ಇತಿಹಾಸ ಅಧ್ಯಾಯನವು ನೈತಿಕ ಮೌಲ್ಯಗಳ ಉನ್ನತಿಗೆ ಅಡಿಗಲ್ಲು-ಇತಿಹಾಸ ಉಪನ್ಯಾಸಕರ ಕಾರ್ಯಾಗಾರದಲ್ಲಿ ಜಯಣ್ಣ

ಜಾಹೀರಾತು

ಇತಿಹಾಸ ಅಧ್ಯಾಯನವು ಮಾನವೀಯ ಮೌಲ್ಯಗಳ ಅಭ್ಯುದಯಕ್ಕೆ ಅಡಿಗಲ್ಲು. ಪ್ರಾಚೀನತೆಯ ಅಧ್ಯಯನವು ಭವಿಷ್ಯದಲ್ಲಿ ಸಂಸ್ಕಾರಯುಕ್ತ ಬದುಕಿನ ಅನುಷ್ಠಾನಕ್ಕೆ ಪೂರಕವಾಗಿರುತ್ತದೆ.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇತಿಹಾಸ ಅಧ್ಯಯನ ಅತ್ಯಗತ್ಯ ಎಂದು  ದ.ಕ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಡಿ.ಜಯಣ್ಣ ಹೇಳಿದರು.
  ಮಂಗಳೂರು:ಇತಿಹಾಸ ಅಧ್ಯಾಯನವು ಮಾನವೀಯ ಮೌಲ್ಯಗಳ ಅಭ್ಯುದಯಕ್ಕೆ ಅಡಿಗಲ್ಲು. ಪ್ರಾಚೀನತೆಯ ಅಧ್ಯಯನವು ಭವಿಷ್ಯದಲ್ಲಿ ಸಂಸ್ಕಾರಯುಕ್ತ ಬದುಕಿನ ಅನುಷ್ಠಾನಕ್ಕೆ ಪೂರಕವಾಗಿರುತ್ತದೆ.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇತಿಹಾಸ ಅಧ್ಯಯನ ಅತ್ಯಗತ್ಯ ಎಂದು  ದ.ಕ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಡಿ.ಜಯಣ್ಣ ಹೇಳಿದರು
ದ.ಕ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಇತಿಹಾಸ ಉಪನ್ಯಾಸಕರ ಸಂಘ ಹಾಗೂ ದ.ಕ ಜಿಲ್ಲಾ ಪ.ಪೂ ಕಾಲೇಜುಗಳ ಪ್ರಾಂಶುಪಾಲರ ಸಂಘದ ಜಂಟಿ ಆಶ್ರಯದಲ್ಲಿ ಮಂಗಳೂರಿನ ಬಿ.ಇ.ಎಂ ಕಾಲೇಜಿನಲ್ಲಿ ಗುರುವಾರ ನಡೆದ ಇತಿಹಾಸ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಇತಿಹಾಸವನ್ನು ಉಳಿಸಿ ಬೆಳೆಸುವ ಕಾರ್ಯ  ಸರ್ವರ ಆದ್ಯ ಕರ್ತವ್ಯ.ಆಧುನಿಕ ಯುಗದಲ್ಲಿ ಉತ್ತಮ ಗುಣ ನಡತೆಯ ಜೀವನ ಶೈಲಿಯ ಜ್ಞಾನ ವೃದ್ದಿಗೆ ಇದು ಪೂರಕವಾಗಿದೆ.ಬದುಕಲು ಆವಶ್ಯಕ ವಾದ ವಿದ್ಯೆಯು ಇತಿಹಾಸದಿಂದ ದೊರಕುತ್ತದೆ.ನಿರಂತರವಾಗಿ ದ.ಕ ಜಿಲ್ಲೆಯು ಫಲಿತಾಂಶ ದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಸಂಪಾದಿಸುತ್ತಾ ಬಂದಿದೆ.ಈ ವರ್ಷವೂ ಸರ್ವ ಉಪನ್ಯಾಸಕರ ಬೆಂಬಲದಿಂದ ಮತ್ತು ಕಠಿಣ ಪರಿಶ್ರಮದಿಂದ ಜಿಲ್ಲೆಯು  100% ಫಲಿತಾಂಶ ಪಡೆಯುವಂತಾಗಬೇಕು ಎಂದರು.
  ಬಿಇಎಂ ವಿದ್ಯಾಸಂಸ್ಥೆ ಯ ಸಂಚಾಲಕ ರೆವ.ಮನೋಜ್ ಕಾರ್ಯಾಗಾರವನ್ನು ಉದ್ಘಾಟಿಸಿದರು.ದ.ಕ. ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಯಾನಂದ ಸುವರ್ಣ, ಬಿಇಎಂ ಕಾಲೇಜಿನ ಪ್ರಾಂಶುಪಾಲೆ ಅಪರ್ಣ ಪ್ರವೀಣ್ ಚಂದ್ರ ಮುಖ್ಯ ಅತಿಥಿಗಳಾಗಿದ್ದರು.ದ.ಕ.ಜಿಲ್ಲಾ ಪ.ಪೂ ಇತಿಹಾಸ ಉಪನ್ಯಾಸಕರ ಸಂಘದ ಅಧ್ಯಕ್ಷ ಪ್ರಸನ್ನ ಎನ್.ಎಚ್ ,ಕಾರ್ಯದರ್ಶಿ ಐತ್ತಪ್ಪ.ಯು,ಉಪಾಧ್ಯಕ್ಷೆ ಪೂರ್ಣಿಮಾ ಕಾಮತ್, ಕೋಶಾಧಿಕಾರಿ ಗಾಯತ್ರಿ ಶೆಟ್ಟಿ, ಸಂಘಟನಾವ ಕಾರ್ಯದರ್ಶಿ ಮನಮೋಹನ ವೇದಿಕೆಯಲ್ಲಿದ್ದರು.
ಗೌರವಾರ್ಪಣೆ:   ಸಮಾರಂಭದಲ್ಲಿ ಮಂಗಳೂರು ವಿ.ವಿ.ಸೆನೆಟ್ ಸದಸ್ಯರಾಗಿ ಆಯ್ಕೆಯಾದ  ರಘರಾಜ್ ಕದ್ರಿ, ಫೆಬ್ರವರಿ ಯಲ್ಲಿ ನಿವೃತ್ತರಾಗಲಿರುವ ಸಂಘದ ಉಪಾಧ್ಯಕ್ಷೆ ಪೂರ್ಣಿಮಾ ಕಾಮತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು‌.
  ಇತಿಹಾಸ ಉಪನ್ಯಾಸಕ ಧರ್ಮಪಾಲ ಗೌಡ ಕಾರ್ಯಕ್ರಮ ನಿರೂಪಿಸಿದರು.ದ.ಕ ಜಿಲ್ಲೆಯ ವಿವಿಧ ಕಾಲೇಜುಗಳ ಉಪನ್ಯಾಸಕರು, ಪ್ರಾಚಾರ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

 

 

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಇತಿಹಾಸ ಅಧ್ಯಾಯನವು ನೈತಿಕ ಮೌಲ್ಯಗಳ ಉನ್ನತಿಗೆ ಅಡಿಗಲ್ಲು-ಇತಿಹಾಸ ಉಪನ್ಯಾಸಕರ ಕಾರ್ಯಾಗಾರದಲ್ಲಿ ಜಯಣ್ಣ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*