ಬಂಟ್ವಾಳ

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕಂಬದ ಅವಶೇಷ

ಜಾಹೀರಾತು

ಜಾಹೀರಾತು

ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಹೈ ಮಾಸ್ಟ್ ದೀಪಕ್ಕೆಂದು ಒಂದಾನೊಂದು ಕಾಲದಲ್ಲಿ ಹಾಕಲಾಗಿದ್ದ ಕಂಬದ ಅವಶೇಷವೀಗ ಅಪಾಯಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಬಸ್ ನಿಲ್ದಾಣಕ್ಕೆ ಬಸ್ಸುಗಳು ತಿರುಗುವ ಪ್ರದೇಶದಲ್ಲಿರುವ ಈ ಜಾಗದಲ್ಲೀಗ ಕಂಬವಿಲ್ಲ. ಅದನ್ನು ತೆಗೆಯಲಾಗಿದೆ. ಆದರೆ ಅದರ ಅವಶೇಷವನ್ನು ಗಮನಿಸದೇ ಇದ್ದರೆ ಅಪಾಯ ನಿಶ್ಚಿತ. ಈಗಾಗಲೇ ಹಲವರ ವಾಹನಗಳು ಇದಕ್ಕೆ ಗುದ್ದಿ ಸಾಕಷ್ಟು ಅನಾಹುತಗಳು ಸಂಭವಿಸಿವೆ. ವಾಹನಗಳು ಜಖಂಗೊಂಡು ಸಾವಿರಾರು ರೂಪಾಯಿ ಖರ್ಚಾಗಿವೆ. ಕತ್ತಲಲ್ಲಿ ಇಲ್ಲಿ ಈ ರೀತಿಯ ರಚನೆ ಇರುವುದೂ ಗೊತ್ತಾಗುವುದಿಲ್ಲ. ಈ ಕುರಿತು ಬಂಟ್ವಾಳ ಪುರಸಭೆ ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.