Uncategorized

ಎಎಂಆರ್ ಡ್ಯಾಂನಿಂದ ನೀರು ಹೊರಕ್ಕೆ: ಎಚ್ಚರವಹಿಸಲು ಸೂಚನೆ

AMR DAM (File Photo)

ಬಂಟ್ವಾಳ: ಶಂಭೂರಿನ ಎಎಂಆರ್ ಡ್ಯಾಂ ನಿಂದ ಶೇಖರಿಸಲಾದ ನೀರನ್ನು ನಿಧಾನವಾಗಿ ನದಿಯ ಕೆಳಗೆ ಬಿಡಲಾಗುತ್ತಿದ್ದು, ನದಿ ತೀರ ವಾಸಿಗಳು ಮುಂಜಾಗರೂಕತೆ ಕ್ರಮ ಕೈಗೊಳ್ಳಬೇಕು ಎಂದು ಎಎಂಆರ್ ತಿಳಿಸಿದೆ.

ಶಂಭೂರಿನಲ್ಲಿರುವ ಎಎಂಆರ್ ಪವರ್ ಪ್ರೈವೇಟ್ ಲಿ. ಅಣೆಕಟ್ಟಿನ ಗೇಟಿನ ಹಾಗೂ ವಿದ್ಯುತ್ ಸ್ಥಾವರದ ವಾರ್ಷಿಕ ನಿರ್ವಹಣೆಗಾಗಿ ಜೂನ್ 3ರಿಂದ ಅಣೆಕಟ್ಟಿನಲ್ಲಿ ಶೇಖರಿಸಲಾದ ನೀರನ್ನು ನಿಧಾನವಾಗಿ ನದಿಯ ಕೆಳಗಡೆ ಬಿಡಲಾಗುತ್ತಿದೆ. ಆದ್ದರಿಂದ ಅಣೆಕಟ್ಟಿನ ಕೆಳಭಾಗದ ನೇತ್ರಾವತಿ ನದಿಯ ನೀರಿನ ಮಟ್ಟದಲ್ಲಿ ಅಲ್ಪಪ್ರಮಾಣದಲ್ಲಿ ಏರಿಳಿತವಾಗುವುದರಿಂದ ನದಿಯ ಇಕ್ಕೆಲಗಳಲ್ಲಿ ವಾಸಿಸುವ ಜನರಿಗೆ ಹಾಗೂ ಸಾಕುಪ್ರಾಣಿಗಳಿಗೆ ಮುಂಜಾಗರೂಕತಾ ಕ್ರಮವನ್ನು ವಹಿಸಿಕೊಳ್ಳಲು ಅಲ್ಲದೆ, ಅಣೆಕಟ್ಟಿನ ಮೇಲ್ಭಾಗದಲ್ಲಿ ನೀರಿನ ಮಟ್ಟ ಕೆಳಗಿಳಿಯುವುದರಿಂದ ಇಕ್ಕೆಲಗಳಲ್ಲಿ ಪಂಪು ಬಳಕೆದಾರರು ಮುಂಜಾಗ್ರತೆಯನ್ನು ಕೈಗೊಳ್ಳಲು ವಿನಂತಿಸಲಾಗಿದೆ.

ನರಿಕೊಂಬು, ಬಾಳ್ತಿಲ, ಸರಪಾಡಿ, ಕಡೇಶಿವಾಲಯ, ನಾವೂರ, ಸಜಿಪಮುನ್ನೂರು, ತುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿ ತೀರದ ಬಳಕೆದಾರರು ಈ ಕುರಿತು ಗಮನಹರಿಸಬೇಕು ಎಂದು ಎಎಂಆರ್ ಪ್ರಕಟಣೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ