ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಕುಂಭನಿಧಿಯ ಉದ್ಘಾಟನೆ ಮತ್ತು 48 ದಿವಸಗಳ ಸಂಧ್ಯಾ ಭಜನೆ ಪ್ರಾರಂಭೋತ್ಸವ ಸನ್ನಿಧಿಯಲ್ಲಿ ನಡೆಯಿತು.
ಬ್ರಹ್ಮ ಕಲಶ ಸಮಿತಿಯ ಕೋಶಾಧಿಕಾರಿ ನಾರಾಯಣ ಹೆಗ್ಡೆ ಕುಂಭ ನಿಧಿಯ ಉದ್ಘಾಟನೆ ನೆರವೇರಿಸಿದರು. ಸಂಧ್ಯಾ ಭಜನೆಯ ದೀಪ ಪ್ರಜ್ವಲನೆಯನ್ನು ಅರ್ಚಕ ರಘುಪತಿ ಭಟ್ ದಂಪತಿ, ಸೇವಾ ಸಮಿತಿ ಮಾಜಿ ಅಧ್ಯಕ್ಷರಾದ ಗೋಪಾಲ ಸುವರ್ಣ, ರಾಜೇಶ್ ಎಲ್. ನಾಯಕ್, ಸೋಮನಾಥ ನಾಯ್ಡು, ಶ್ರೀಧರ ಮಲ್ಲಿ ದಂಪತಿ ನೆರವೇರಿಸಿದರು.

https://www.opticworld.net/
ಈ ಸಂದರ್ಭ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಬಿ ವಿಶ್ವನಾಥ , ಕಾರ್ಯದರ್ಶಿ ಶಿವಶಂಕರ್, ಕೋಶಾಧಿಕಾರಿ ಮೋಹನ್, ಸದಸ್ಯರಾದ ಸತೀಶ್ ಕುಮಾರ್, ಬ್ರಹ್ಮ ಕಲಶ ಸಮಿತಿಯ ಕಾರ್ಯಾಧ್ಯಕ್ಷರಾದ ಸಂಜೀವ ಪೂಜಾರಿ ಗುರುಕೃಪ ,ಸಹ ಕೋಶಾಧಿಕಾರಿ ವಸಂತ್ ರಾವ್, ಸಮಿತಿಯ ಉಪಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಐತಪ್ಪ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು, ಶ್ರೀವತ್ಸ ಭಟ್ ಮತ್ತು ಸುದರ್ಶನ್ ಸಹಕರಿಸಿದರು.
Be the first to comment on "ಶ್ರೀ ರಕ್ತೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ: ಕುಂಭನಿಧಿ ಉದ್ಘಾಟನೆ, ಸಂಧ್ಯಾ ಭಜನಾ ಪ್ರಾರಂಭೋತ್ಸವ"