ಜಿಲ್ಲಾ ಸುದ್ದಿ

UPDATE: ವಿಧಾನಪರಿಷತ್ ಚುನಾವಣೆ: ಬಂಟ್ವಾಳ ತಾಲೂಕಿನಲ್ಲಿ ಶೇ.100, ಉಡುಪಿ-ದ.ಕ.ಜಿಲ್ಲೆಗಳಲ್ಲಿ ಶೇ.99.55 ಮತದಾನ

ಬಂಟ್ವಾಳನ್ಯೂಸ್ ವರದಿ, www.bantwalnews.com REPORT ಸಂಪಾದಕ: ಹರೀಶ ಮಾಂಬಾಡಿ

ವಿಧಾನಪರಿಷತ್ತು ಚುನಾವಣೆಗೆ ಸಂಬಂಧಿಸಿ ದ.ಕ. ಮತ್ತು ಉಡುಪಿ ಕ್ಷೇತ್ರಗಳ 2 ಸ್ಥಾನಗಳಿಗೆ ಮತದಾನ ಮುಕ್ತಾಯವಾಗಿದ್ದು, ಒಟ್ಟಾರೆಯಾಗಿ ಶೇ.99.55 ಮತದಾನವಾಗಿದೆ. ಇವುಗಳ ಪೈಕಿ ಬಂಟ್ವಾಳ, ಬೈಂದೂರು, ಹೆಬ್ರಿ, ಮೂಡುಬಿದಿರೆ ಮತ್ತು ಕಡಬಗಳಲ್ಲಿ ಶೇ.100 ಮತ ಚಲಾವಣೆ ಆಗಿದೆ. ಒಟ್ಟು 6040 ಮತದಾರರಿದ್ದು, ಇವರ ಪೈಕಿ 2915 ಪುರುಷರು ಮತ್ತು 3125 ಮಹಿಳೆಯರು ಮತದಾನಕ್ಕೆ ಅರ್ಹರಾಗಿದ್ದರು. ಇವರ ಪೈಕಿ, 2902 ಪುರುಷರು ಮತ್ತು 3111 ಮಹಿಳೆಯರು ಸೇರಿ ಒಟ್ಟು 6013 ಮಂದಿ ಮತ ಚಲಾಯಿಸಿದ್ದಾರೆ. 27 ಮಂದಿ ಮತದಾನಕ್ಕೆ ಗೈರುಹಾಜರಾಗಿದ್ದಾರೆ. ಬಂಟ್ವಾಳ ತಾಲೂಕಿನ 58 ಗ್ರಾಪಂಗಳು ಮತ್ತು ಬಂಟ್ವಾಳ ಪುರಸಭೆ ಸೇರಿ 59 ಬೂತ್ ಗಳಲ್ಲ್ಇ ಒಟ್ಟು 903 ಮತಗಳಿದ್ದು, ಎಲ್ಲವೂ ಚಲಾವಣೆಯಾಗಿವೆ. ಇಲ್ಲಿ ಮಧ್ಯಾಹ್ನದ ವೇಳೆಗೇ ಶೇ.96 ಮತ ಚಲಾವಣೆ ಆಗಿದ್ದು ವಿಶೇಷ. ಡಿ. 14ರಂದು ಮತ ಎಣಿಕೆ ನಡೆಯಲಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿಯಿಂದ, ಮಂಜುನಾಥ ಭಂಡಾರಿ ಕಾಂಗ್ರೆಸ್ ಮತ್ತು ಶಾಫಿ ಬೆಳ್ಳಾರೆ ಎಸ್.ಡಿ.ಪಿ.ಐ.ನಿಂದ ಕಣಕ್ಕಿಳಿದಿದ್ದಾರೆ. ಬಂಟ್ವಾಳದಲ್ಲಿ ತಹಸೀಲ್ದಾರ್ ರಶ್ಮಿ ಎಸ್.ಆರ್ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ತಾಲೂಕಾಡಳಿತದಿಂದ ನಡೆದಿದ್ದು, ಇಒ ರಾಜಣ್ಣ, ಚುನಾವಣಾ ಶಾಖೆ ಉಪತಹಸೀಲ್ದಾರ್ ನವೀನ್ ಬೆಂಜನಪದವು, ಉಪತಹಸೀಲ್ದಾರ್ ಗಳಾದ ರಾಜೇಶ್ ನಾಯ್ಕ್, ದಿವಾಕರ ಮುಗುಳಿಯ ವಿವಿಧ ಇಲಾಖೆಗಳ ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ