NATIONAL HIGHWAY: ಓವರ್ ಸ್ಪೀಡ್ ಗೆ ಬೇಕು ಲಗಾಮು, ಪಾದಚಾರಿಗಳಿಗೂ ಬೇಕು ಸುರಕ್ಷತೆ

ಹೆದ್ದಾರಿ ಇರೋದೇ ಸ್ಪೀಡಾಗಿ ಹೋಗೋದಕ್ಕೆ ಎನ್ನುವವರಿಗೊಂದು ಕಿವಿಮಾತು. ನೀವು ಸ್ಪೀಡಾಗಿ ಹೋಗಿ. ಆದರೆ ಅಲ್ಲಿ ನಡ್ಕೊಂಡು ಹೋಗುವವರು ಇರ್ತಾರೆ ಎಂಬುದನ್ನು ಮರೀಬೇಡಿ. ಹಾಗೆಯೇ ನಡೆದುಕೊಂಡು ಹೋಗುವವರೂ ಅಷ್ಟೇ.. ಶಾರ್ಟ್ ಕಟ್ ಎಂದು ರಸ್ತೆ ದಾಟಲು ಹೋಗಬೇಡಿ, ಹಾಗೂ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ದಯವಿಟ್ಟು ನಿಮ್ಮ ಕಣ್ಣು ರಸ್ತೆ ಮೇಲಿರಲಿ. ಏಕೆಂದರೆ ಯಾವಾಗ ವಾಹನ ಮೈಮೇಲೆ ಎರಗುತ್ತೋ ದೇವನೇ ಬಲ್ಲ. ದುರಂತ ಎಲ್ಲೆಲ್ಲಿ ಕಾದಿರುತ್ತೋ ಗೊತ್ತಾಗೋದೇ ಇಲ್ಲ.

ಜಾಹೀರಾತು

ಬಂಟ್ವಾಳ ಟ್ರಾಫಿಕ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಆಕ್ಸಿಡೆಂಟ್ ಪ್ರಕರಣಗಳು ಜಾಸ್ತಿಯಾಗತೊಡಗಿದೆ. ಸೀಮಿತ ಸಿಬಂದಿ ಇರುವ ಪೊಲೀಸರು ಟ್ರಾಫಿಕ್ ಜಾಮ್ ಜೊತೆಗೆ ಆಯಕಟ್ಟಿನ ಜಾಗದಲ್ಲಿ ಅಪಘಾತ ತಡೆಗೆ ಹರಸಾಹಸಪಡುತ್ತಿರುತ್ತಾರೆ. ಆದರೂ ವಾಹನಗಳ ಚಾಲನೆ ವೇಳೆ ಗಮನ ಇಲ್ಲದಿರುವುದು, ರಸ್ತೆ ಸುರಕ್ಷತಾ ಉಲ್ಲಂಘನೆಗಳಿಂದ ವಾಹನ ಅಪಘಾತಗಳು ಜಾಸ್ತಿಯಾಗುತ್ತಿವೆ.

ಇತ್ತೀಚೆಗೆ ಸೇತುವೆ ಮೇಲೆಯೇ ಅಪಘಾತವಾಗಿ ಒಬ್ಬರು ಸಾವನ್ನಪ್ಪಿದ್ದರು. ಪೂರ್ಲಿಪ್ಪಾಡಿ, ದಾಸಕೋಡಿ ಪರಿಸರ ಹಾಗೆಯೇ ಬಂಟ್ವಾಳದಿಂದ ಮೂಡುಬಿದಿರೆಗೆ ತಿರುಗುವ ತುಂಬ್ಯ ಜಂಕ್ಷನ್ (ಬಂಟ್ವಾಳ ಜಂಕ್ಷನ್), ಕಾಮಾಜೆ ತಿರುವು, ಪುರಸಭೆಯ ನೆರೆ ವಿಮೋಚನಾ ರಸ್ತೆಗೆ ತಿರುವು, ಭಂಡಾರಬೆಟ್ಟು, ಚಂಡ್ತಿಮಾರ್ ಸಹಿತ ಕೂಡುರಸ್ತೆಗಳು ಸೇರುವ ಜಾಗ ಹಾಗೂ ವಿಶಾಲವಾದ ರಸ್ತೆ ಇರುವ ಪ್ರದೇಶಗಳಲ್ಲೆಲ್ಲಾ ಅಪಘಾತಗಳು ಸಂಭವಿಸಿದ್ದು, ಇತ್ತೀಚಿನ ಕೆಲ ತಿಂಗಳ ಹಿಂದೆ ಬಂಟ್ವಾಳ ಪುಂಜಾಲಕಟ್ಟೆ ರಸ್ತೆಯ ಬಂಟ್ವಾಳ ಪೇಟೆಗೆ ತಿರುಗುವ ಜಾಗದಲ್ಲಿ ರಬ್ಬರ್ ಸ್ಟ್ರಿಪ್ ಗಳನ್ನು ಹಾಕಿ ವೇಗಕ್ಕೆ ಕಡಿವಾಣ ಹಾಕಲಾಗುತ್ತಿದೆಯಾದರೂ ಅದು ಪರಿಣಾಮಕಾರಿಯಾಗಿಲ್ಲ.

 ರಾಷ್ಟ್ರೀಯ ಹೆದ್ದಾರಿಯಲ್ಲಿ ಶರವೇಗದಿಂದ ವಾಹನಗಳು ಓಡಾಡುವುದು ಸಹಜ. ಆದರೆ ಎಷ್ಟು ವೇಗದಲ್ಲಿ ಓಡಬೇಕು ಎಂಬ ಕುರಿತು ಮಾರ್ಗಸೂಚಿ ಫಲಕಗಳನ್ನು ಹೆದ್ದಾರಿ ಪ್ರಾಧಿಕಾರ ಹಾಕಬೇಕು. ಬಿ.ಸಿ.ರೋಡ್ ನಿಂದ ಮಾಣಿವರೆಗಿನ ಹೆದ್ದಾರಿಯಲ್ಲಿ ವೇಗಮಿತಿಯ ಫಲಕಗಳು ಕಾಣಿಸುತ್ತಿಲ್ಲ.

ರಾಷ್ಟ್ರೀಯ ಹೆದ್ದಾರಿಯ ನಿರ್ದಿಷ್ಟ ಜಾಗಗಳಾದ ಜಂಕ್ಷನ್ ನಂಥ ಪ್ರದೇಶಗಳಲ್ಲಿ ಹಂಪ್ಸ್ ರೀತಿಯ ವೇಗತಡೆಗಳು ಅಗತ್ಯ. ಹಾಸನ ಬೆಂಗಳೂರು ರಸ್ತೆಯ ಹಲವೆಡೆ ಈ ರೀತಿಯ ಹಂಪ್ಸ್ ಗಳಿವೆ. ಇದು ಜನನಿಬಿಡ ಪ್ರದೇಶಗಳಲ್ಲಿ ವೇಗವಾಗಿ ಸಂಚರಿಸುವುದನ್ನು ನಿಯಂತ್ರಿಸುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "NATIONAL HIGHWAY: ಓವರ್ ಸ್ಪೀಡ್ ಗೆ ಬೇಕು ಲಗಾಮು, ಪಾದಚಾರಿಗಳಿಗೂ ಬೇಕು ಸುರಕ್ಷತೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*