ಮಂಗಳೂರು ನಗರದ ಹೃದಯಭಾಗದಲ್ಲಿರುವ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಒಂದೇ ಛತ್ರದಡಿಯಲ್ಲಿ ಪ್ರೌಢ, ಪದವಿಪೂರ್ವ, ಪದವಿ ಶಿಕ್ಷಣ ಲಭ್ಯವಾಗುತ್ತದೆ. ಸಂಸ್ಥೆಯು ಶಿಕ್ಷಣಕ್ಕೆ ಯೋಗ್ಯವಾದ ಸುಂದರ ವಾತಾವರಣದಲ್ಲಿ ಆಕರ್ಷಣೀಯವಾಗಿ ಕಂಗೊಳಿಸುತ್ತಿದೆ. ನಂತೂರು ಪದವು ವಿವೇಕಾನಂದ ರಸ್ತೆಯಲ್ಲಿರುವ ಈ ಸಂಸ್ಥೆ ಶ್ರೀರಾಮಚಂದ್ರಾಪುರಮಠದ ಅಂಗ ಸಂಸ್ಥೆಯಾಗಿದೆ. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಪರಮಪೂಜ್ಯ ಶ್ರೀ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ, 2001ರಲ್ಲಿ ಶ್ರೀಮಠದ ಧರ್ಮಚಕ್ರ ಟ್ರಸ್ಟ್ ವತಿಯಿಂದ ಶ್ರೀ ಭಾರತೀ ಸಮೂಹ ಸಂಸ್ಥೆಯ ಸ್ಥಾಪನೆಯಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಈ ಸಂಸ್ಥೆ ಪೂರಕವಾಗಿದೆ.
ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಪ್ರಸ್ತುತ ಆಂಗ್ಲಮಾಧ್ಯಮ ಪ್ರೌಢಶಾಲೆ(8, 9, 10ನೇ ತರಗತಿ), ಪಿ.ಯು.ಸಿ ಹಾಗೂ ಪದವಿ ಶಿಕ್ಷಣ ನೀಡುತ್ತಿದೆ. ಪಿಯುಸಿಯಲ್ಲಿ ವಾಣಿಜ್ಯ ಇಬಿಎಸಿ, ವಿಜ್ಞಾನ ಪಿಸಿಎಂಬಿ, ಪಿಸಿಎಂಸಿ ವಿಭಾಗಗಳಿವೆ. ಪದವಿ ವಿದ್ಯಾರ್ಥಿಗಳಿಗೆ ಬಿ.ಸಿ.ಎ. ಮತ್ತು ಬಿ.ಕಾಂ.(ಬಿಸಿನೆಸ್ ಡಾಟಾ ಎನಲಿಟಿಕ್ಸ್ )ಕೋರ್ಸ್ಗಳು ಲಭ್ಯವಿದೆ. ಅನುಭವೀ ಬೋಧಕ ವೃಂದವು ವಿದ್ಯಾರ್ಥಿಗಳ ಯಶಸ್ಸಿಗಾಗಿ ಶ್ರಮಿಸುತ್ತಿದೆ. ಪಠ್ಯವಿಷಯಗಳ ಜೊತೆಯಲ್ಲಿ ಸಹಪಠ್ಯ ಚಟುವಟಿಕೆಗಳಾಗಿ, ಮೌಲ್ಯ ಶಿಕ್ಷಣ, ಬ್ಯಾಂಕಿಂಗ್ ತರಬೇತಿ, ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದೆ. ಪ್ರಶಾಂತ ಪರಿಸರ, ಉತ್ತಮ ತರಗತಿ ಕೊಠಡಿಗಳು, ಸುಸಜ್ಜಿತ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಪ್ರಯೋಗಾಲಯಗಳು, ನವೀಕೃತ ಕಂಪ್ಯೂಟರ್ ಲ್ಯಾಬ್, ವಿಶಾಲ ಮತ್ತು ವ್ಯವಸ್ಥಿತವಾದ ಹಾಗೂ ಅತ್ಯಧಿಕ ಪುಸ್ತಕಗಳನ್ನು ಹೊಂದಿರುವ ಬೃಹತ್ ಗ್ರಂಥಾಲಯವಿದೆ.
ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನವೀಕೃತ ಶಂಕರಶ್ರೀ ಸಭಾಭವನವಿದೆ. ಇದೀಗ ಕೋಚಿಂಗ್ ಗಾಗಿ ಸುಸಜ್ಜಿತ ಕ್ರಿಕೆಟ್ ಪಿಚ್ ನಿರ್ಮಾಣವಾಗಿದೆ. ವಾಲಿಬಾಲ್, ತ್ರೋಬಾಲ್, ಕಬಡ್ಡಿ, ಶಟ್ಲ್ ಆಟ ಆಡಲು ವ್ಯವಸ್ಥೆಯಿದೆ. ಯೋಗ, ಯಕ್ಷಗಾನ, ಭರತನಾಟ್ಯ, ಸಂಗೀತ, ಕರಾಟೆ, ಕಂಪ್ಯೂಟರ್ ಕೋರ್ಸ್ಗಳಲ್ಲದೇ ಸಿಇಟಿ, ನೀಟ್, ಸಿಎ, ಸಿಎಸ್ ಇತ್ಯಾದಿ ಕೋರ್ಸ್ಗಳಿಗೂ ಅವಕಾಶವಿದೆ. ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ. ಉಪಹಾರ ಕೇಂದ್ರವಿದೆ. ವಿದ್ಯಾರ್ಥಿಗಳಿಗೆ ಬಿಸಿಯೂಟ ಕಲ್ಪಿಸಲಾಗಿದೆ. ವಿದ್ಯಾರ್ಥಿನಿ, ವಿದ್ಯಾರ್ಥಿಗಳಿಗೆ ವಸತಿನಿಲಯ ವ್ಯವಸ್ಥೆಯೂ ಇದೆ.
ಕಳೆದ ಮೂರು ವರ್ಷಗಳಲ್ಲಿ ಪದವಿ ಪೂರ್ವ ಕಾಲೇಜು ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಇಲ್ಲಿ ಕಲಿತ ರ್ಯಾಂಕ್ ವಿಜೇತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಸಂಸ್ಥೆಯಲ್ಲಿ ಸನಾತನ ಸಂಸ್ಕೃತಿ, ಮೌಲ್ಯಗಳಿಗೆ ಒತ್ತುಕೊಟ್ಟು ಆಧುನಿಕ ವಿದ್ಯಾಭ್ಯಾಸವನ್ನು ನೀಡಲಾಗುತ್ತಿದೆ. ಕನ್ನಡ ಸಾಹಿತ್ಯಿಕ ಚಟುವಟಿಕೆಗಳು, ವೇದಪಾಠಶಾಲೆ, ಕೌಶಲ್ಯ ಅಭಿವೃದ್ಧಿ ಚಟುವಟಿಕೆ, ಮಾಹಿತಿ ಮತ್ತು ಬೇಸಿಗೆ ಶಿಬಿರಗಳು ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಪೂರಕವಾಗಿದೆ. ಶ್ರೀಗಳ ಮಾರ್ಗದರ್ಶನದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ವಿದ್ಯೆ ಪಡೆಯಲು ಇಲ್ಲಿ ಅವಕಾಶವಿದೆ. ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಅಧಿಕಾರಿಗಳು ಮತ್ತು ಅನೇಕ ಗಣ್ಯರು ಕಾಲೇಜಿಗೆ ಭೇಟಿ ನೀಡಿ, ಸುಸಜ್ಜಿತ ಪ್ರಯೋಗಾಲಯ ಮತ್ತು ಗ್ರಂಥಭಂಡಾರಗಳ ಬಗ್ಗೆ ಪ್ರಶಂಸಿಸಿದ್ದಾರೆ.ಮಂಗಳೂರಿನಲ್ಲಿ ಚಿರಪರಿಚಿತವಾಗಿರುವ ಈ ಸಂಸ್ಥೆಯಲ್ಲಿ ಪ್ರತೀ ವರ್ಷ ಭರ್ಜರಿ ಹಲಸು ಮೇಳ, ಆಹಾರೋತ್ಸವ ನಡೆಯುತ್ತದೆ. ಮುಂದಿನ ದಿನಗಳಲ್ಲಿ ಉದ್ಯೋಗ ಮೇಳ, ಅಂತರ್ ಕಾಲೇಜು ಸ್ಫರ್ಧೆಗಳು, ಸಾಂಸ್ಕೃತಿಕ ಮೇಳ ಆಯೋಜಿಸಲಾಗುತ್ತದೆ.
Be the first to comment on "ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ : ಒಂದೇ ಛತ್ರದಡಿಯಲ್ಲಿ ಹೈಸ್ಕೂಲ್, ಪದವಿಪೂರ್ವ, ಪದವಿ ಶಿಕ್ಷಣ"