ಜಿಲ್ಲಾ ಸುದ್ದಿ

ಹಿರಿಯ ಸಾಹಿತಿ ಫಕ್ರುದ್ದೀನ್ ಇರುವೈಲ್ ನಿಧನ

ಜಾಹೀರಾತು

ಮಂಗಳೂರು: ಕಥೆಗಾರ, ಕನ್ನಡ ಮತ್ತು ಬ್ಯಾರಿ ಕಥಾ ಜಗತ್ತನ್ನು‌‌ ಶ್ರೀಮಂತಗೊಳಿಸಿದ ಹಿರಿಯ ಸಾಹಿತಿ ಫಕ್ರುದ್ದೀನ್ ಇರುವೈಲ್ ಅವರು ಅನಾರೋಗ್ಯದಿಂದ ನಿಧನರಾದ್ದಾರೆ. ವೃತ್ತಿಯಲ್ಲಿ ಸಣ್ಣ ಸಿವಿಲ್ ಗುತ್ತಿಗೆದಾರರಾಗಿರುವ ಫಕ್ರುದ್ದೀನ್ ಇರುವೈಲು, 1985ರಿಂದೀಚೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದವರು. ಫಕೀರ್ ಮಹಮ್ಮದ್ ಕಟ್ಪಾಡಿ, ಬೊಳುವಾರು ಮಹಮ್ಮದ್ ಕುಂಞಿಯವರ ಬಳಿಕ ಫಕ್ರುದ್ದೀನ್ ಅವರು ಕನ್ನಡ ಕಥಾ ಜಗತ್ತಿನಲ್ಲಿ ಬ್ಯಾರಿ ಸಂವೇದನೆಯನ್ನು ದಟ್ಟವಾಗಿ ತಂದಿರುವ ಸಾಹಿತಿ. ಮೂಡುಬಿದಿರೆ ತಾಲೂಕಿನ ಇರುವೈಲ್ ಎಂಬ ಪುಟ್ಟ ಗ್ರಾಮದ ಪೂವಣಿಬೆಟ್ಟು ಎಂಬ ಹಳ್ಳಿಯಲ್ಲಿ ವಾಸವಾಗಿದ್ದ ಫಕ್ರುದ್ದೀನ್ ಇರುವೈಲು ಅವರ, ಮೊದಲ ಕಥಾ ಸಂಕಲನ ‘ಎಲ್ಲಿರುವೆ ನನ್ನ ಕಂದಾ’ 2001ರಲ್ಲಿ ನಡೆದ ಹನ್ನೆರಡನೇ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತ್ತು. ಆ ಬಳಿಕ ಅವರು ‘ಅಲೀಮಾ ಅಕ್ಷರ ಕಲಿತದ್ದು’, ‘ಅನಿರೀಕ್ಷಿತ’, ‘ನಾದಿರಾ’, ‘ಅವಸಾನ’, ‘ನೊಂಬಲ’  ಹೀಗೆ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2001ರಲ್ಲಿ ಅಲೀಮಾ ಅಕ್ಷರ ಕಲಿತದ್ದು ಕೃತಿಗೆ ಪ್ರತಿಷ್ಠಿತ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ದೊರಕಿತ್ತು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ