ಜಾಹೀರಾತು
ಬಂಟ್ವಾಳ ತಾಲೂಕಿನ ಮನೆಯೊಂದಕ್ಕೆ ಗುರುವಾರ ಬಂದ ಹೆಬ್ಬಾವಿನ ಬಣ್ಣ ಬಿಳಿ. ಗುರುವಾರ ಕಾವಳಕಟ್ಟೆ ಎಂಬಲ್ಲಿ ನೌಶಾದ್ ಎಂಬವರ ಮನೆಯೊಂದಕ್ಕೆ ಬಿಳಿ ಬಣ್ಣದ ಹೆಬ್ಬಾವು ನುಗ್ಗಿತು. ಗಲಿಬಿಲಿಗೊಂಡ ಮನೆಯವರು ಕೂಡಲೇ ಅವರ ಸ್ನೇಹಿತ ಆಶೀಫ್ ಅವರಿಗೆ ಕರೆ ಮಾಡಿದಾಗ ಅವರು ಉರಗತಜ್ಞ ಸ್ನೇಕ್ ಕಿರಣ್ ಅವರನ್ನು ಸಂಪರ್ಕಿಸಿದರು. ಕೂಡಲೇ ಆಗಮಿಸಿದ ಸ್ನೇಕ್ ಕಿರಣ್ ಸ್ನೇಹಿತರಾದ ನಿತ್ಯಪ್ರಕಾಶ್ ಬಂಟ್ವಾಳ, ಶ್ರೀಪ್ರಸಾದ್ ಜೊತೆ ಅದನ್ನು ಹಿಡಿದು ವಲಯಾರಣ್ಯಾಧಿಕಾರಿ ಶ್ರೀಧರ್ ಅವರಿಗೆ ನೀಡಿದ್ದು, ಅದನ್ನು ಬಳಿಕ ಸುರಕ್ಷಿತವಾಗಿ ಮಂಗಳೂರು ಪಿಲಿಕುಳ ನಿಸರ್ಗಧಾಮಕ್ಕೆ ಬಿಡಲಾಯಿತು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕಾವಳಕಟ್ಟೆಯಲ್ಲಿ ಕಂಡಿತು ಅಚ್ಚ ಶ್ವೇತವರ್ಣದ ಹೆಬ್ಬಾವು!!"