ದುಬೈನಿಂದ ಬಂದವರಲ್ಲಿ ಪತ್ತೆಯಾಯಿತು ಕೊರೊನಾ ಸೋಂಕು, ಕ್ವಾರಂಟೈನ್ ಕಟ್ಟುನಿಟ್ಟು

ಜಾಹೀರಾತು

ಮಂಗಳವಾರ ಆಗಮಿಸಿದವರೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 16 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರಲ್ಲಿ 15 ಮಂದಿ ದುಬೈನಿಂದ ಬಂದವರು. ಒಬ್ಬರು ಸುರತ್ಕಲ್ ಗ್ರಾಮದ ಮಹಿಳೆ. ದುಬೈನಿಂದ ಆಗಮಿಸಿದ ಮೂರು ಸದಸ್ಯರ ಕುಟುಂಬವೊಂದರ 6 ವರ್ಷದ ಬಾಲಕಿಗೂ ಸೋಂಕು ದೃಢಪಟ್ಟಿದೆ. ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕನ್ನಡಿಗರು ಮಂಗಳೂರಿನ ವಿವಿಧ ಹೊಟೇಲ್ ಸೇರಿದಂತೆ 10 ಕ್ವಾರಂಟೈನ್ ಕೇಂದ್ರಗಳಲ್ಲಿ ನಿಗಾದಲ್ಲಿರಿಸಲಾಗಿದೆ. ಅವರು ಕೇಂದ್ರದಿಂದ ಹೊರಬರದೆ ಕ್ವಾರಂಟೈನ್ ನಿಯಮ ಪಾಲಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 15 ಮಂದಿಯಲ್ಲಿ ಒಬ್ಬರು ಉತ್ತರ ಕನ್ನಡ ಜಿಲ್ಲೆಯ ನಿವಾಸಿ. ಸೋಂಕು ದೃಢಪಟ್ಟ ಸುರತ್ಕಲ್‍ನ ನಿವಾಸಿ ಸೇರಿದಂತೆ ಎಲ್ಲರನ್ನೂ ನಗರದ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ  ಸೋಂಕಿತ 15 ಮಂದಿಯಲ್ಲಿ ಒಂದೇ ಕುಟುಂಬದ ಮೂವರಿಗೆ ಸೋಂಕು ದೃಢಗೊಂಡಿದೆ. 45ರ ಹರೆಯದ ಪತಿ 33ರ ಹರೆಯದ ಪತ್ನಿ ಹಾಗೂ 6 ವರ್ಷದ ಬಾಲೆಗೂ ಸೋಂಕು ತಗಲಿದೆ. ಸೋಂಕಿತರಲ್ಲಿ 5 ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದಾರೆ ಎಂದರು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೇ 12ರಂದು ಆಗಮಿಸಿದ ವಿಮಾನದಲ್ಲಿ 179 ಮಂದಿ ಪ್ರಯಾಣಿಕರಲ್ಲಿ 125 ಮಂದಿ ದ.ಕ. ಜಿಲ್ಲೆಯಲ್ಲಿ ಕ್ವಾರಂಟೈನ್‍ಗೊಳಗಾಗಿದ್ದು, ಉಡುಪಿಯ 49 ಮಂದಿ ಅಲ್ಲಿಗೆ ತೆರಳಿ ಕ್ವಾರಂಟೈನ್‍ಗೊಳಪಟ್ಟಿದ್ದಾರೆ. ಇದೇ ವೇಳೆ ಉತ್ತರ ಕನ್ನಡದ 5 ಮಂದಿ ಆ ಜಿಲ್ಲೆಗೆ ತೆರಳಿ ಕ್ವಾರಂಟೈನ್‍ಗೊಳಪಟ್ಟಿದ್ದಾರೆ ಎಲ್ಲ ಹೋಟೆಲ್ ಗಳಲ್ಲಿ ಸಿಸಿ ಕ್ಯಾಮರಾ ಹಾಕಲಾಗಿದೆ. ಕ್ವಾರಂಟೈನ್ ಯಾರೂ ಉಲ್ಲಂಘಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರಥಮ ವಿಮಾನದಲ್ಲಿ ಬಂದವರಲ್ಲಿ ಬಹುತೇಕರು ವೈದ್ಯಕೀಯ ಅಗತ್ಯಗಳಿದ್ದವರು, ಗರ್ಭಿಣಿಯರಿದ್ದರು. ಸೋಂಕಿತರಲ್ಲಿ ಗರ್ಭಿಣಿಯರು ಸೇರಿಲ್ಲ ಎಂದರು. ಕೋವಿಡ್ ನೋಡಲ್ ಅಧಿಕಾರಿ ಗಾಯತ್ರಿ ನಾಯಕ್, ಡಿಎಚ್ ಒ ರಾಮಚಂದ್ರ ಬಾಯರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

For More news Join BANTWALNEWS  Watsapp Group

https://chat.whatsapp.com/GX45mPIvBYmC0f8LI6Ytsf

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ದುಬೈನಿಂದ ಬಂದವರಲ್ಲಿ ಪತ್ತೆಯಾಯಿತು ಕೊರೊನಾ ಸೋಂಕು, ಕ್ವಾರಂಟೈನ್ ಕಟ್ಟುನಿಟ್ಟು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*