![](https://i0.wp.com/bantwalnews.com/wp-content/uploads/2024/05/29bhksrtc1.jpg?resize=576%2C1024&ssl=1)
ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ
ಜಾಹೀರಾತು
ಬಿ.ಸಿ.ರೋಡ್ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಹೊರಗಿನಿಂದ ಸುಂದರವಾಗಿದೆ. ಒಳಗೆ ಪ್ರವೇಶಿಸಿ ಬಸ್ಸಿಗಾಗಿ ಕಾಯುವಾಗ ಮಳೆ ಬಂದರೆ ಅದರ ನಿಜರೂಪ ಗೊತ್ತಾಗುತ್ತದೆ ಎಂದು ಪ್ರಯಾಣಿಕರು ದೂರುತ್ತಿದ್ದಾರೆ. ಕಾರಣ ಇಷ್ಟೇ. ಬುಧವಾರ ದಿನವಿಡೀ ಸುರಿದ ಭಾರಿ ಮಳೆಗೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಕಟ್ಟಡದ ಎದುರು ಹಾಕಲಾದ ಶೀಟ್ ಗಳು ಸೋರುತ್ತಿದೆ. ಪ್ರಯಾಣಿಕರಿಗಾಗಿ ಹಾಕಲಾದ ಆಸನಗಳಲ್ಲಿ ಕುಳಿತುಕೊಳ್ಳುವುದು ಕಷ್ಟವಾಗುತ್ತಿದೆ. ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೆ, ಶೀಟ್ ನಿಂದ ಬೀಳುವ ನೀರು ಇನ್ನೂ ಹೆಚ್ಚಿನ ವೇಗದಲ್ಲಿ ಸುರಿಯುತ್ತಿದ್ದು, ಅದಕ್ಕೆ ಬಕೆಟ್ ಗಳನ್ನು ಇಡಲಾಗಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ಮಳೆ ಬಂದ್ರೆ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಒಳಗೆ ಕೂತ್ಕೊಳ್ಳಲೂ ಆಗ್ತಿಲ್ಲ, ಕಾರಣವೇನು?"