ವಿಟ್ಲ

ವಿಟ್ಲ: ವಿಠಲ ಪಿಯು ಕಾಲೇಜಿನ 2001ನೇ ಸಾಲಿನ ವಿದ್ಯಾರ್ಥಿಗಳ ‘ಸ್ನೇಹ ಸಮ್ಮಿಲನ’

ಬಂಟ್ವಾಳ: ಇಲ್ಲಿನ ವಿಠಲ ಪದವಿ ಪೂರ್ವ ಕಾಲೇಜಿನ 2000-2001ನೇ ಸಾಲಿನ ಕಲಾ ವಿಭಾಗದ ವಿದ್ಯಾರ್ಥಿಗಳ ‘ಸ್ನೇಹ ಸಮ್ಮಿಲನ’ ಹಾಗೂ ‘ಗುರುವಂದನೆ’ ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನ ಸುವರ್ಣ ಮಹೋತ್ಸವ ರಂಗ ಮಂದಿರದಲ್ಲಿ ಜರುಗಿತು.

ಜಾಹೀರಾತು

ಕಾರ್ಯಕ್ರಮವನ್ನು ಹಳೆಯ ವಿದ್ಯಾರ್ಥಿಗಳಾದ ನಿವೃತ್ತ ಸೈನಿಕ ವಿ.ಎಂ.ನಿಸಾರ್ ಹಾಗೂ ಕೃಷಿಕ ಮಹಿಳೆ ಸುಜಾತಾ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಪ್ರಿನ್ಸಿಪಾಲ್ ಅನಂತಕೃಷ್ಣ ಹೆಬ್ಬಾರ್, ರಾಧಾಕೃಷ್ಣ ಭಟ್, ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಕ ವಸಂತಚಂದ್ರ ಮತ್ತು ಪ್ರಿನ್ಸಿಪಾಲ್ ಎ.ಎಸ್.ಆದರ್ಶ ಚೊಕ್ಕಾಡಿ, ಅರ್ಥಶಾಸ್ತ್ರ ಉಪನ್ಯಾಸಕಿ ಚಂದ್ರಕಲಾ, ಇತಿಹಾಸ ಉಪನ್ಯಾಸಕ ಅಣ್ಣಪ್ಪ ಸಾಸ್ತಾನ ಅವರಿಗೆ ವಿದ್ಯಾರ್ಥಿಗಳಿಂದ ಗುರುವಂದನೆ, ಸನ್ಮಾನ ನಡೆಯಿತು. ಬಳಿಕ ಮಾತನಾಡಿದ ಎಲ್ಲಾ ಉಪನ್ಯಾಸಕರು ಹಿತನುಡಿಗಳನ್ನಾಡಿ ಶುಭ ಹಾರೈಸಿದರು.

ವಿಠಲ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಕೋಶಾಧಿಕಾರಿ ಬಾಬು ಕೆ.ವಿ. ಹಾಗೂ ಸದಸ್ಯರಾದ ನಿತ್ಯಾನಂದ ನಾಯಕ್ ಎಂ. ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ವಿಠಲ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಎ.ಎಸ್.ಆದರ್ಶ ಚೊಕ್ಕಾಡಿ ವಹಿಸಿದ್ದರು. ಲೋಕೇಶ್ ಕಾಶೀಮಠ, ಅಕ್ಷತಾ, ಹನೀಫ್, ರೈಹಾನ, ಪ್ರಶಾಂತಿ, ನವೀನ್ ವಿಟ್ಲ, ನಿಸಾರ್  ಮತ್ತಿತರರು ಕಾಲೇಜು ದಿನಗಳ ಸಿಹಿ ನೆನಪುಗಳನ್ನು ಮೆಲುಕು ಹಾಕಿದರು. ಪ್ರೀಮಾ ಮತ್ತು ಲೋಕೇಶ್ ಪ್ರಾರ್ಥಿಸಿದರು. ಅನುಪಮಾ ಸನ್ಮಾನಿತರನ್ನು ಪರಿಚಯಿಸಿದರು. ಸಂಧ್ಯಾ ಮತ್ತು ಎ.ಎಂ. ಹನೀಫ್ ಅನಿಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತಿ ಸ್ವಾಗತಿಸಿದರು. ಸೌಮ್ಯಾ ರಾವ್ ವಂದಿಸಿದರು. ಸುಮಯ್ಯ, ಗೋವಿಂದ ನಾರಾಯಣ ಭಟ್, ಕೆ.ಬಿ.ನಸೀಮಾ, ಇಸ್ಮಾಯೀಲ್, ಭವ್ಯಾ, ಅರ್ಪಣಾ ಮತ್ತಿತರರು ಸಹಕರಿಸಿದರು.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ