ಮೊದಲ ಗೌರವಧನ ಸೇವಾಭಾರತಿಗೆ ಸಮರ್ಪಿಸಿದ ನರಿಕೊಂಬು ಗ್ರಾಪಂ ಉಪಾಧ್ಯಕ್ಷ ಸಹಿತ ಆರು ಮಂದಿ ಸದಸ್ಯರು

ಬಂಟ್ವಾಳ:  ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಗೊಂಡ ಬಳಿಕ ದೊರೆತ ಮೊದಲ ಗೌರವಧನವನ್ನು ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರ ಸಹಿತ ಆರು ಮಂದಿ ಸದಸ್ಯರು  ಸೇವಾಭಾರತಿ ಬಂಟ್ವಾಳ ಘಟಕವು ಕೊರೋನ  ಸಂಕಷ್ಟಕಾಲದಲ್ಲಿ ನಡೆಸುತ್ತಿರುವ ಸೇವಾಕಾರ್ಯಕ್ಕೆ ಸಮರ್ಪಿಸುವ ಮೂಲಕ ತಮ್ಮ ಅಳಿಲ ಸೇವೆಯನ್ನು ಮಾಡಿದ್ದಾರೆ. ನರಿಕೊಂಬು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಪ್ರಕಾಶ್ ,ಸದಸ್ಯರಾದ ಯೋಗೀಶ್,ಸಂತೋಷ್ ಕುಮಾರ್,ಹೇಮಲತಾ, ಸುಜಾತ,ಸವಿತಾ ನರಿಕೊಂಬುಗ್ರಾಮ ಪಂಚಾಯತ್ ನ  ಶಂಭೂರು ಗ್ರಾಮದ ವ್ಯಾಪ್ತಿಗೊಳಪಟ್ಟ ಈ ಆರು ಮಂದಿ ಸದಸ್ಯರು ತಮಗೆ ದೊರೆತ ಮೊದಲ ಗೌರವಧನ್ನು ಒಟ್ಟು  7,525 ಸಾ.ರೂ.ವನ್ನು ಸೇವಾಭಾರತಿ ಕಾರ್ಯಾಲಯದಕ್ಕೆ ಹಸ್ತಾಂತರಿಸಿದ್ದಾರೆ. ಸಹಕಾರಿಸಂಘದಿಂದಲುನೆರವು: ಆದೇರೀತಿ ತಾಲೂಕಿನ ವಿವಿಧ ಸಹಕಾರಿಸಂಘದ ಆಡಳಿತ ಮಂಡಳಿಯು ಸೇವಾ ಭಾರತಿಯ ನಿಧಿಗೆ ಧನಸಹಾಯದ ನೆರವನ್ನು ಒದಗಿಸಿದೆ.ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ,ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ  ಸಂಘ ಹಾಗೂ ಫರಂಗೀಪೇಟೆ ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಕಡೇಶಿವಾಲಯ ವ್ಯವಸಾಯಿಕ ಸೇವಾ ಸಹಕಾರಿ ಸಂಘ ತಲಾ 10 ಸಾ.ರೂ.ವಿನಂತೆ ಸೇವಾ ಭಾರತಿಯ ಸೇವಾ ಚಟುವಟಿಕೆಗೆ ನೆರವು ನೀಡಿದೆ.  ಈ ಸಂದರ್ಭ ಸೇವಾ ಭಾರತಿ ಪ್ರಮುಖರಾದ ಕೊಡ್ಮಣ್ ಕಾಂತಪ್ಪ ಶೆಟ್ಟಿ, ಪ್ರಶಾಂತ್   ಕೆಂಪುಗುಡ್ಡೆ,ಜಗದೀಶ್ ಕಲ್ಲಡ್ಕ, ವಿನೋದ್ ಕುಮಾರ್ ಕೊಡ್ಮಾಣ್,ಸುರೇಶ್ ಬೆಂಜನಪದವು, ತಿರುಲೇಶ್ ಬೆಳ್ಳೂರು,ಚಂದ್ರ ಕುಲಾಲ್,ಕಮಾಲಾಕ್ಷ, ತಾಪಂ ಮಾಜಿ ಉಪಾಧ್ಯಕ್ಷ ಆನಂದ ಎ.ಶಂಭೂರು, ನರಿಕೊಂಬು ಗ್ರಾಮದ ಬಿಜೆಪಿ ಬೂತ್ ಸಮಿತಿಯ ಕೇಶವ,ದಿನೇಶ್  ಮೊದಲಾದವರು ಹಾಜರಿದ್ದರು. 

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಮೊದಲ ಗೌರವಧನ ಸೇವಾಭಾರತಿಗೆ ಸಮರ್ಪಿಸಿದ ನರಿಕೊಂಬು ಗ್ರಾಪಂ ಉಪಾಧ್ಯಕ್ಷ ಸಹಿತ ಆರು ಮಂದಿ ಸದಸ್ಯರು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*