ಬಂಟ್ವಾಳ : ಕರಾವಳಿಹಾಗೂ ದಕ್ಷಿಣ ಒಳನಾಡಿನ ಭಾಗ, ಬೆಂಗಳೂರು, ಮಂಗಳೂರಿನಲ್ಲಿಮಂಗಳವಾರ ಸಂಜೆ ವೇಳೆ ಭಾರಿ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ನಿಜವಾಗಿದ್ದು, ಮಂಗಳವಾರ ಸಂಜೆ ಸುಮಾರು 6ರ ಬಳಿಕ ತಾಲೂಕಿನ ಹಲವೆಡೆ ಗಾಳಿ, ಗುಡುಗು, ಸಿಡಿಲಿನ ಸಹಿತ ಮಳೆಯಾಗಿದೆ. ಭಾರಿ ಸೆಖೆ ಇದ್ದ ಪ್ರದೇಶಗಳಲ್ಲೀಗ ತಂಪಾದ ವಾತಾವರಣ ಮೂಡಿದ್ದರೆ, ಬೀದಿ ಬದಿಯಲ್ಲಿ ವ್ಯಾಪಾರ ನಡೆಸುವವರು ಬಸ್ ನಿಲ್ದಾಣಗಳಲ್ಲಿ ಕಾಯುವವರು ಸಮಸ್ಯೆ ಅನುಭವಿಸಬೇಕಾಯಿತು. ಮಳೆಯಿಂದಾಗಿ ಕೆಲವೆಡೆ ರಸ್ತೆ ಬದಿ ಹಾಕಿದ ಮಣ್ಣು ರಸ್ತೆಗೆ ಬಂದಿದ್ದು, ವಾಹನ ಸವಾರರೂ ರಾತ್ರಿ ವೇಳೆ ಜಾಗ್ರತೆಯಿಂದ ತೆರಳದೇ ಇದ್ದರೆ ಅಪಘಾತ ಭೀತಿ ಎದುರಿಸಬೇಕಾಗಬಹುದು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ ಸಹಿತ ಹಲವೆಡೆ ಗುಡುಗು, ಸಿಡಿಲಿನ ಮಳೆ"