ಮಂಗಳೂರಿನಲ್ಲಿ ಕ್ಯಾ.ಬ್ರಿಜೇಶ್ ಚೌಟ ಮನೆ ಮನೆ ಮಹಾಸಂಪರ್ಕ ಅಭಿಯಾನ, ಬೋಳೂರಿನಲ್ಲಿ ರೋಡ್ ಶೋ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಗೆ ಕೆಲವೇ ದಿನ ಬಾಕಿಯಿದ್ದು, ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರು ಮನೆ ಮನೆ ಮಹಾ ಸಂಪರ್ಕ ಅಭಿಯಾನದಲ್ಲಿ ತೊಡಗಿದ್ದಾರೆ. 

ಜಾಹೀರಾತು

ಬೆಳಗ್ಗೆ ತನ್ನದೇ ಬೂತ್ ಡೊಂಗರಕೇರಿ ವಾರ್ಡಿನ ಬೂತ್ ಸಂಖ್ಯೆ-117ರಲ್ಲಿ ಮತಯಾಚನೆ ಆರಂಭಿಸಿದ್ದು, ಬಳಿಕ ಕಾರ್ಯಕರ್ತರ ಜೊತೆಗೆ ಬೋಟ್ ಮೂಲಕ ಬೆಂಗ್ರೆ ವಾರ್ಡಿಗೆ ತೆರಳಿದ್ದಾರೆ. ಬೆಂಗ್ರೆಯಲ್ಲಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆಗೈದು ಮನೆ ಮನೆ ಭೇಟಿ ಕೈಗೊಂಡಿದ್ದಾರೆ. ಅಲ್ಲಿಂದ ಪಕ್ಷದ ಪ್ರಮುಖರ ಜೊತೆಗೆ ಬಂದರಿನ ಜೈನ ಬಸದಿಗೆ ತೆರಳಿದ ಚೌಟ, ಚುನಾವಣೆಗೆ ಸಿದ್ದತೆ ನಡೆಸುವಂತೆ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

ಅಲ್ಲಿಂದ ಕಾವೂರು, ಕುಂಜತ್ ಬೈಲಿಗೆ ತೆರಳಿದ ಕ್ಯಾ.ಬ್ರಿಜೇಶ್ ಚೌಟರಿಗೆ ಕಾರ್ಪೊರೇಟರುಗಳಾದ ಶರತ್ ಕುಮಾರ್, ಸುಮಂಗಲಾ ರಾವ್, ಮಾಜಿ ಕಾರ್ಪೊರೇಟರ್ ಕವಿತಾ ಸನಿಲ್ ಸಾಥ್ ನೀಡಿದ್ದಾರೆ. ಅಲ್ಲಿಯೂ ಹಲವು ಮನೆಗಳಿಗೆ ತೆರಳಿ ಮತಯಾಚನೆ ಮಾಡಿದ್ದಾರೆ. ಪಚ್ಚನಾಡಿಯ ನಾರಾಯಣ ಗುರು ಮಂದಿರದಲ್ಲಿ ಗುರುಪೂಜೆ ಕಾರ್ಯಕ್ರಮ ನಡೆಯುತ್ತಿದ್ದಲ್ಲಿಗೆ ತೆರಳಿ, ಸಮುದಾಯದ ಪ್ರಮುಖರ ಜೊತೆ ಸೇರಿ ಮತ ನೀಡುವಂತೆ ಕೇಳಿಕೊಂಡಿದ್ದಾರೆ.

ಫರಂಗಿಪೇಟೆಯ ಪುದು, ಕುಂಪನಮಜಲು ಬ್ರಿಜೇಶ್ ಚೌಟರ ತಂದೆಯ ಊರಾಗಿದ್ದು, ಹುಟ್ಟಿ ಬೆಳೆದ ಪರಿಸರದಲ್ಲಿ ತನ್ನ ಆಪ್ತರು, ಸಂಬಂಧಿಕರ ಜೊತೆಗೆ ಬೆರೆತಿದ್ದಾರೆ. ಅಲ್ಲಿನ ಆಪ್ತರು ಆಪ್ತವಾಗಿ ಬರಮಾಡಿಕೊಂಡು ತಮ್ಮವರನ್ನು ಗೆಲ್ಲಿಸುವ ಭರವಸೆ ನೀಡಿದ್ದಾರೆ. ಇದೇ ವೇಳೆ, ಕುಂಪನಮಜಲು ಶನೈಶ್ಚರಾಂಜನೇಯ ಮಂದಿರಕ್ಕೆ ತೆರಳಿದ ಚೌಟರು, ತಾನು ಸೇನೆಗೆ ಸೇರುವುದಕ್ಕೂ ಮೊದಲು ಇದೇ ಮಂದಿರದಲ್ಲಿ ಪ್ರಾರ್ಥಿಸಿ ತೆರಳಿದ್ದೆ. ಈ ಮಂದಿರಕ್ಕೂ ನನಗೂ ಭಾವನಾತ್ಮಕ ನಂಟು ಇದೆಯೆಂದು ತಿಳಿಸಿದ್ದಾರೆ.

ಜಾಹೀರಾತು

ಇದೇ ವೇಳೆ, ಆರೆಸ್ಸೆಸ್ ನಾಯಕರಾಗಿದ್ದ ದಿವಂಗತ ಕೊಡ್ಮಾಣ್ ಕಾಂತಪ್ಪ ಶೆಟ್ಟಿಯವರ ಮನೆಗೆ ತೆರಳಿದ ಬ್ರಿಜೇಶ್ ಚೌಟ, ಕಾಂತಪ್ಪ ಶೆಟ್ಟರ ಪತ್ನಿಯ ಆಶೀರ್ವಾದ ಪಡೆದರು. ಬಳಿಕ ತುಂಬೆ ಭಾಗದಲ್ಲಿ ಮನೆಗಳಿಗೆ ತೆರಳಿ ಮತದಾರರ ಆಶೀರ್ವಾದ ಕೇಳಿದರು.

ಸಂಜೆಯ ವೇಳೆಗೆ ಮೂಲ್ಕಿಗೆ ತೆರಳಿದ ಚೌಟರು, ಕೆಆರ್ ಸಿ ನಗರ, ಬಿಜಾಪುರ ಕಾಲನಿ, ಲಿಂಗಪ್ಪಯ್ಯ ಕಾಡು, ಕಾರ್ನಾಡು ಭಾಗದಲ್ಲಿ ಬಿರುಸಿನ ಮತಯಾಚನೆ ಕೈಗೊಂಡರು. ನಾರೀಶಕ್ತಿ ಈ ದೇಶದ ಶಕ್ತಿ, ಪ್ರಧಾನಿ ಮೋದಿಯವರು ನವರಾತ್ರಿಯಲ್ಲಿ ನವದುರ್ಗೆಯರನ್ನು ಆರಾಧಿಸುತ್ತಾರೆ. ಅದೇ ರೀತಿ ಚುನಾವಣೆ ದಿನ ಪ್ರತಿ ಬೂತಿನಲ್ಲಿ ಮೊದಲಿಗೆ ಒಂಬತ್ತು ಮಹಿಳೆಯರು ತೆರಳಿ ಮೋದಿಗೆ ಮತ ಹಾಕಬೇಕೆಂದು ಬ್ರಿಜೇಶ್ ಚೌಟ ಕರೆ ನೀಡಿದರು. ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಸಾಥ್ ನೀಡಿದರು.

ಜಾಹೀರಾತು

ಸಂಜೆಯ ಬಳಿಕ ಮಂಗಳೂರು ನಗರದ ಬೋಳೂರು ವಾರ್ಡ್ ನಲ್ಲಿ ಸುಲ್ತಾನ್ ಬತ್ತೇರಿ ಆಸುಪಾಸಿನಲ್ಲಿ ಶಾಸಕ ವೇದವ್ಯಾಸ ಕಾಮತ್ ಜೊತೆಗೆ ಕ್ಯಾ.ಬ್ರಿಜೇಶ್ ಚೌಟ ರೋಡ್ ಶೋ ನಡೆಸಿದರು. ಕಾರ್ಪೊರೇಟರ್ ಜಗದೀಶ್ ಶೆಟ್ಟಿ ಮತ್ತಿತರರು ಜೊತೆಗಿದ್ದರು. ರಾತ್ರಿಯಾದರೂ ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಸೇರಿ ಬಿಜೆಪಿ ಅಭ್ಯರ್ಥಿ ಜೊತೆಗೆ ಸಾಥ್ ನೀಡಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮಂಗಳೂರಿನಲ್ಲಿ ಕ್ಯಾ.ಬ್ರಿಜೇಶ್ ಚೌಟ ಮನೆ ಮನೆ ಮಹಾಸಂಪರ್ಕ ಅಭಿಯಾನ, ಬೋಳೂರಿನಲ್ಲಿ ರೋಡ್ ಶೋ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*