ಬಂಟ್ವಾಳ: ಶ್ರೀ.ಕ್ಷೇತ್ರ.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಬಿ ಸಿ ಟ್ರಸ್ಟ್(ರಿ) ಬಂಟ್ವಾಳ ವತಿಯಿಂದ ಕಾಂಜಿರ ಕೋಡಿ ಎಂಬಲ್ಲಿ ಜ್ಞಾನ ದೀಪ – ಜ್ಞಾನ ವಿಕಾಸ ಕೇಂದ್ರದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಕಾಂಜಿರಕೋಡಿ ಸತೀಶ್ ಪೂಜಾರಿ ದೀಪ ಬೆಳಗಿಸಿ ಶುಭ ಹಾರೈಸುವ ಮೂಲಕ ಉದ್ಘಾಟಿಸಿದರು. ಬೆಳ್ತಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ವಿಭಾಗದ ಗೆಳತಿ ಆಪ್ತ ಸಮಾಲೋಚಕಿ ಚೈತನ್ಯ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಯೋಜನೆಯ ಬಂಟ್ವಾಳ ವಲಯಾಧ್ಯಕ್ಷ ವಸಂತ ಮೂಲ್ಯ, ಪ್ರಗತಿಪರ ಕೃಷಿಕ ಗೋಪಾಲ ನಾಯಕ್, ಕಾಂಜಿರ ಕೋಡಿ ಮನೆ ಯಜಮಾನಿ ವಾರಿಜಾ ತಿಮ್ಮಪ್ಪ, ಬಂಟ್ವಾಳ ವಲಯ ಮೇಲ್ವಿಚಾರಕಿ ಅಮಿತ ಉಪಸ್ಥಿತರಿದ್ದರು. ಜ್ಞಾನವಿಕಾಸ ಕೇಂದ್ರದ ಸದಸ್ಯೆಯರಾದ ಸುಷ್ಮಾ ನಿರೂಪಣೆಯಲ್ಲಿ ಲೀಲಾವತಿ ಸ್ವಾಗತಿಸಿದರು. ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಸಪ್ನಾ ವಂದಿಸಿದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಜ್ಞಾನದೀಪ – ಜ್ಞಾನ ವಿಕಾಸ ಕೇಂದ್ರದ ಪ್ರಥಮ ವಾರ್ಷಿಕೋತ್ಸವ"