ವಿಹಿಂಪ, ಬಜರಂಗದಳ ಸದಸ್ಯರಿಂದ ಹಡೀಲು ಬಿದ್ದ ಗದ್ದೆ ವ್ಯವಸಾಯ

ಜಾಹೀರಾತು

ಹಡೀಲು ಬಿದ್ದ ಗದ್ದೆ ವ್ಯವಸಾಯ ಮಾಡುವ ಮೂಲಕ ಅಜಿಲಮೊಗರುವಿನ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಸಂಘಟನೆ ಯುವಕರಿಗೆ ಪ್ರೇರಣಾದಾಯಿ ಕಾರ್ಯವನ್ನು ನಡೆಸಿತು. ಹಲವಾರು ವರ್ಷಗಳಿಂದ ಹಡೀಲು ಬಿದ್ದಿರುವ ಸರಪಾಡಿಯ ಗದ್ದೆಯೊಂದನ್ನು ಮಾಲಕರಿಂದ ಉಚಿತವಾಗಿ ಪಡೆದು ಭತ್ತದ ಕೃಷಿ ಕಾರ್ಯವನ್ನು ಸಂಘಟನೆ ನಡೆಸಿದೆ. ಭತ್ತದ ಕೃಷಿ ಮಾಡಿ ಫಸಲನ್ನು ಸಮಾಜದ ಬಡವರ್ಗದ ಜನರಿಗೆ ನೀಡುವ ಉದ್ದೇಶದಿಂದ ಸಂಘಟನೆ ಮುಂದಾಗಿದೆ. ವಿಶ್ವ ಹಿಂದು ಪರಿಷತ್ತ್ ಭಜರಂಗದಳ ಜೈ ಹನುಮಾನ್ ಶಾಖೆ ಅಜಿಲಮೊಗರು ಸದಸ್ಯರು ಈ ಕಾರ್ಯ ಮಾಡಿದರು.

ಬಡಜನರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಸಂಘಟನೆಯ ಪ್ರಮುಖರು ಸರಪಾಡಿಯಲ್ಲಿ ಅನೇಕ ವರ್ಷಗಳಿಂದ ಹಡೀಲು ಬಿದ್ದಿದ್ದ  ನವೀನ್ ಶಾಂತಿ ಎಂಬವರ 4 ಮುಡಿ ಹಡೀಲು ಗದ್ದೆಯನ್ನು ಉಚಿತವಾಗಿ ಪಡೆದು ನೇಜಿ ಕೃಷಿ ಮಾಡಿದರು. ಈ ಗದ್ದೆಯಲ್ಲಿ ಬರುವ ಅಕ್ಕಿ ಯನ್ನು  ಕಡುಬಡವರಿಗೆ ವಿತರಿಸುವುದು ಹಾಗೂ  ಬೈ ಹುಲ್ಲನ್ನು ಗೋಶಾಲೆಗೆ ನಿಡುದೆಂದು ತೀರ್ಮಾನಿಸಿದರು. ಜಿಲ್ಲಾ ಸ.ಸಂಚಾಲಕ್ ಗುರುರಾಜ್ ಬಂಟ್ವಾಳ್, ಪ್ರಖಂಡ ಸಂಚಾಲಕ್ ಶಿವಪ್ರಸಾದ್ ತುಂಬೆ, ಪ್ರಖಂಡ ಸಹ.ಸಂಚಾಲಕ್ ಸಂತೋಷ್ ಕುಲಾಲ್, ಪ್ರಗತಿಪರ ಕೃಷಿಕರಾದ ಪುರುಷೋತ್ತಮ ಪೂಜಾರಿ ಮಜಲು ಹಾಗೂ ಸ್ಥಳ ದಾನಿಗಳು ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ವಿಹಿಂಪ, ಬಜರಂಗದಳ ಸದಸ್ಯರಿಂದ ಹಡೀಲು ಬಿದ್ದ ಗದ್ದೆ ವ್ಯವಸಾಯ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*