ಕವರ್ ಸ್ಟೋರಿ

WEEKEND COVID REPORT: 21 ದಿನಗಳಲ್ಲಿ 3,517 ಹೊಸ ಪ್ರಕರಣ, 1,611 ಡಿಸ್ಚಾರ್ಜ್

ಜಾಹೀರಾತು

 ಬಂಟ್ವಾಳನ್ಯೂಸ್ ಓದುಗರನೇಕರು ಹೇಳುತ್ತಿದ್ದರು. ಎಲ್ಲ ದೃಶ್ಯ ಮಾಧ್ಯಮಗಳು, ಸೋಶಿಯಲ್ ಮೀಡಿಯಾಗಳಲ್ಲೂ ಕೊರೊನಾದ್ದೇ ಸುದ್ದಿ. ಹೀಗಾಗಿ ಮತ್ತೆ ಅದನ್ನೇ ನಿಮ್ಮ ವೆಬ್ ಪತ್ರಿಕೆಯಲ್ಲಿ ಬಿತ್ತರಿಸಬೇಡಿ ಎಂಬ ಆಗ್ರಹ ಅವರದ್ದು. ಒಂದು ರೀತಿಯಲ್ಲಿ ಈ ವಿಷಯ ಸರಿ. ಹೀಗಾಗಿ ವಿಶೇಷ ಘಟನೆ ಏನೂ ಸಂಭವಿಸದೇ ಇದ್ದಲ್ಲಿ (ಹಾಗಾಗುವುದು ಬೇಡ) ವಾರಾಂತ್ಯಕ್ಕೆ ಒಂದು ತಿಂಗಳ ಕೊರೊನಾ ಕುರಿತ ಜಿಲ್ಲಾ ಮಾಹಿತಿಯನ್ನಷ್ಟೇ ಇಲ್ಲಿ ಕೊಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,000 ದಾಟಿದ್ದು ಜುಲೈ 4. ಪ್ರತಿ ವಾರವೂ ಸರಾಸರಿ 1 ಸಾವಿರದಷ್ಟು ಹೊಸ ಪ್ರಕರಣಗಳು ಬರುತ್ತಿದ್ದರೆ, ಅಷ್ಟೇ ಸಂಖ್ಯೆಯಲ್ಲಿ ಡಿಸ್ಚಾರ್ಜ್ ಆಗುತ್ತಿರುವುದು ಗಮನಾರ್ಹ. ವಿವರಗಳು ಇಲ್ಲಿವೆ ನೋಡಿ.

ದಿನಾಂಕ – ಜುಲೈ 4, 2020

ಕೊರೊನಾ ಹಿನ್ನೆಲೆಯಲ್ಲಿ ಗಂಟಲು ದ್ರವ ಮಾದರಿ ಪರೀಕ್ಷೆ ನೀಡಿದವರ ಸಂಖ್ಯೆ: 15,270. ಪಾಸಿಟಿವ್ 1095.  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ 75. ಒಟ್ಟು ಸೋಂಕಿತರ ಸಂಖ್ಯೆ 1095. ಚಿಕಿತ್ಸೆ ಪಡೆಯುತ್ತಿರುವವರು 557. ಗುಣಮುಖರಾಗಿ ಹೊರಗೆ ಬಂದವರು 516.

ಜಾಹೀರಾತು

ದಿನಾಂಕ – ಜುಲೈ 11, 2020

ದಕ್ಷಿಣ ಕನ್ನಡದಲ್ಲಿ ಒಟ್ಟು ಪರೀಕ್ಷೆ ನೀಡಿದವರು 22,832. ಪಾಸಿಟಿವ್ 2,034. ಜುಲೈ 11ರಂದು ಸೋಂಕಿತರು 186. ಚಿಕಿತ್ಸೆ ಬಳಿಕ ಮನೆಗೆ ತೆರಳಿದವರು 782. 

ದಿನಾಂಕ  ಜುಲೈ 18, 2020

ಜಾಹೀರಾತು

ದಕ್ಷಿಣ ಕನ್ನಡದಲ್ಲಿ ಒಟ್ಟು ಪರೀಕ್ಷೆ ನೀಡಿದವರು 26,368. ಪಾಸಿಟಿವ್ 3,311. ಜುಲೈ 18ರಂದು ಸೋಂಕಿತರು 237. ಚಿಕಿತ್ಸೆ ಬಳಿಕ ಮನೆಗೆ ತೆರಳಿದವರು 1387. 

ದಿನಾಂಕ  ಜುಲೈ 25 2020

ದಕ್ಷಿಣ ಕನ್ನಡದಲ್ಲಿ ಒಟ್ಟು ಪರೀಕ್ಷೆ ನೀಡಿದವರು 32,822. ಪಾಸಿಟಿವ್ 4,612. ಜುಲೈ 25ರಂದು ಸೋಂಕಿತರು 218. ಚಿಕಿತ್ಸೆ ಬಳಿಕ ಮನೆಗೆ ತೆರಳಿದವರು 2127. .

ಜಾಹೀರಾತು

ಒಂದು ವಾರದಲ್ಲಿ ಏನೇನಾಯಿತು?

ಒಂದು ವಾರದಲ್ಲಿ ಪರೀಕ್ಷೆ ನೀಡಿದವರು 6454. ಒಂದು ವಾರದಲ್ಲಿ ಪಾಸಿಟಿವ್ ಕೇಸ್ 1,301. ಚಿಕಿತ್ಸೆ ಬಳಿಕ ಮನೆಗೆ  ತೆರಳಿದವರು 740. ಕಳೆದ ವಾರಕ್ಕಿಂತ ಈ ವಾರ ಜಾಸ್ತಿ ಮಂದಿ ತಪಾಸಣೆ ಕೈಗೊಂಡಿದ್ದಾರೆ.

21 ದಿನಗಳ ಲೆಕ್ಕ:

ಜಾಹೀರಾತು

ಕಳೆದ 21 ದಿನಗಳಲ್ಲಿ 3,517 ಹೊಸ ಪ್ರಕರಣಗಳು ದಾಖಲಾಗಿವೆ. ಇವರ ಪೈಕಿ 1,611 ಡಿಸ್ಚಾರ್ಜ್ ಆಗಿದೆ. ಜುಲೈ 4ರಂದು ಮೃತಪಟ್ಟವರ ಸಂಖ್ಯೆ ಜಿಲ್ಲಾಡಳಿತ ನೀಡಿದ ಪಟ್ಟಿಯಂತೆ 22 ಆಗಿತ್ತು. ಆದರೆ ಇದೀಗ ಕೋವಿಡ್ ಸೋಂಕಿತರು ಮೃತಪಟ್ಟರೂ, ಮರಣದ ಕಾರಣ ನಿರ್ಧರಿಸಲು ಜಿಲ್ಲಾ ಮಟ್ಟದ ತಜ್ಞರ ಸಮಿತಿ ವರದಿ ನೀಡಬೇಕಾಗಿರುವ ಕಾರಣದಿಂದಾಗಿ ಒಂದು ವಾರದಿಂದೀಚೆಗೆ ಮೃತಪಟ್ಟವರ ಒಟ್ಟು ಸಂಖ್ಯೆಯನ್ನು ಜಿಲ್ಲಾಡಳಿತ ಪ್ರಕಟಿಸುತ್ತಿಲ್ಲ. ಆದರೆ ಹೊರಡಿಸಿದ ಪಟ್ಟಿಯನ್ನು ಗಮನಿಸಿದರೆ, ಇದುವರೆಗೆ ಸುಮಾರು 115ರಷ್ಟು ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಅಂದರೆ ಈ ತಿಂಗಳಲ್ಲೇ ಸುಮಾರು 80ರಷ್ಟು ಮಂದಿ ಸಾವನ್ನಪ್ಪಿದವರಿಗೆ ಕೊರೊನಾ ಪಾಸಿಟಿವ್ ಇತ್ತು. ಶನಿವಾರ ಒಂದೇ ದಿನ  8 ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಮಂಗಳೂರಿನ 6 ಗಂಡಸರು,ಓರ್ವ ಮಹಿಳೆ,ಮಂಜೇಶ್ವರದ ಓರ್ವ ಮಹಿಳೆ ಸೇರಿದ್ದಾರೆ. ಮಂಗಳೂರು ನಿವಾಸಿಗಳಾದ 67,68,69,75,78 ಹಾಗೂ 88 ವರ್ಷದ ಗಂಡಸರು,76 ವರ್ಷದ ಓರ್ವ ವೃದ್ಧ ಮಹಿಳೆ. ಕಾಸರಗೋಡಿನ‌ ಮಂಜೇಶ್ವರ ನಿವಾಸಿ 53 ವರ್ಷದ ‌ಮಹಿಳೆ ಮೃತಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.