ಬಂಟ್ವಾಳ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ವೈಭವದ ರಥೋತ್ಸವವನ್ನು ಸೇರಿದ್ದ ಸಾವಿರಾರು ಮಂದಿ ಕಣ್ತುಂಬಿಕೊಂಡರು. ಈ ವೇಳೆ ಸಿಡಿಮದ್ದುಗಳ ಚಿತ್ತಾಕರ್ಷಕ ಪ್ರದರ್ಶನವೂ ನಡೆಯಿತು.ಧ್ವಜಾರೋಹಣ, ಉತ್ಸವಬಲಿ, ಕಟ್ಟೆಪೂಜೆಬಳಿಕಬಟ್ಟಲುಕಾಣಿಕೆ ನೀಡುವುದರೊಂದಿಗೆ ಜಾತ್ರೆ ಆರಂಭಗೊಂಡಿತ್ತು. ನಿತ್ಯೋತ್ಸವಗಳ ಜೊತೆಗೆ ಕೇಪುವಿನಿಂದಶ್ರೀಮಲರಾಯದೈವದಭಂಡಾರಆಗಮಿಸಿ ಜಾತ್ರೆ ವೈಭವವನ್ನು ಇಮ್ಮಡಿಗೊಳಿಸಿತ್ತು. ಪ್ರತಿದಿನ ವಿವಿಧ ಉತ್ಸವಗಳು ನಡೆದ ಬಳಿಕ ಗುರುವಾರ ರಾತ್ರಿ ಮಹಾರಥೋತ್ಸವನಡೆಯಿತು. ಬೆಳಗ್ಗೆದರ್ಶನಬಲಿ, ರಾಜಾಂಗಣದಬಟ್ಲುಕಾಣಿಕೆ, ಪ್ರಸಾದವಿತರಣೆ,ಕಡಂಬುವಿನಿಂದಕೊಡಮಣಿತ್ತಾಯದೈವದಭಂಡಾರಕ್ಷೇತ್ರಕ್ಕೆಆಗಮನ, ರಾತ್ರಿಮಹಾರಥೋತ್ಸವಬೀದಿಮೆರವಣಿಗೆ, ಶಯನೋತ್ಸವನಡೆಯಿತು. ಅವಭೃತ ಸ್ನಾನ ಕೊಡಂಗಾಯಿಗೆ ಸವಾರಿ ಧ್ವಜಾವರೋಹಣ, ಸಂಪ್ರೋಕ್ಷಣೆ ಬಳಿಕ ಕೇಪುವಿನ ಶ್ರೀ ಮಲರಾಯ ದೈವಕ್ಕೆ ನೇಮೋತ್ಸವ ನಡೆಯಲಿದೆ.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to comment on "ವಿಟ್ಲ ಜಾತ್ರೆಯಲ್ಲಿ ವೈಭವದ ರಥೋತ್ಸವಕ್ಕೆ ಸಾಕ್ಷಿಯಾದ ಭಕ್ತರು"