ಬಂಟ್ವಾಳ: ಮೊಡಂಕಾಪು ಬಾಲಯೇಸು ದೇವಾಲಯದಲ್ಲಿ ಬಾಲಮರಿಯಮ್ಮನವರ ಹುಟ್ಟುಹಬ್ಬ ಆಚರಣೆ ಗುರುವಾರ ನಡೆಯಿತು. ಬಾಲ ಮಾರಿಯಮ್ಮನವರ ಪ್ರತಿಮೆಯ ಮೆರವಣಿಗೆಯು ಬೆಳಿಗ್ಗೆ 6:45 ಕಾಯಾರ್ಮಾರ್ ನಿಂದ ಪ್ರಾರಂಭಗೊಂಡು ಆಮ್ಟಾಡಿ ಸೊಸಾಯ್ಟಿ, ನಲ್ಕೆಮಾರ್, ಏರಿಯಾ ಮಾರ್ಗವಾಗಿ 8:00 ಘಂಟೆಗೆ ಮೊಡಂಕಾಪು ಬಾಲ ಯೇಸು ದೇವಾಲಯ ತಲುಪಿತು.
ತೆರೆದ ಆಂಗಣದಲ್ಲಿ ಮರಿಯಮ್ಮನವರ ಗ್ರೋಟ್ಟೋ ಮುಂಭಾಗದಲ್ಲಿ ಹೊಸ ತೆನೆ ಯನ್ನು ವಂದನೀಯ ಧರ್ಮಗುರುಗಳಾದ ಮೆಲ್ವಿನ್ ಲೋಬೊರವರಿಂದ ಆಶೀರ್ವಚನಗೊಂಡು, ಬಾಲ ಯೇಸು ದೇವಾಲಯದಲ್ಲಿ ಪ್ರಧಾನ ಧರ್ಮಗುರುಗಳಾದ ವಂದನೀಯ ವಲೇರಿಯನ್ ಡಿಸೋಜರವರಿಂದ ದಿವ್ಯ ಬಲಿಪೂಜೆ ಅರ್ಪಿಸಲಾಯಿತು. ಸಹಾಯಕ ಧರ್ಮಗುರುಗಳಾದ ವಂದನೀಯ ರಾಹುಲ್ ಡೆಕ್ಸ್ಟರ್ ಡಿ ಸೋಜಾ ಹಾಗೂ ಅತಿಥಿ ಧರ್ಮಗುರುಗಳಾದ ವಂದನೀಯ ಎಲಿಯಾಸ್ ಪ್ರ್ಯಾಂಕ್ ಹಾಜರಿದ್ದರು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to comment on "ಮೊಡಂಕಾಪು ಬಾಲ ಯೇಸು ದೇವಾಲಯದಲ್ಲಿ ಬಾಲಮರಿಯಮ್ಮನವರ ಹುಟ್ಟುಹಬ್ಬ ಆಚರಣೆ"