ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಆ.28 ಶುಕ್ರವಾರದಂದು ನಡೆಯಲಿರುವ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆಯನ್ನು ದೇಗುಲದಲ್ಲಿ ಶ್ರೀ ದೇವರ ನಿತ್ಯ ಪೂಜೆಯ ಬಳಿಕ ಕ್ಷೇತ್ರದ ಪ್ರಧಾನ ಅರ್ಚಕರಾದ ಶಂಕರನಾರಾಯಣ ಹೊಳ್ಳ ಅವರು ಬಿಡುಗಡೆಗೊಳಿಸಿದರು.
ಬೆಳಿಗ್ಗೆ 9.00ರಿಂದ 10.00 ಗಂಟೆಯವರೆಗೆ ಭಜನಾ ಸಂಕೀರ್ತನೆ, ಬೆಳಿಗ್ಗೆ ಗಂಟೆ 10.00ಕ್ಕೆ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಆರಂಭ, ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆಯ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ರಾಧಾಕೃಷ್ಣ ರೈ ಕೊಟ್ಟುಂಜ, ಪದ್ಮಪ್ಪ ಪೂಜಾರಿ ಹೆಗ್ಗಡೆಕೋಡಿ, ಹಿರಿಯರಾದ ಭಾರತಿ ಐತಾಳ್, ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಮಾಯ ಸುರೇಶ್ ಶೆಟ್ಟಿ ಹಾಲಾಡಿ, ಶುಭ ಸತೀಶ್ ಪೂಜಾರಿ ಬರೆ ಹಲ್ಲಂಗಾರು, ಪ್ರೇಮಲತಾ ಶೆಟ್ಟಿ ಕಲ್ಕೊಟ್ಟೆ , ಉಮಾವತಿ ಶೆಟ್ಟಿ ಪಡ್ಡಾಯಿಬೆಟ್ಟು, ವಿಜಯ ರೈ ಹಾಲಾಡಿ, ರೋಹಿಣಿ ಕಡವಿನಬಳಿ, ತೇಜವತಿ ಮಠದಬೆಟ್ಟು , ಸುಮತಿ ಹೊಸಮನೆ, ಇಂದಿರಾ ಕಲ್ಕೊಟ್ಟೆ, ರಾಧಾಕೃಷ್ಣ ಅಲ್ಲಿಪಾದೆ, ಹರೀಶ್ ಶೆಟ್ಟಿ ಪಡ್ಡಾಯಿಬೆಟ್ಟು ಹಾಗೂ ಮತ್ತಿತರರು ಉಪಸ್ಥಿತರಿದ್ದರು.