ ನಿಲ್ಲಿಸಲಾಗಿದೆ; ವಿದ್ಯುತ್ ಸಂಪರ್ಕವಿಲ್ಲದ ಕಾರಣ ಈ ರೈಲಿಗೆ ಮುಂದೆ ಚಲಿಸಲು ಸಾಧ್ಯವಾಗುತ್ತಿಲ್ಲ.
ಮತ್ತೊಂದೆಡೆ, ಡೀಸೆಲ್ ಇಂಜಿನ್ ಮೂಲಕ ಸಂಚರಿಸುವ ರೈಲು ಸಂಖ್ಯೆ 16586 ಮುರುಡೇಶ್ವರ ದಿಂದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್ಪ್ರೆಸ್, ರಾತ್ರಿ 7:41ಕ್ಕೆ ಬಂಟ್ವಾಳದಿಂದ ಹೊರಟಿದೆ. ಅದನ್ನು ನೇರಳಕಟ್ಟೆ ಹಾಲ್ಟ್ನಲ್ಲಿ ಪ್ರಯಾಣಿಕರಿಗಾಗಿ ಈ ರೈಲಿಗೆ ತಾತ್ಕಾಲಿಕ ನಿಲುಗಡೆ ನೀಡಲಾಗಿದೆ.
ತುರ್ತು ಸಂದರ್ಭದಲ್ಲಿ ಪ್ರಯಾಣಿಸಬೇಕಾದ ಪ್ರಯಾಣಿಕರು ರೈಲು ಸಂಖ್ಯೆ 16586 ಅನ್ನು ಹತ್ತಿ ಮುಂದೆ ಪ್ರಯಾಣಿಸಲು ಸೂಚಿಸಲಾಗಿದೆ. ಅದರಂತೆ, ನೇರಳಕಟ್ಟೆ ಹಾಲ್ಟ್ನಲ್ಲಿ ತುರ್ತು ಪ್ರಯಾಣಿಕರಿಗಾಗಿ ಈ ರೈಲಿನ ಮೂಲಕ ಪರ್ಯಾಯ ವ್ಯವಸ್ಥೆ ಮಾಡಲಾಯಿತು. (Source: (Source: Dakshina Kannada Railway Users)