ಬಂಟ್ವಾಳ: ಯಕ್ಷಮಿತ್ರರು ಕೈಕಂಬ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಆವರಣದಲ್ಲಿ ಆಯೋಜಿಸಿದ 15ನೇ ವರ್ಷದ ಯಕ್ಷಗಾನ ಪ್ರದರ್ಶನದ ವೇಳೆ ಹಿರಿಯ ಕಲಾವಿದ ದಿವಾಕರ ರೈ ಸಂಪಾಜೆ ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಕ್ಷೇತ್ರದಲ್ಲಿ ದುಡಿದ ಹಿನ್ನೆಲೆಯಲ್ಲಿ ದೊರಕಿದ ಈ ಸನ್ಮಾನದಿಂದಾಗಿ ತನ್ನ ಹೊಣೆಗಾರಿಕೆ ಇನ್ನಷ್ಟು ಜಾಸ್ತಿಯಾಗಿದೆ ಎಂದು ಈ ಸಂದರ್ಭ ದಿವಾಕರ ರೈ ಹೇಳಿದರು.
ಜಾಹೀರಾತು
ಸನ್ಮಾನ ನೆರವೇರಿಸಿ ಮಾತನಾಡಿದ ಚಂದ್ರಹಾಸ ರೈ ಬಾಲಾಜಿಬೈಲು, ಸಂಘಟಕರು ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಉಲ್ಲೇಖನೀಯ. ತನ್ನನ್ನುತಾವೇಸನ್ಮಾನಿಸಿಕೊಳ್ಳುವಪ್ರವೃತಿಹೆಚ್ಚಾಗುತ್ತಿರುವವೇಳೆಇಂದು ನಿಜವಾದಸನ್ಮಾನ ನಡೆದಿದ್ದು, ಅಭಿನಂದನೀಯ ಎಂದರು.
ಕುವೆಂಪುಭಾಷಾಭಾರತಿಪ್ರಾಧಿಕಾರದಮಾಜಿಅಧ್ಯಕ್ಷಡಾ.ಅಜಕ್ಕಳಗಿರೀಶಭಟ್ಟಶುಭ ಹಾರೈಸಿದರು. ಯಕ್ಷಮಿತ್ರರು ಕೈಕಂಬದ ಪ್ರಮುಖರಾದ ಸದಾನಂದ ಶೆಟ್ಟಿ ರಂಗೋಲಿ, ಶಂಕರ ಶೆಟ್ಟಿ ಪರಾರಿಗುತ್ತು, ಭುಜಂಗ ಸಾಲಿಯನ್, ಸದಾಶಿವಕೈಕಂಬ, ವಿಶ್ವನಾಥ, ಹನುಮಗಿರಿ ಮೇಳದ ಪ್ರಬಂಧಕ, ಕಲಾವಿದ ಹರೀಶ್ ಬಳಂತಿಮೊಗರುಉಪಸ್ಥಿತರಿದ್ದರು. ಕಿಶೋರ್ ಭಂಡಾರಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಹನುಮಗಿರಿಮೇಳದವರಿಂದನಮೋರಘುವಂಶದೀಪಯಕ್ಷಗಾನಬಯಲಾಟಪ್ರದರ್ಶನಗೊಂಡಿತು
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಯಕ್ಷಗಾನ ಹಿರಿಯ ಕಲಾವಿದ ದಿವಾಕರ ರೈ ಸಂಪಾಜೆ ಅವರಿಗೆ ಸನ್ಮಾನ"
Be the first to comment on "ಯಕ್ಷಗಾನ ಹಿರಿಯ ಕಲಾವಿದ ದಿವಾಕರ ರೈ ಸಂಪಾಜೆ ಅವರಿಗೆ ಸನ್ಮಾನ"