![](https://i0.wp.com/bantwalnews.com/wp-content/uploads/2024/02/DSC_6887.jpg?resize=683%2C1024&ssl=1)
ಬಿ.ಸಿ.ರೋಡ್ ನ ಪೊಲೀಸ್ ಲೈನ್ ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶಾಬಿಷೇಕ ಕಾರ್ಯಕ್ರಮ ಗುರುವಾರ ಬೆಳಗ್ಗೆ 11.33ರ ವೃಷಭ ಲಗ್ನ ಸುಮುಹೂರ್ಥದಲ್ಲಿ ಸೇರಿದ್ದ ನೂರಾರು ಭಕ್ತರ ಸಮ್ಮುಖ ವೈದಿಕ ವಿಧಿ ವಿಧಾನಗಳೊಂದಿಗೆ ಕೀಕಾಂಗೋಡು ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಪ್ರಧಾನ ಅರ್ಚಕ ಈಶ್ವರ ಭಟ್ ಮಾದಕಟ್ಟೆ ವೈದಿಕ ವಿಧಿ ವಿಧಾನಗಳ ಸಹಕಾರ ನೀಡಿದರು. ಚಿತ್ರ: ಸತೀಶ್ ಕುಮಾರ್, ಕಾರ್ತಿಕ್ ಸ್ಟುಡಿಯೋ, ಬಿ.ಸಿ.ರೋಡ್ === ಇನ್ನಷ್ಟು ಚಿತ್ರಗಳು, ವರದಿಗೆ ಮುಂದೆ ಓದಿರಿ ಬಂಟ್ವಾಳನ್ಯೂಸ್: ಸಂಪಾದಕ: ಹರೀಶ ಮಾಂಬಾಡಿ.
ಬಿ.ಸಿ.ರೋಡ್ ನ ಪೊಲೀಸ್ ಲೈನ್ ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶಾಬಿಷೇಕ ಕಾರ್ಯಕ್ರಮ ಗುರುವಾರ ಬೆಳಗ್ಗೆ 11.33ರ ವೃಷಭ ಲಗ್ನ ಸುಮುಹೂರ್ಥದಲ್ಲಿ ಸೇರಿದ್ದ ನೂರಾರು ಭಕ್ತರ ಸಮ್ಮುಖ ವೈದಿಕ ವಿಧಿ ವಿಧಾನಗಳೊಂದಿಗೆ ಕೀಕಾಂಗೋಡು ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಪ್ರಧಾನ ಅರ್ಚಕ ಈಶ್ವರ ಭಟ್ ಮಾದಕಟ್ಟೆ ವೈದಿಕ ವಿಧಿ ವಿಧಾನಗಳ ಸಹಕಾರ ನೀಡಿದರು.
![](https://i0.wp.com/bantwalnews.com/wp-content/uploads/2024/02/WhatsApp-Image-2024-02-22-at-5.08.28-PM.jpeg?resize=1024%2C768&ssl=1)
ಆಕರ್ಷಕವಾದ ಉಗ್ರಾಣ ನಿರ್ವಹಣೆ ನೋಡಲು ಬರುವವರಿಗೂ ಆಕರ್ಷಣೆಯ ಕೇಂದ್ರವಾಗಿತ್ತು
![](https://i0.wp.com/bantwalnews.com/wp-content/uploads/2024/02/WhatsApp-Image-2024-02-22-at-4.06.27-PM.jpeg?resize=1024%2C768&ssl=1)
ಸ್ವಯಂಸೇವಕರ ತಂಡಗಳಲ್ಲೊಂದು.
![](https://i0.wp.com/bantwalnews.com/wp-content/uploads/2024/02/WhatsApp-Image-2024-02-22-at-4.15.49-PM.jpeg?resize=1024%2C576&ssl=1)
ಅನ್ನದಾನ ಸೇವೆಯಲ್ಲಿ ನಿರತ ಸ್ವಯಂಸೇವಕರು
![](https://i0.wp.com/bantwalnews.com/wp-content/uploads/2024/02/WhatsApp-Image-2024-02-22-at-10.14.55-AM.jpeg?resize=1024%2C576&ssl=1)
ಭಜನೆ
![](https://i0.wp.com/bantwalnews.com/wp-content/uploads/2024/02/WhatsApp-Image-2024-02-22-at-11.22.20-AM.jpeg?resize=1024%2C576&ssl=1)
ಸುಚಿತ್ರಾ ಹೊಳ್ಳ ಅವರ ಸಂಗೀತ ಕಛೇರಿ
![](https://i0.wp.com/bantwalnews.com/wp-content/uploads/2024/02/WhatsApp-Image-2024-02-22-at-11.37.16-AM.jpeg?resize=768%2C1024&ssl=1)
ಕಾರ್ಯಕ್ರಮಕ್ಕೆ ಆಗಮಿಸಿದ ಮಂದಿಗೆ ಶ್ರೀರಾಮ ಗೆಳೆಯರ ಬಳಗ ನೇತೃತ್ವದಲ್ಲಿ ಅನಿಲ್ ದುರ್ಗಾ ಜ್ಯೂಸ್ ಸೆಂಟರ್ ಬಿ.ಸಿ.ರೋಡ್ ಅವರಿಂದ ಉಚಿತ ಕಬ್ಬಿನ ಜ್ಯೂಸ್ ವಿತರಣೆ ನಡೆಯಿತು. ಆಗಮಿಸಿದ 5 ಸಾವಿರಕ್ಕೂ ಮಿಕ್ಕಿ ಭಕ್ತರು ಇದರ ರುಚಿಯನ್ನು ಸವಿದರು.
![](https://i0.wp.com/bantwalnews.com/wp-content/uploads/2024/02/WhatsApp-Image-2024-02-22-at-12.21.34-AM.jpeg?resize=960%2C696&ssl=1)
ಶಿವದೂತ ಗುಳಿಗೆ ನಾಟಕದ ರೂವಾರಿವಿಜಯಕುಮಾರ್ ಕೊಡಿಯಾಲ್ ಬೈಲ್ ಅವರಿಗೆ ಸನ್ಮಾನ
![](https://i0.wp.com/bantwalnews.com/wp-content/uploads/2024/02/22bhnalin.jpg?resize=1024%2C683&ssl=1)
ಸಂಸದ ನಳಿನ್ ಭೇಟಿ
![](https://i0.wp.com/bantwalnews.com/wp-content/uploads/2024/02/22bhodiyoor.jpg?resize=1024%2C683&ssl=1)
ಸಭಾ ಕಾರ್ಯಕ್ರಮ
ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ ನರಿಕೊಂಬು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ, ಕಾರ್ಯಾಧ್ಯಕ್ಷ ಸಂಜೀವ ಪೂಜಾರಿ ಗುರುಕೃಪ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಅನಂತ ಪದ್ಮನಾಭ, ಶಿವಕುಮಾರ್, ಮಹಾಬಲ ಶೆಟ್ಟಿ ಬೋಳಂತೂರುಗುತ್ತು, ನಾಗೇಶ್ ಸಾಲ್ಯಾನ್, ಅಶೋಕ್ ಕುಮಾರ್, ಕಾರ್ಯದರ್ಶಿ ಐತಪ್ಪ ಪೂಜಾರಿ, ಕೋಶಾಧಿಕಾರಿ ಕೆ.ನಾರಾಯಣ ಹೆಗ್ಡೆ, ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷರಾದ ಆನಂದ ಕೆ, ಕೇಪು ಗೌಡ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ದಿನೇಶ್ ಕುಮಾರ್, ಕೋಶಾಧಿಕಾರಿ ಮುರುಗೇಶ್, ಕಾನೂನು ಸಲಹೆಗಾರರಾದ ಉಮೇಶ್ ಕುಮಾರ್ ವೈ, ನರೇಂದ್ರನಾಥ ಭಂಡಾರಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಎಸ್.ವಿಜಯಪ್ರಸಾದ್, ಉಪಾಧ್ಯಕ್ಷರಾದ ಸದಾನಂದ ಶೆಟ್ಟಿ ರಂಗೋಲಿ, ಐತಪ್ಪ ಆಳ್ವ, ಮೋಹನ ರಾವ್, ಡಾ.ಶಿವಪ್ರಸಾದ್ ಶೆಟ್ಟಿ, ರಾಜೇಶ್ ಸುವರ್ಣ, ಯತಿನ್ ಕಲ್ಲಡ್ಕ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಹರೀಶ್ ಎಂ.ಾರ್, ಸುತೇಶ್ ಕೆ.ಪಿ,. ರಾಮಕೃಷ್ಣ, ರಾಜೇಶ್ ಭಂಡಾರಿ, ಜೊತೆ ಕಾರ್ಯದರ್ಶಿ ಸತೀಶ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗಿರೀಶ್, ದೇವಿದಾಸ ಭಟ್, ಪಾಂಡುರಂಗ ಶೆಣೈ, ಕೃಷ್ಣ ಕುಲಾಲ್, ನರೇಶ್ ಶೆಟ್ಟಿ, ಜಯಕುಮಾರ್, ಪುಷ್ಪರಾಜ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಕಿಟ್ಟು ಮೂಲ್ಯ, ಪದ್ಮನಾಭ ಗೌಡ, ಸದಾಶಿವ ಬಂಗೇರ, ಗಿರೀಶ್ ಪೈ, ನಾಗೇಶ್, ಸೀತಾರಾಮ, ಬಾಲಕೃಷ್ಣ ಗೌಡ, ಪ್ರವೀಣ್ ಕುಮಾರ್, ರಮಾನಂದ, ನಾನಾ ಸಮಿತಿಗಳ ಪ್ರಮುಜಖರಾದ ಇಂದಿರೇಶ್ ಅಜ್ಜಿಬೆಟ್ಟು, ರಾಜೇಶ್ ಅಜ್ಜಿಬೆಟ್ಟು, ಮೋಹನದಾಸ ಕೊಟ್ಟಾರಿ, ದೇವದಾಸ ಶೆಟ್ಟಿ ಬಂಟ್ವಾಳ, ಬೇಬಿ ಕುಂದರ್, ಸದಾಶಿವ ಕೈಕಂಬ, ಚಂದ್ರಶೇಖರ ಕುಲಾಲ್, ದಾಮೋದರ ನೆತ್ತರಕೆರೆ, ಆಶಾ ಪ್ರಸಾದ್ ರೈ, ರಾಘವೇಂದ್ರ ಬನ್ನಿಂತಾಯ, ರಾಜೇಶ್ ಎಲ್. ನಾಯಕ್, ಸೋಮನಾಥ ಸಾಲ್ಯಾನ್, ರವಿ ಕೊಡಂಗೆ ಸಹಿತ ಪ್ರಮುಖರು ಉಪಸ್ಥಿತರಿದ್ದರು
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಸಂಪನ್ನ, ಏನೇನಿತ್ತು ಫೊಟೋ ವರದಿ ಇಲ್ಲಿದೆ"