ಸರ್ಕಾರಿ ಕಚೇರಿ

ಕೋವಿಡ್ ಪರಿಹಾರ – ಮಧ್ಯವರ್ತಿಗಳಿಗೆ ದಾಖಲಾತಿ ನೀಡಬೇಡಿ: ಕಾರ್ಮಿಕ ಇಲಾಖೆ ಸೂಚನೆ

ಬಂಟ್ವಾಳ: ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರಿಗೆ ಕೋವಿಡ್ ಪರಿಹಾರ ಘೋಷಣೆಯಾಗಿದ್ದು, ಈ ವಿಚಾರಕ್ಕೆಸಂಬಂಧಿಸಿ ಮಧ್ಯವರ್ತಿಗಳಿಗೆ ದಾಖಲಾತಿ ನೀಡಬೇಡಿ ಎಂದು ಕಾರ್ಮಿಕ ಇಲಾಖೆ ಸೂಚಿಸಿದೆ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಅಡಿಯಲ್ಲಿ ನೋಂದಾಯಿತವಾಗಿರುವ ಕಟ್ಟಡ ಕಾರ್ಮಿಕರಿಗೆ ಮತ್ತು  ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ವರ್ಗಕ್ಕೆ  ರಾಜ್ಯ ಸರ್ಕಾರ ಕೋವಿಡ್-19 ಪರಿಹಾರ  ಈಗಾಗಲೇ ಘೋಷಿಸಿದೆ. ಸಹಾಯಧನಕ್ಕಾಗಿ ಕಟ್ಟಡ ಕಾರ್ಮಿಕರಿಗೆ ತಲಾ ರೂ.3000ಗಳನ್ನು ಹಾಗೂ  ಕರ್ನಾಟಕ ರಾಜ್ಯ ಅಸಂಘಟಿತ ಭದ್ರತಾ ಮಂಡಳಿಯಡಿ ನೋಂದಾಯಿಸಿದ ಹಮಾಲರು, ಮನೆ ಕೆಲಸ, ಚಿಂದಿ ಆಯುವವರು,  ಮೆಕ್ಯಾನಿಕ್ ಗಳು, ಟೈಲರುಗಳು, ಅಕ್ಕಸಾಲಿಗರು, ಅಗಸರು, ಕಮ್ಮಾರರು, ಭಟ್ಟಿ ಕಾರ್ಮಿಕರು ಹಾಗೂ ಕ್ಷೌರಿಕರಿಗೆ ತಲಾ 2000 ರೂ. ಗಳ ಕೋವಿಡ್ -19 ಪರಿಹಾರ ಘೋಷಣೆ  ಮಾಡಿದೆ. ಈ ಪರಿಹಾರವನ್ನು  ನೇರವಾಗಿ ಡಿಬಿಟಿ ಮೂಲಕ ಅವರ ಖಾತೆಗೆ ಜಮೆ ಮಾಡಲು ಅವಕಾಶ ವಿರುವುದರಿಂದ ಕಾರ್ಮಿಕ ಇಲಾಖೆಯಿಂದ ಯಾವುದೇ ದಾಖಲಾತಿಗಳನ್ನು ನೀಡಲು ನಿರ್ದೇಶನ ನೀಡಿರುವುದಿಲ್ಲ. ಆದರೆ ಕೆಲವು ಮಧ್ಯವರ್ತಿಗಳು ಕಾರ್ಮಿಕರಿಂದ ಹಣ ಪಡೆದು ಗುರುತಿನ ಚೀಟಿ, ಆಧಾರ್ ಕಾರ್ಡ್,ಮತ್ತು ಭ್ಯಾಂಕ್ ಜೆರಾಕ್ಸ್ ಪ್ರತಿಗಳನ್ನು ಪಡೆಯುತ್ತಿರುವುದರ ಬಗ್ಗೆ  ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಅದ್ದರಿಂದ ಕಾರ್ಮಿಕರು ಯಾವುದೇ ದಾಖಲೆಗಳನ್ನು, ಅರ್ಜಿಯನ್ನು ಯಾವುದೇ ಮಧ್ಯವರ್ತಿಗಳಲ್ಲಾಗಲಿ ಆಥಾವ ಸಂಘಸಂಸ್ಥೆಯವರಲ್ಲಾಗಲಿ. ಸಿ ಎಸ್ ಸಿ ಸೆಂಟರ್ ಗಳಲ್ಲಾಗಲಿ ನೀಡಬಾರದೆಂದು ಕಾಮಿ೯ಕ ನಿರೀಕ್ಷಕರು, ಬಂಟ್ವಾಳ  ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ