ಯಕ್ಷಗಾನ

ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾ ಕೇಂದ್ರದಿಂದ ನರಿಕೊಂಬಿನಲ್ಲಿ ಚೆಂಡೆ, ಮದ್ದಳೆ, ಭಾಗವತಿಕೆ ಕಲಿಕೆ ತರಬೇತಿ

ಬಂಟ್ವಾಳ: ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾ ಕೇಂದ್ರ (ರಿ.) ಅಬ್ಬೆಯಮಜಲು ಇದರ “ಕಲಾರಾಧನೆ”ಯ ದಶಮಾನೋತ್ಸವದ ಅಂಗವಾಗಿ ಚೆಂಡೆ — ಮದ್ದಳೆ ಮತ್ತು ಭಾಗವತಿಕೆ ಕಲಿಯಲು ಮುಕ್ತ ಅವಕಾಶವನ್ನು ಕಲ್ಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಕಲಾ ಕೇಂದ್ರದ ಅಧ್ಯಕ್ಷರಾದ ವೇದಮೂರ್ತಿ ಕೃಷ್ಣರಾಜ ಭಟ್ ತಿಳಿಸಿದ್ದಾರೆ.

ಇದರನ್ವಯ ಹಿಮ್ಮೇಳ ಕಲಾವಿದರಾದ ಚಂದ್ರಶೇಖರ ಭಟ್ ಕೊಂಕನಾಜೆ ಇವರಿಂದ ಚೆಂಡೆ ಮದ್ದಳೆ ತರಗತಿ ನರಿಕೊಂಬಿನ ವಿಜಯಶ್ರೀ ಚಿಕಿತ್ಸಾಲಯದ ಮಾಳಿಗೆಯಲ್ಲಿ  ಪ್ರಾರಂಭಗೊಂಡಿತು. ತರಗತಿಯ ಉದ್ಘಾಟನೆಯನ್ನು  ಹಿರಿಯ ಕಲಾವಿದರು, ಪಾಣೆಮಂಗಳೂರು ಶ್ರೀ ವೀರ ವಿಠಲ ದೇವಸ್ಥಾನದ ಮುಕ್ತೇಸರರಾದ ಪ್ರಮೋದ್ ಭಟ್  ನೆರವೇರಿಸಿದರು. ಚೆಂಡೆ ಮದ್ದಳೆ ಭಾಗವತಿಕೆ ಕಲಿಯಲು ಆಸಕ್ತರಿರುವವರು ಪ್ರತಿ ಶುಕ್ರವಾರ ನಡೆಯುವ ತರಗತಿಯ ಸದುಪಯೋಗಪಡಿಸಿಕೊಳ್ಳಬೇಕೆಂದು  ಕಲಾಕೇಂದ್ರದ ಅಧ್ಯಕ್ಷರಾದ ಕೃಷ್ಣರಾಜ ಭಟ್ ತಿಳಿಸಿದ್ದಾರೆ. ಟ್ರಸ್ಟಿ ಹಾಗೂ ಸ್ಥಳದಾನಿ ಡಾ ಸುಬ್ರಹ್ಮಣ್ಯ ಭಟ್ ವಂದಿಸಿದರು. ಟ್ರಸ್ಟಿಗಳಾದ ವೇದಮೂರ್ತಿ ವಾಸುದೇವ ಭಟ್,  ವೆಂಕಟೇಶ ರಾವ್, ಯತೀಶ ಶೆಟ್ಟಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ