ಇಡಗುಂಜಿ ಮೇಳದ ಕಲಾವಿದರಿಂದ ಬಂಟ್ವಾಳದಲ್ಲಿ 18ರಂದು ‘ಸೀತಾಪಹರಣ’ ಯಕ್ಷಗಾನ ಪ್ರದರ್ಶನ

ಬಂಟ್ವಾಳ: ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಅಕ್ಟೋಬರ್ 18ರ ಬುಧವಾರ ಸಂಜೆ 6ರಿಂದ 9ರವರೆಗೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ) ವತಿಯಿಂದ ಸೀತಾಪಹರಣ ಎಂಬ ಪಾರ್ತಿಸುಬ್ಬ ವಿರಚಿತ ಯಕ್ಷಗಾನ ಪ್ರದರ್ಶನ ನಡೆಯಲಿದೆ.  ಅಭಿರುಚಿ ಜೋಡುಮಾರ್ಗ ಅವರು ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ.

ಜಾಹೀರಾತು

ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ಹೆಗಡೆ ದಂತಳಿಗೆ, ಮದ್ದಳೆ ಮೂರೂರು ನರಸಿಂಹ ಹೆಗಡೆ, ಚೆಂಡೆ ವಿನಾಯಕ ಭಟ್ರಮನೆ ಭಾಗವಹಿಸುವರು.

ಮುಮ್ಮೆಳದಲ್ಲಿ ಕೆರೆಮನೆ ಶಿವಾನಂದ ಹೆಗಡೆ, ಶಿರಳಗಿ ತಿಮ್ಮಪ್ಪ ಹೆಗಡೆ, ಈಶ್ವರ ಭಟ್ಟ ಹಂಸಳ್ಳಿ, ವಿಘ್ನೇಶ್ವರ ಹೆಗಡೆ  ಹಾವಗೋಡಿ, ಕೆರೆಮನೆ ಶ್ರೀಧರ ಹೆಗಡೆ, ನಿರಂಜನ ಹೆಗಡೆ, ವಿನಾಯಕ ನಾಯ್ಕ ಗುಂಡಿಬೈಲು, ಕೃಷ್ಣ ಮರಾಠಿ ಮುಂಡಾರ, ಗಣಪತಿ ಕುಣಬಿ ಯಲ್ಲಾಪುರ, ನಕುಲ ಗೌಡ ಸಿರ್ಸಿ ಭಾಗವಹಿಸುವರು. ಸ್ತ್ರೀಪಾತ್ರದಲ್ಲಿ ಸದಾಶಿವ ಭಟ್ಟ ಯಲ್ಲಾಪುರ, ಮಹಾವೀರ ಇಂದ್ರ ಜೈನ, ಹಾಸ್ಯಪಾತ್ರದಲ್ಲಿ ಸೀತಾರಾಮ ಹೆಗಡೆ ಮುಡಾರೆ ಇರಲಿದ್ದಾರೆ.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಇಡಗುಂಜಿ ಮೇಳದ ಕಲಾವಿದರಿಂದ ಬಂಟ್ವಾಳದಲ್ಲಿ 18ರಂದು ‘ಸೀತಾಪಹರಣ’ ಯಕ್ಷಗಾನ ಪ್ರದರ್ಶನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*