ಚಿಟ್ಟೆಗಳ ಜೀವನಚಕ್ರ ಹೇಗಿರುತ್ತದೆ? ಶ್ರೀರಾಮ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಅಧ್ಯಯನ ಕಾರ್ಯಾಗಾರ

ಬಂಟ್ವಾಳ: ಚಿಟ್ಟೆಗಳ ಜೀವನಚಕ್ರ ಹೇಗಿರುತ್ತದೆ ಎಂಬ ಪ್ರತ್ಯಕ್ಷದರ್ಶನವನ್ನು ಕಲ್ಲಡ್ಕದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೀಡುವ ಕಾರ್ಯ ನಡೆಸಲಾಯಿತು.

ಜಾಹೀರಾತು

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಸಂಘದ ವಿದ್ಯಾರ್ಥಿಗಳು ಚಿಟ್ಟೆಗಳ ಜೀವನಚಕ್ರದ ನಾಲ್ಕು ಹಂತಗಳನ್ನು ಶಾಲಾ ಪರಿಸರದಲ್ಲಿ ಮೂರು ವಾರಗಳಿಂದ ವಿವಿಧ ಹಂತದಲ್ಲಿ ನಿರಂತರ ಅಧ್ಯಯನ ಮಾಡಿದರು. ಇವುಗಳಲ್ಲಿ ಮೊಟ್ಟೆ , ಲಾರ್ವ, ಪೊರೆ, ಮತ್ತು ವಯಸ್ಕ ಹಂತದ ಬಗ್ಗೆ ತಿಳಿದುಕೊಂಡು ಮೊಟ್ಟೆಯಿಂದ ಚಿಟ್ಟೆಗಳು ಹೊರಬರುವ ಹಂತದವರೆಗೆ ಗಮನಿಸಿ, ಮಾಡಿ ಪ್ರತಿ ಹಂತವನ್ನು ದಾಖಲಿಸಿ ಲಾರ್ವದಿಂದ ಹೊರಬಂದ ಚಿಟ್ಟೆಯ ಚಟುವಟಿಕೆಗಳನ್ನು ವೀಕ್ಷಿಸಿದರು. ನಂತರ ವಿದ್ಯಾರ್ಥಿಗಳು ಲಾರ್ವದಿಂದ ಹೊರಬಂದ ಸರಿಸುಮಾರು ನೂರು ಚಿಟ್ಟೆಗಳನ್ನು ಪರಿಸರಕ್ಕೆ ಬಿಡುವ ಮೂಲಕ ಮಾದರಿಯಾದರು.

ತರಬೇತುದಾರರಾದ ರಮ್ಯ ಜೆ ಮಂಚಿ ಮಾತನಾಡಿ ಜೀವನ ಚಕ್ರವು ಅತ್ಯಂತ ವಿಶಿಷ್ಟವಾದದ್ದು ಶಾಲೆಯಲ್ಲಿ ಇದರ ಕಾರ್ಯಗಾರವನ್ನು ನಡೆಸಿರುವುದರಿಂದಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ಪರಿಸರ ಕಾಳಜಿಯೊಂದಿಗೆ ಸಂಶೋಧನಾ ಚಟುವಟಿಕೆಗಳು ಪ್ರಾಥಮಿಕ ಹಂತದಿಂದಲೇ ಬೆಳೆಯುವುದು.ಎಂದರು.

ಏಳನೇ ತರಗತಿಯ ವಿದ್ಯಾರ್ಥಿಯಾಗಿರುವ ಕೃಷ್ಣಕುಮಾರ ಮಾತನಾಡಿ, ಶಾಲೆಯಲ್ಲಿ ನಡೆಸಿದ ಈ ಅಧ್ಯಯನ ವಿಷಯವು ಆಸಕ್ತಿದಾಯಕವಾಗಿದ್ದು ನಾನು ಮನೆಯ ತೋಟದಲ್ಲಿ ಅನೇಕ ಲಾರ್ವಗಳನ್ನು ಸಂಗ್ರಹಿಸಿದ್ದು ಚಿಟ್ಟೆಗಳಾಗಿ ಪರಿವರ್ತಿಸಿ ಪರಿಸರಕ್ಕೆ ಬಿಡುವಸಿದ್ಧತೆ ನಡೆಸಿದ್ದೇನೆ ಎಂದನು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ರವಿರಾಜ್‌ ಕಣಂತೂರು ಉಪಸ್ಥಿತರಿದ್ದರು. ವಿಶೇಷ ತರಬೇತುದಾರರಾಗಿ ವಿಜ್ಞಾನ ಅಧ್ಯಾಪಕರಾದ ಜ್ಯೋತಿ, ಪೂರ್ಣಿಮ ಭಾಗವಹಿಸಿ ಕಾರ್‍ಯಗಾರವನ್ನು ನಡೆಸಿಕೊಟ್ಟರು. ಅಧ್ಯಾಪಕರಾದ ಸುಮಂತ್ ಎಂ ಮರುವಾಳ, ಬಾಲಕೃಷ್ಣ ಸಹಕರಿಸಿದರು.

 

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಚಿಟ್ಟೆಗಳ ಜೀವನಚಕ್ರ ಹೇಗಿರುತ್ತದೆ? ಶ್ರೀರಾಮ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಅಧ್ಯಯನ ಕಾರ್ಯಾಗಾರ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*