ಅಮರನಾಥ ಯಾತ್ರೆಗೆ ತೆರಳಿದ್ದ ಬಂಟ್ವಾಳದ ಯಾತ್ರಿಗಳು ಸುರಕ್ಷಿತವಾಗಿ ವಾಪಸ್ ಬಂದಿದ್ದಾರೆ. ಬಂಟ್ವಾಳ, ಬಿ.ಸಿ.ರೋಡ್, ರಾಯಿ, ಸರಪಾಡಿಯ ಒಟ್ಟು 27 ಮಂದಿಯ ತಂಡ ಮಂಗಳೂರಿನಿಂದ ರೈಲಿನಲ್ಲಿ ದೆಹಲಿಗೆ ತೆರಳಿ ಅಲ್ಲಿಂದ ಅಮರನಾಥ ಯಾತ್ರೆ ಕೈಗೊಂಡಿತ್ತು. ಕೆಲ ದಿನಗಳ ಹಿಂದೆ ಅಮರನಾಥದಲ್ಲಿ ನಡೆದ ಮೇಘಸ್ಫೋಟ ಸಂದರ್ಭ, ಪ್ರಯಾಣದಲ್ಲಿದ್ದ ಅವರು ಬಳಿಕ ಸುರಕ್ಷಿತವಾಗಿ ಆರ್ಮಿಯ ಸಹಾಯದಿಂದ ಅಮರನಾಥ ದರ್ಶನ ಮಾಡಿ ಮಂಗಳೂರಿಗೆ ಮರಳಿದ್ದು, ಸೋಮವಾರ ಬಿ.ಸಿ.ರೋಡ್ ತಲುಪಿದರು. ಸುರೇಶ್ ಕೋಟ್ಯಾನ್, ತಿಲಕ್ ರಾಜ್, ಯಶೋಧರ ಕರ್ಬೆಟ್ಟು, ಸಂತೋಷ್ ರಾಯಿಬೆಟ್ಟು ಸಹಿತ ಹಲವರು ಈ ತಂಡದಲ್ಲಿದ್ದು, ತಮ್ಮ ಯಾತ್ರೆಯುದ್ದಕ್ಕೂ ಸೈನಿಕರು ನೀಡಿದ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to comment on "ಅಮರನಾಥಕ್ಕೆ ತೆರಳಿದ್ದ ಬಂಟ್ವಾಳದ ಯಾತ್ರಿಗಳು ಸುರಕ್ಷಿತವಾಗಿ ವಾಪಸ್"